ಲಕ್ನೋ: ಬೇರೊಬ್ಬ ಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿರಬಹುದು ಎಂಬ ಅನುಮಾನದಿಂದ ಪತಿ ಮಹಾಶಯನೊಬ್ಬ ಪತ್ನಿಯ ಮೂಗನ್ನೇ ಕಚ್ಚಿರುವ ಘಟನೆ ಉತ್ತರ ಪ್ರದೇಶದ ಶಹಜಾಹನ್ಪುರದಲ್ಲಿ ನಡೆದಿದೆ.
ಪಾಲ್ಹೋರಾ ಗ್ರಾಮದ ನಿವಾಸಿ ಅರ್ಜುನ್, ತನ್ನ ಪತ್ನಿ ಗೀತಾಳಿಗೆ ಭಾನುವಾರ ಮನೆಯಿಂದ ಹೊರಗೆ ಹೋಗಬೇಡವೆಂದು ತಡೆದಿದ್ದನು. ಆದ್ರೆ ಆಕೆ ಪತಿಯ ಮಾತನ್ನು ಲೆಕ್ಕಿಸದೇ ಹೊರ ಹೋಗಲು ಮುಂದಾಗಿದ್ದಾಳೆ. ಆ ವೇಳೆ ಅರ್ಜುನ್ ಕೋಪದಿಂದ ಆಕೆಯ ಮೂಗನ್ನು ಹಿಡಿದು ಕಚ್ಚಿದ್ದಾನೆ ಎಂದು ನಗರದ ಪೊಲೀಸ್ ಅಧಿಕಾರಿ ದಿನೇಶ್ ತ್ರಿಪಾಠಿ ಹೇಳಿದ್ದಾರೆ.
ಐದು ದಿನಗಳ ಹಿಂದೆ ಗೀತಾ ಅರ್ಜುನ್ ಗೆ ಹೇಳದೆ ಕೇಳದೆ ಬರೇಲಿಗೆ ಹೋಗಿದ್ದರು. ಇದರಿಂದಾಗಿ ಕೋಪಗೊಂಡ ಅರ್ಜುನ ಆಕೆ ವಾಪಸ್ಸಾದ ಬಳಿಕ ಅನೈತಿಕ ಸಂಬಂಧ ಹೊಂದಿರಬಹುದು ಎಂದು ಅವ್ಯಾಚಪದಗಳಿಂದ ಆಕೆಗೆ ಬೈದಿದ್ದಾನೆ ಈ ಘಟನೆಯೇ ಅರ್ಜುನ್ ಗೆ ಗೀತಾಳ ಮೇಲೆ ಅನುಮಾನ ಪಡಲು ಕಾರಣವಾಗಿದೆ. ಈ ಘಟನೆ ಪೊಲೀಸರವರೆಗೂ ತಲುಪಿದ್ದು, ಹಾಗಾಗಿ ಮಧ್ಯಪ್ರವೇಶಿಸಬೇಕಾಯಿತು ಎಂದು ತ್ರಿಪಾಠಿ ಹೇಳಿದ್ದಾರೆ.
ಸದ್ಯ ಘಟನೆ ಬಳಿಕ ಗೀತಾಳನ್ನು ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ದಾಖಲಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಪತಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv