Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಲವ್ ಸ್ಟೋರಿ ಬಗ್ಗೆ ಮನಬಿಚ್ಚಿ ಮಾತನಾಡಿದ್ದ ಉಮೇಶ್ ಕತ್ತಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಲವ್ ಸ್ಟೋರಿ ಬಗ್ಗೆ ಮನಬಿಚ್ಚಿ ಮಾತನಾಡಿದ್ದ ಉಮೇಶ್ ಕತ್ತಿ

Bengaluru City

ಲವ್ ಸ್ಟೋರಿ ಬಗ್ಗೆ ಮನಬಿಚ್ಚಿ ಮಾತನಾಡಿದ್ದ ಉಮೇಶ್ ಕತ್ತಿ

Public TV
Last updated: September 7, 2022 4:12 pm
Public TV
Share
3 Min Read
UMESH KATTI 1
SHARE

ಬೆಂಗಳೂರು: ಸಚಿವ ಉಮೇಶ್ ಕತ್ತಿ(Umesh Katti) ಅವರನ್ನು ಪಬ್ಲಿಕ್ ಟಿವಿ ಈ ಹಿಂದೆ ಸಂದರ್ಶನ ನೀಡಿದ್ದಾಗ ಅವರು ತಮ್ಮ ಕಾಲೇಜಿನ ದಿನಗಳನ್ನು ಮೆಲಕು ಹಾಕುತ್ತಾ, ತಮ್ಮ ವರ್ಣರಂಜಿತ ಜೀವನ ಬಗ್ಗೆ ಹಾಗೂ ಲವ್ ಸ್ಟೋರಿಯ(Love Story) ಬಗ್ಗೆ ಮನಬಿಚ್ಚಿ ಮಾತನಾಡಿದ್ದರು.

ಐ ಲವ್ ಯೂ ಎಂದು ನಾನು ಯಾರಿಗೂ ಹೇಳಿರಲಿಲ್ಲ. ಹಾಗೇ ಆಗಿನ ಕಾಲದಲ್ಲಿ ಯಾರೂ ಐ ಲವ್ ಯು ಎಂದು ಹೇಳಲು ಹೋಗುತ್ತಿರಲಿಲ್ಲ. ಆಗಿನ ಕಾಲದಲ್ಲಿ ಆ ರೀತಿ ಇರಲಿಲ್ಲ. ಆಗಿನ ಕಾಲದಲ್ಲಿ ಆ ರೀತಿ ಹೇಳಿದ್ದರೆ ಅವರ ತಂದೆ ತಾಯಿ ಹಾಗೂ ನಮ್ಮ ತಂದೆ ತಾಯಿಯರು ಸೀರಿಯಸ್ ಆಗುತ್ತಿದ್ದರು ಜೊತೆಗೆ ಬೈಯುತ್ತಿದ್ದರು. ಅದಕ್ಕೆ ಐ ಲವ್ ಯೂ ಹೇಳುವ ಪ್ರಶ್ನೆಯೇ ಬರುತ್ತಿರಲಿಲ್ಲ. ಈ ರೀತಿಯ ಪರಿಸರದಲ್ಲಿ ನಾವು ಬೆಳೆದು ಬಂದಿದ್ದೆವು ಎಂದು ಹೇಳಿದರು.

UMESH KATTI 2

ಇವತ್ತಿನ ದಿನಮಾನದಲ್ಲಿ ನಾವು ನೋಡುತ್ತಿದ್ದೇವೆ. ಕೆಲವರು ಐ ಲವ್ ಯೂ ಎಂದು ಸುತ್ತಾಟವನ್ನೆಲ್ಲಾ ಮಾಡುತ್ತಾರೆ. ಆದರೆ ಅವತ್ತಿನ ದಿನಗಳಲ್ಲಿ ಇದೆಲ್ಲಾ ಇರಲಿಲ್ಲ. ಅವಕಾಶವಿತ್ತು, ಆದರೆ ಹುಡುಗಿಯರು ಕಾಲೇಜಿಗೆ(College) ಬರುತ್ತಿರಲಿಲ್ಲ. ಹಾಗಾಗಿ ತೊಂದರೆ ಆಗುತ್ತಿತ್ತು ಎಂದು ತಮಾಷೆ ಮಾಡಿದ್ದರು.

