ರಾಯಚೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಬ್ಬ ಅಪಕ್ವ ರಾಜಕಾರಣಿ ಅವರಿಗೆ ಬುದ್ದಿ ಭ್ರಮಣೆಯಾಗಿದೆ ಅಂತ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ರಾಯಚೂರಿನ ರಾಘವೇಂದ್ರ ಸ್ವಾಮಿ ಮಠದಲ್ಲಿ ಆಯೋಜಿಸಿರುವ ದಾಸಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಬಳಿಕ ಮಾತನಾಡಿದ ಪ್ರಹ್ಲಾದ್ ಜೋಶಿ, ಮೇಕ್ ಇನ್ ಇಂಡಿಯಾವನ್ನ ರಾಹುಲ್ ಗಾಂಧಿ ರೇಪ್ ಇನ್ ಇಂಡಿಯಾ ಅಂತ ಹೋಲಿಸುತ್ತಾರೆ. ಅವರಿಗೆ ಯಾರೋ ಬರೆದು ಕೊಡುತ್ತಾರೆ ಅದನ್ನ ಹೇಳುತ್ತಾರೆ. ಅವರಿಗೆ ಯಾವುದರ ಬಗ್ಗೆಯೂ ಸರಿಯಾದ ಮಾಹಿತಿ ಇಲ್ಲ. ಅವರು ವಿದೇಶಕ್ಕೆ ಹೋಗಿದರಿಂದ ಬುದ್ಧೊ ಭ್ರಮಣೆಯಾಗಿರಬೇಕು ಅಂತ ಪ್ರಹ್ಲಾದ್ ಜೋಶಿ ಲೇವಡಿ ಮಾಡಿದರು.
ರಾಜ್ಯದಲ್ಲಿ ಉತ್ತಮ ರೀತಿಯಲ್ಲಿ ವಿದ್ಯುತ್ ಉತ್ಪಾದನೆಯಾಗುತ್ತಿದ್ದು, ನಮಗೆ ಕಲ್ಲಿದ್ದಲಿನ ಕೊರತೆಯಿಲ್ಲ. ಆರ್ ಟಿಪಿಎಸ್, ವೈಟಿಪಿಎಸ್ ಗೆ ಕಲ್ಲಿದ್ದಿಲು ನೀಡುವ ವಿಚಾರವಾಗಿ ಮಾತನಾಡಿ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಕೊರತೆ ಇಲ್ಲ, ಪ್ರಧಾನ ಮಂತ್ರಿಗಳು ವಿದ್ಯುತ್ ಗೆ ವಿಶೇಷ ಆದ್ಯತೆ ನೀಡಿದ್ದಾರೆ ಅಂತ ಹೇಳಿದರು.
ನಾವು ಧಾರವಾಡ ಪೇಡೆ ಹಂಚಿದ್ದು ಬೇರೆ ಕಾರಣಕ್ಕೆ ಆದರೆ ಅದನ್ನು ಸಿಎಬಿಗೆ ಹಂಚಿದ್ದಾರೆ ಎಂದರೆ ತಪ್ಪಿಲ್ಲ ಎಂದರು. ಸಿಎಬಿಯಿಂದ ಅಲ್ಪಸಂಖ್ಯಾತರಿಗೆ ಏನು ತೊಂದರೆಯಾಗುವುದಿಲ್ಲ. ಸಿಎಬಿಯಲ್ಲಿ ನಾಗರಿಕತ್ವ ಕೊಡುವುದಿದೆ ಹೊರತು ಕಸಿದುಕೊಳ್ಳುವುದು ಇಲ್ಲ. ಸಿಎಬಿ ಯಿಂದ ಜನರ ಮಧ್ಯೆ ಬಿರುಕು ತರಲಿದ್ದಾರೆ ಅಂತ ಕೆಲವರು ಮಾತನಾಡುತ್ತಾರೆ. ರಾಷ್ಟ್ರೀಯ ವಿಷಯಕ್ಕೆ ರಾಜಕೀಯ ಮಾಡಲು ಅನಗತ್ಯವಾಗಿ ಗೊಂದಲ ಸೃಷ್ಠಿಸುತ್ತಿದ್ದಾರೆ ಅಂತ ಜೋಶಿ ಬೇಸರ ವ್ಯಕ್ತಪಡಿಸಿದರು.