ಬೆಂಗಳೂರು: ಇಂದು ರಿಯಲ್ ಸ್ಟಾರ್ ಉಪೇಂದ್ರ ಅವರ ಫ್ಯಾನ್ಸ್ ಟ್ವಿಟ್ಟರ್ ನಲ್ಲಿ ಟ್ರೆಂಡ್ ಕ್ರಿಯೇಟ್ ಮಾಡೋದಕ್ಕೆ ಹೊರಟಿದ್ದಾರೆ.
ಉಪೇಂದ್ರ ಅವರಿಗಿರುವ ರಾಜಕೀಯ ಚಿಂತನೆ ಮತ್ತು ವಿಚಾರಧಾರೆಗಳನ್ನು ಇಟ್ಟುಕೊಂಡು ಟ್ರೆಂಡ್ ಮಾಡಲು ಮುಂದಾಗಿದ್ದಾರೆ. ಇಂದು ಬೆಳಗ್ಗೆ 04 ಗಂಟೆಯಿಂದ ರಾತ್ರಿ 12 ಗಂಟೆವರೆಗೂ ಟ್ವಿಟ್ಟರ್ ಟ್ರೆಂಡ್ ಮಾಡಲಿರುವ ಉಪ್ಪಿ ಫ್ಯಾನ್ಸ್, ಟ್ರೋಲ್ ಪೇಜ್, ಉತ್ತಮ ಪ್ರಜಾಕೀಯ ಪಕ್ಷದ ಬೆಂಬಲಿಗರು ಈ ಟ್ರೆಂಡ್ನಲ್ಲಿ ಭಾಗಿಯಾಗುತ್ತಿದ್ದಾರೆ.
ಸತ್ ಪ್ರಜೆ….
ದೇಶವನ್ನೇ ತನ್ನ ಮನೆ ಎಂದು ನೂರ್ಕಾಲ ನಡೆಸಿದ್ದ ರಾಜಮಹಾರಾಜರನ್ನು ಕೆಳಗಿಳಿಸಿ,
ಪ್ರಜೆಯೇ ಪ್ರಭುವೆಂದು ಮೂರ್ಕಾಲಕ್ಕೊಬ್ಬ ಪ್ರಜೆಯನ್ನು ಪ್ರಭು ಮಾಡಿ,
ಪ್ರಜಾಪ್ರಭುತ್ವದ ನಿಜ ಸತ್ವ ನೀ ರಾಜನೆಂಬುದ ಮರೆತೆಯಲ್ಲೊ ಕಣ್ಮುಚ್ಚಿ ಹಾಲ್ಕುಡಿವ ಮಾರ್ಜಾಲ !!! #UPPforKARNATAKA
— Upendra (@nimmaupendra) October 12, 2019
#UPPforKARNATAKA ಎಂಬ ಹ್ಯಾಶ್ಟ್ಯಾಗ್ ಬಳಸಿ ಟ್ವಿಟ್ಟರ್ ಟ್ರೆಂಡ್ ಕ್ರಿಯೇಟ್ ಮಾಡಲು ಉಪ್ಪಿ ಅಭಿಮಾನಿಗಳು ರೆಡಿಯಾಗಿದ್ದಾರೆ. ಉಪೇಂದ್ರ ಫ್ಯಾನ್ಸ್ ಗಳ ಈ ಒಂದು ಪ್ರಯತ್ನಕ್ಕೆ ಪ್ರಿಯಾಂಕ ಉಪೇಂದ್ರ ಕೂಡ ಸಾಥ್ ನೀಡುತ್ತಿದ್ದಾರೆ. ಟ್ವಿಟ್ಟರ್ ನಲ್ಲಿ ಉಪೇಂದ್ರ ಟ್ರೆಂಡ್ ಬಗ್ಗೆ ಮಾಹಿತಿಯನ್ನು ಶೇರ್ ಮಾಡಿಕೊಂಡಿದ್ದಾರೆ.
ಈ ವಿಚಾರವಾಗಿ ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ಉಪ್ಪಿ ಸತ್ ಪ್ರಜೆ, ದೇಶವನ್ನೇ ತನ್ನ ಮನೆ ಎಂದು ನೂರ್ಕಾಲ ನಡೆಸಿದ್ದ ರಾಜಮಹಾರಾಜರನ್ನು ಕೆಳಗಿಳಿಸಿ. ಪ್ರಜೆಯೇ ಪ್ರಭುವೆಂದು ಮೂರ್ಕಾಲಕ್ಕೊಬ್ಬ ಪ್ರಜೆಯನ್ನು ಪ್ರಭು ಮಾಡಿ. ಪ್ರಜಾಪ್ರಭುತ್ವದ ನಿಜ ಸತ್ವ ನೀ ರಾಜನೆಂಬುದ ಮರೆತೆಯಲ್ಲೊ ಕಣ್ಮುಚ್ಚಿ ಹಾಲ್ಕುಡಿವ ಮಾರ್ಜಾಲ ಎಂದು ಟ್ವೀಟ್ ಮಾಡಿದ್ದಾರೆ.
ಸತ್ ಪ್ರಜೆ
ಅವನಾರಡಿ ನೀನಾರಡಿ !
ಅವತಿನ್ನುವುದು ಅನ್ನ, ನೀ ತಿನ್ನುವುದೂ ಅನ್ನ !!
ಪಂಚೇಂದ್ರಿಯಗಳು ಅವನಿಗುಂಟು ನಿನಗೂ ಉಂಟು !!!
ಎಲ್ಲ ಸಮ ಎಂದು ಹುಟ್ಟಿಸಿದ ಆ ನಿನ್ನಪ್ಪ ????????????
ನೀ ಮಾತ್ರ ಆ ನಾಯಕ ಈ ನಾಯಕನಿಗೆ ನಾ ಭಕ್ತ ನಾ ಗುಲಾಮ ಅಂತ ಕುಂತ್ಯಲೋ ಬೆಪ್ಪ ☹️☹️ #UPPforKARNATAKA
— Upendra (@nimmaupendra) October 12, 2019
ಇದರ ಜೊತೆಗೆ ಇನ್ನೊಂದು ಟ್ವೀಟ್ ಮಾಡಿರುವ ಉಪ್ಪಿ, ಸತ್ ಪ್ರಜೆ, ಅವನಾರಡಿ ನೀನಾರಡಿ! ಅವತಿನ್ನುವುದು ಅನ್ನ, ನೀ ತಿನ್ನುವುದೂ ಅನ್ನ. ಪಂಚೇಂದ್ರಿಯಗಳು ಅವನಿಗುಂಟು ನಿನಗೂ ಉಂಟು. ಎಲ್ಲ ಸಮ ಎಂದು ಹುಟ್ಟಿಸಿದ ಆ ನಿನ್ನಪ್ಪ. ನೀ ಮಾತ್ರ ಆ ನಾಯಕ ಈ ನಾಯಕನಿಗೆ ನಾ ಭಕ್ತ ನಾ ಗುಲಾಮ ಅಂತ ಕುಂತ್ಯಲೋ ಬೆಪ್ಪ ಎಂದು ತಮ್ಮದೇ ಶೈಲಿಯಲ್ಲಿ ಟ್ವೀಟ್ ಮಾಡಿದ್ದಾರೆ.
#UPPforKARNATAKA pic.twitter.com/xbpesOMKEh
— Upendra (@nimmaupendra) October 12, 2019