ಸಮಾಜಸೇವೆ ಮಾಡಲು ಕುರ್ಚಿ ಮೇಲೆ ಬಂದು ಕುಳಿತಿಲ್ಲ ಅಂದ್ರು ಸಚಿವ ಅನಂತ್ ಕುಮಾರ್ ಹೆಗ್ಡೆ!

Public TV
1 Min Read
KWR FINAL

ಕಾರವಾರ: ತನ್ನ ವಿವಾದಾತ್ಮಕ ಹೇಳಿಕೆಗಳಿಂದಲೇ ಸದಾ ಸುದ್ದಿಯಲ್ಲಿರೋ ಸಚಿವ ಅನಂತ್ ಕುಮಾರ್ ಹೆಗ್ಡೆಯವರು ಇದೀಗ ಮತ್ತೊಂದು ಹೇಳಿಕೆ ನೀಡುವ ಮೂಲಕ ವಿವಾದಕ್ಕೀಡಾಗಿದ್ದಾರೆ.

KWR 2

ಶಿರಸಿಯಲ್ಲಿ ಆಯೋಜಿಸಿರುವ ಬಿಜೆಪಿ ಜಿಲ್ಲಾ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ನೀವು ವೋಟು ಕೊಟ್ಟಂತಹ ಹಾಗೂ ನೀವು ವೋಟು ಕೊಡಿಸಿರತಕ್ಕಂತಹ ಯಾರೋ ಕೇಳಬಹುದು ನೀವ್ ರಾಜಕಾರಣ ಮಾಡ್ತೀರಾ ಅಂತ. ನಾವು ಈ ಜಾಗದಲ್ಲಿ ಬಂದು ಕುಳಿತಿದ್ದೇ ರಾಜಕಾರಣ ಮಾಡಲಿಕ್ಕೆ. ಮತ್ಯಾಕೆ ನಾವು ರಾಜಕಾರಣಕ್ಕೆ ಬಂದಿದ್ದೇವೆ. ನಾವು ಇರುವುದೇ ರಾಜಕಾರಣ ಮಾಡೋದಿಕ್ಕೆ. ಅದಕ್ಕೋಸ್ಕರವೇ ತಾಲೂಕು ಅಧ್ಯಕ್ಷರಾಗಿದ್ದೇವೆ. ಅದಕ್ಕೋಸ್ಕರವೇ ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿದ್ದೇವೆ, ಜಿಲ್ಲಾ ಸಮಿತಿ ಸದಸ್ಯರಾಗಿದ್ದೇವೆ, ಶಾಸಕರು ಸಂಸದರಾಗಿದ್ದೇವೆ. ರಾಜಕಾರಣ ಬಿಟ್ಟು ಮತ್ತೇನೂ ಮಾಡೋದಿಕ್ಕೆ ಆಗೋದಿಲ್ಲ. ರಾಜಕೀಯಕ್ಕೆ ಬಂದು ರಾಜಕಾರಣವೇ ಮಾಡಬೇಕು ಅಂದ್ರು.

KWR 4

ಸಮಾಜಸೇವೆ ಮಾಡಲು ಈ ಕುರ್ಚಿ ಮೇಲೆ ಕುಳಿತುಕೊಂಡೇ ಇಲ್ಲ. ನಾವು ರಾಜಕಾರಣ ಮಾಡುವುದಕ್ಕೆ ಬಂದು ಕುಳಿತುಕೊಂಡಿದ್ದು. ಮಾಧ್ಯಮದವರು ಹೇಗೆ ಬೇಕಾದ್ರೂ ಬರೆದುಕೊಳ್ಳಿ. ಅವರವರ ಭಾವಕ್ಕೆ ಅವರವರ ಭಕುತಿ ಅಂತ ಹೇಳಿ ದಯವಿಟ್ಟು ಹಿಂದೇಟು ಹಾಕಬಾರದು ಅಂತ ಹೇಳಿದ್ರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.youtube.com/watch?v=GL6-u6xfoSM&feature=youtu.be

KWR 3

Share This Article
Leave a Comment

Leave a Reply

Your email address will not be published. Required fields are marked *