ನನ್ನ ಸಹೋದರ ಅಕ್ಕನ ಮಗಳನ್ನೇ ನಾನು ಮದುವೆ(marriage) ಆಗಿದ್ದೇನೆ. ಅವಳು ಇಲ್ಲೇ ಕಲಿಯುತ್ತಿದ್ದಳು. ಇಲ್ಲೇ ಮದುವೆಯೂ ಆಯಿತು. ಆದರೆ ಲೈನ್ ಎಲ್ಲಾ ನಾನು ಹೊಡೆದಿಲ್ಲ. ರಜೆಯಿದ್ದಾಗ ಅವಳು ಇಲ್ಲಿ ಬರುತ್ತಿದ್ದಳು, ನಾನು ಅಲ್ಲಿ ಹೋಗುತ್ತಿದ್ದೆ. ಹಾಗಾಗಿ ಸಂಬಂಧಗಳು ಬಂದಿಲ್ಲ ಎಂದು ಹಳೆಯದ್ದನ್ನು ನೆನಪು ಮಾಡಿಕೊಂಡಿದ್ದರು.

UMESH KATTI .

ಅಕ್ಕನ ಮಗಳ ಪರಿಚಯವಿತ್ತು. ಆದರೆ ಆಗೆಲ್ಲಾ ಲವ್ ಯೂ ಅನ್ನೊದು ಅವಳಿಗೂ ಹೇಳಲು ಬರುತ್ತಿರಲಿಲ್ಲ. ನನಗೂ ಹೇಳಲು ಬರುತ್ತಿರಲಿಲ್ಲ. ಈಗ ಹೇಳಲು ದುಡ್ಡು ಕಾಸಿನ ಪ್ರಶ್ನೆ ಬರುವುದಿಲ್ಲ, ಬದಲಿಗೆ ಲವ್ ಯೂ ಹೇಳುವ ಆ ವಯಸ್ಸು ನಮ್ಮಿಬ್ಬರಿಗೂ ಮುಗಿದಿದೆ ಎಂದು ನೆನಪು ಮಾಡಿಕೊಂಡಿದ್ದರು.

ಶಾಲೆಯ ನೆನಪು ಮಾಡಿಕೊಂಡಿದ್ದ ಅವರು, ಶಾಲೆಗೆ ಹೋಗುತ್ತಿದ್ದೆವು. ಆದರೆ ನಮಗೆ ಶಾಲೆ ಕಲಿತು ಕೆಲಸ ಮಾಡಬೇಕು ಎಂಬುದಿರಲಿಲ್ಲ. ತಂದೆ ತಾಯಿಯರು ಶಾಲೆಗೆ ಕಳುಹಿಸುತ್ತಾರೆ. ನಾವು ಶಾಲೆಗೆ ಹೋಗಬೇಕು ಎನ್ನೋದಷ್ಟೇ ಇತ್ತು. ಮದುವೆ ಆದಾಗ ಶಾಲೆ ಬಿಟ್ಟೆವು ಎಂದು ತಿಳಿಸಿದರು.

Umesh Katti 3

ಆಗಿನ ಚುಡುಯಿಸುವುದಕ್ಕೂ ಈಗ ಚುಡಾಯಿಸುವುದಕ್ಕೂ ಬಹಳ ವ್ಯತ್ಯಾಸವಿದೆ. ಈಗ ಹುಡುಗಿಯರೇ ಹುಡುಗರನ್ನು ಚುಡಾಯಿಸುತ್ತಿದ್ದಾರೆ. ಆಗೆಲ್ಲ ನಾವು ಹುಡುಗಿಯರನ್ನು ಚುಡಾಯಿಸುತ್ತಿದ್ದೆವು. ಮನೆ ಹತ್ತಿರ ಒಂದು ಆಲದ ಮರವಿದೆ. ಮರದ ಮೇಲೆ ಕೂತು ಅಲ್ಲಿಂದ ಕಾಯಿ ಒಗೆಯೋದು. ಕಲ್ಲು ಒಗೆಯೋದು ಎಲ್ಲಾ ಮಾಡುತ್ತಿದ್ದೆವು. ಆಗೆಲ್ಲಾ ಅವರು ಅಲ್ಲಿ ಕೂಗಾಡಿ, ನೇರವಾಗಿ ನಮ್ಮ ಮನೆಗೆ ಬಂದು ನನ್ನ ತಂದೆ ತಾಯಿಗೆ ದೂರು ಹೇಳುತ್ತಿದ್ದರು. ಆಗ ತಂದೆ ತಾಯಿಯರು ನಮ್ಮನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಆಗೆಲ್ಲಾ ನಮಗೆ ಅರ್ಥವಾಗುತ್ತಿರಲಿಲ್ಲ. ಆದರೂ ಈ ರೀತಿ ಮಾಡಿ ಮಜ ಮಾಡುತ್ತಿದ್ದೆವು ಎಂದು ನೆನಪು ಮಾಡಿಕೊಂಡರು. ಇದನ್ನೂ ಓದಿ: ದೇವರು ಇನ್ನೊಮ್ಮೆ ದೊಡ್ಡಪ್ಪನಿಗೆ ಜೀವ ಕೊಡಲಿ: ಪೃಥ್ವಿ ಕತ್ತಿ ಕಣ್ಣೀರು

