ರಾಜಕೀಯ ವಿಷಯ ಎತ್ತಿದ್ದೇ ತಡ ಕಾಲ್ಕಿತ್ತ ಕೇಂದ್ರ ಸಚಿವ ಅನಂತಕುಮಾರ ಹೆಗ್ಡೆ

Public TV
1 Min Read
GDG Anantkumar Hegde

ಗದಗ: ಕೇಂದ್ರ ಸಚಿವ ಅನಂತಕುಮಾರ ಹೆಗ್ಡೆ ಅವರು ತಮ್ಮ ಪ್ರತಿಯೊಂದು ಭಾಷಣದಲ್ಲಿಯೂ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರಿಗೆ ಭರ್ಜರಿ ಟಾಂಗ್ ಕೊಡುತ್ತಿದ್ದರು. ನಗರಕ್ಕೆ ಇಂದು ಆಗಮಿಸಿದ್ದ ಸಚಿವರು ಅದೇಕೋ ರಾಜಕೀಯವಾಗಿ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ.

ಮುಂಡರಗಿ ಪಟ್ಟಣದ ರಾಘವೇಂದ್ರ ಸ್ವಾಮಿಗಳ ವಿಠಲಾರೂಢ ಮಠಕ್ಕೆ ಅನಂತಕುಮಾರ ಹೆಗ್ಡೆ ಆಗಮಿಸಿದ್ದರು. ಈ ವೇಳೆ ಲಕ್ಷ್ಮೇಶ್ವರದಿಂದ ಮುಂಡರಗಿ ಮಾರ್ಗವಾಗಿ ಮಂತ್ರಾಲಯಕ್ಕೆ ಪಾದಯಾತ್ರೆ ಹೊರಟಿದ್ದ ಭಕ್ತರನ್ನು ಭೇಟಿ ಮಾಡಿದರು. ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವರು, ಪ್ರತಿ ವರ್ಷದಂತೆ ಈ ವರ್ಷವೂ ಪಾದಯಾತ್ರೆ ಕೈಗೊಂಡಿದ್ದೇವೆ. ನೀವು ಭೇಟಿ ನೀಡಿ ಅಂತಾ ಸಂಘಟಕರು ಕೇಳಿಕೊಂಡಿದ್ದರು. ಹೀಗಾಗಿ ಇಲ್ಲಿಗೆ ಬಂದಿರುವೆ ಎಂದರು.

GDG Anantkumar Hegde 1 1

ನಂತರ ರಾಜಕೀಯವಾಗಿ ಮಾಧ್ಯಮಗಳು ಪ್ರಶ್ನೆ ಕೇಳಿದ್ದೇ ತಡ, ಸಚಿವರು ಯಾವುದೇ ಪ್ರತಿಕ್ರಿಯೆ ನೀಡದೆ ಕಾಲ್ಕಿತ್ತರು. ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದ ಸಚಿವರಿಗೆ ಬಿಜೆಪಿ ಹೈಕಮಾಂಡ್ ನಾಯಕರು ಫುಲ್ ಕ್ಲಾಸ್ ತೆಗೆದುಕೊಂಡಿದ್ದರಿಂದ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಹಾಗಾಗಿ ಮಾಧ್ಯಮಗಳಿಂದ ದೂರ ಉಳಿಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಜಿಲ್ಲೆಯಿಂದ ಸುಮಾರು 200 ಜನ ಯಾತ್ರಿಕರು ಮಂತ್ರಾಲಯಕ್ಕೆ ಪಾದಯಾತ್ರೆ ಹೊರಟಿದ್ದಾರೆ. ಈ ಯಾತ್ರೆ ನವೆಂಬರ್ 5 ರಂದು ಮಂತ್ರಾಲಯ ತಲುಪಲಿದ್ದು, ಲಕ್ಷ್ಮೇಶ್ವರದ ವೈದ್ಯ ಬಾಬುರಾವ್ ಕುಲಕರ್ಣಿ ಅವರ ನೇತೃತ್ವದಲ್ಲಿ ಸತತ 60ನೇ ವರ್ಷದ ಈ ಭಕ್ತಿಯಾತ್ರೆ ಸಾಗಿ ಬಂದಿದೆ.

GDG Anantkumar Hegde 3

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

GDG Anantkumar Hegde 2

Share This Article
Leave a Comment

Leave a Reply

Your email address will not be published. Required fields are marked *