ಲಕ್ನೋ: ಭಯೋತ್ಪಾದಕರು ಸೈಕಲ್ಗಳನ್ನು ಆಯ್ಕೆ ಮಾಡುತ್ತಾರೆ ಎಂದು ಉತ್ತರಪ್ರದೇಶದಲ್ಲಿ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಈ ಹೇಳಿಕೆಗೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ತಿರುಗೇಟು ನೀಡಿ ಟ್ವೀಟ್ ಮಾಡಿದ್ದಾರೆ.
ಸೈಕಲ್ಗೆ ಮಾಡಿದ ಅವಮಾನ ಇಡೀ ರಾಷ್ಟ್ರಕ್ಕೆ ಮಾಡಿದ ಅವಮಾನವಾಗಿದೆ. ಸಾಮಾನ್ಯರ ಸವಾರಿ ಮತ್ತು ಹಳ್ಳಿಗಳ ಹೆಮ್ಮೆಯಾಗಿದೆ ನಮ್ಮ ಪಕ್ಷದ ಚಿಹ್ನೆ ಸೈಕಲ್ ಎಂದು ಅಖಿಲೇಶ್ ಯಾದವ್ ಮೋದಿ ಹೇಳಿಕೆ ವಿರುದ್ಧ ಕಿಡಿಕಾರಿದ್ದಾರೆ.
ಟ್ವೀಟ್ನಲ್ಲಿ ಏನಿದೆ?: ಸೈಕಲ್ ರೈತರನ್ನು ಅವರ ಹೊಲಗಳಿಗೆ ಸಂಪರ್ಕಿಸುತ್ತದೆ, ಸಮೃದ್ಧಿಯ ಅಡಿಪಾಯವನ್ನು ಹಾಕುತ್ತದೆ. ಸೈಕಲ್ ನಮ್ಮ ಹೆಣ್ಣುಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತದೆ, ಸಾಮಾಜಿಕ ನಿರ್ಬಂಧಗಳನ್ನು ಮೀರಿದೆ, ಅದು ಹಣದುಬ್ಬರದಿಂದ ಅಸ್ಪೃಶ್ಯವಾಗಿ ಮುನ್ನಡೆಯುತ್ತದೆ. ಸೈಕಲ್ ಸಾಮಾನ್ಯರ ಸವಾರಿ, ಗ್ರಾಮೀಣ ಭಾರತದ ಹೆಮ್ಮೆ. ಸೈಕಲ್ಗೆ ಮಾಡಿದ ಅವಮಾನ ಇಡೀ ರಾಷ್ಟ್ರಕ್ಕೆ ಮಾಡಿದ ಅವಮಾನ ಎಂದು ಅಖಿಲೇಶ್ ಯಾದವ್ ಟ್ವೀಟ್ ಮಾಡಿದ್ಧಾರೆ.
खेत और किसान को जोड़ कर उसकी समृद्धि की नींव रखती है, हमारी साइकल,
सामाजिक बंधनों को तोड़ बिटिया को स्कूल छोड़ती है, हमारी साइकल
महंगाई का उसपर असर नहीं, वो सरपट दौड़ती है, हमारी साइकल,
साइकल आम जनों का विमान है, ग्रामीण भारत का अभिमान है, साइकल का अपमान पूरे देश का अपमान है। pic.twitter.com/Nf1Bq2XtjE
— Akhilesh Yadav (@yadavakhilesh) February 20, 2022
ಮೋದಿ ಹೇಳಿದ್ದೇನು?: ಕೆಲವು ರಾಜಕೀಯ ಪಕ್ಷಗಳು ಭಯೋತ್ಪಾದಕರ ಬಗ್ಗೆ ಮೃದು ಧೋರಣೆ ಅನುಸರಿಸುತ್ತಿವೆ. ಮೊದಲು ನಡೆದ ಸ್ಫೋಟಗಳಲ್ಲಿ ಬಾಂಬ್ಗಳನ್ನು ಸೈಕಲ್ಗಳಲ್ಲಿ ಇರಿಸಲಾಗಿತ್ತು. ಭಯೋತ್ಪಾದಕರು ಏಕೆ ಸೈಕಲ್ಗಳನ್ನು ಆರಿಸಿಕೊಂಡರು ಎಂದು ನಾನು ಆಶ್ಚರ್ಯ ಪಡುತ್ತೇನೆ ಎಂದು ಪ್ರಧಾನಿ ಟೀಕಿಸಿದ್ದರು. 2006 (ವಾರಣಾಸಿ) ಮತ್ತು ಅಯೋಧ್ಯೆ ಮತ್ತು ಲಕ್ನೋ (2007) ಸ್ಫೋಟಗಳಲ್ಲಿ ಆರೋಪಿಗಳ ವಿರುದ್ಧದ ಪ್ರಕರಣಗಳನ್ನು ಸಮಾಜವಾದಿ ಪಕ್ಷ ಹಿಂಪಡೆದಿದೆ ಎಂದು ಅವರು ಆರೋಪಿಸಿದರು.
ಉತ್ತರ ಪ್ರದೇಶಯಲ್ಲಿ ನಡೆದ ಭಯೋತ್ಪಾದನಾ ದಾಳಿಗೆ ಸಂಬಂಧಿಸಿದ 14 ಪ್ರಕರಣಗಳಲ್ಲಿ ಸಮಾಜವಾದಿ ಸರ್ಕಾರವು ಅನೇಕ ಭಯೋತ್ಪಾದಕರ ವಿರುದ್ಧದ ಪ್ರಕರಣಗಳನ್ನು ಹಿಂತೆಗೆದುಕೊಳ್ಳುವಂತೆ ಆದೇಶಿಸಿದೆ. ಈ ಜನರು ಸ್ಫೋಟಗಳಲ್ಲಿ ತೊಡಗಿದ್ದರು ಮತ್ತು ಸಮಾಜವಾದಿ ಸರ್ಕಾರವು ಈ ಭಯೋತ್ಪಾದಕರ ವಿರುದ್ಧ ಕಾನೂನು ಕ್ರಮ ಜರುಗಿಸಲು ಅವಕಾಶ ನೀಡಲಿಲ್ಲ. ಅದು ಸಮಾಜವಾದಿ ಪಕ್ಷದ ರಿಟರ್ನ್ ಗಿಫ್ಟ್ ಆಗಿದೆ ಎಂದು ಮೋದಿ ಕಿಡಿಕಾರಿದ್ದಾರೆ.