ಆಗಿನ ಕಾಲದಲ್ಲಿ 1 ತಿಂಗಳ ರಜೆ ಇರುತ್ತಿತ್ತು. ಹಬ್ಬ ಆಚರಣೆ ಮಾಡಲು ತಾಯಿ ಮನೆಗೆ ಹೋಗುತ್ತಿದ್ದೆವು. ಇದು ಇರೋದು ಚಿಕ್ಕೊಡಿ ತಾಲೂಕಿನ ಖಡಗ ಊರು ನಮ್ಮ ತಾಯಿ ಊರು ಆಗಿದೆ. ಹಬ್ಬ, ಹುಣ್ಣಿಮೆ, ಬೇಸಿಗೆಯಲ್ಲಿ ತಾಯಿ ಮನೆಗೆ ಹೋಗಿ ಮಜಾ ಮಾಡುತ್ತಿದ್ದೆವು. ಆಗ ಎಲ್ಲರೂ ಒಟ್ಟಿಗೆ ಕೂಡಿ ಹಬ್ಬ ಮಾಡುತ್ತಿದ್ದೆವು. ಇತ್ತೀಚೆಗೆ ಕುಟುಂಬ ಒಗ್ಗಟಿಲ್ಲದಿದ್ದರಿಂದ ನಾವು ಇಲ್ಲೇ ಹಬ್ಬ ಆಚರಿಸುತ್ತೇವೆ. ಅವರು ಅಲ್ಲೇ ಹಬ್ಬ ಮಾಡುತ್ತಾರೆ. ತಾಯಿ ಮಾಡುತ್ತಿರುವ ರೊಟ್ಟಿ, ಕಾಯಿ ಪಲ್ಯ ತುಂಬಾ ರುಚಿಕರವಾಗಿರುತ್ತಿತ್ತು ಎಂದು ಹೇಳಿದ್ದರು. ಇದನ್ನೂ ಓದಿ: ಸಕ್ಕರೆ ಉದ್ಯಮಕ್ಕೆ ಉಮೇಶ್ ಕತ್ತಿ ಕೊಡುಗೆ ಮರೆಯುವಂತಿಲ್ಲ: ಡಿ.ಕೆ ಶಿವಕುಮಾರ್

Live Tv
[brid partner=56869869 player=32851 video=960834 autoplay=true]

TAGGED:belagaviloveumesh kattiಉಮೇಶ್ ಕತ್ತಿಬೆಳಗಾವಿಲವ್
Share This Article
Facebook Whatsapp Whatsapp Telegram

Cinema news

CM Nandini
ಖ್ಯಾತ ಕಿರುತೆರೆ ನಟಿ ಆತ್ಮಹತ್ಯೆಗೆ ಶರಣು
Bengaluru City Cinema Crime Latest Main Post TV Shows
Raj B Shetty 1
ರಾಜ್ ಬಿ ಶೆಟ್ಟಿ ನಟನೆಯ ರಕ್ಕಸಪುರದೊಳ್ ರಿಲೀಸ್ ಡೇಟ್ ಫಿಕ್ಸ್
Cinema Latest Sandalwood Top Stories
K POP Kannada Movie
ಕೊರಿಯನ್ ಪಾಪ್ ಸಂಸ್ಕೃತಿ ಬಿಂಬಿಸುವ ಕನ್ನಡದ ʻಕೆ-ಪಾಪ್ʼ
Cinema Latest Sandalwood
Prabhas
ಸಂಕ್ರಾಂತಿ ಹಬ್ಬಕ್ಕೆ ʻದಿ ರಾಜಾ ಸಾಬ್ʼ ಅಬ್ಬರ; ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಮಿಂಚಿದ ರೆಬೆಲ್ ಸ್ಟಾರ್ ಪ್ರಭಾಸ್
Cinema Latest South cinema

You Might Also Like

Fire Accident
Bengaluru City

ಬೆಂಗಳೂರಿನ ಪಿಜಿಯಲ್ಲಿ ಸಿಲಿಂಡರ್ ಸ್ಫೋಟ – ಓರ್ವ ಸಾವು, ಮೂವರಿಗೆ ಗಾಯ

Public TV
By Public TV
4 hours ago
Russia Ukraine 1
Latest

ಪುಟಿನ್‌ ಮನೆ ಮೇಲೆ 91 ಡ್ರೋನ್‌ ದಾಳಿ ನಡೆಸಿತ್ತಾ ಉಕ್ರೇನ್‌ – ಯುದ್ಧ ನಿಲ್ಲಿಸುವ ಮಾತುಕತೆ ಹೊತ್ತಲ್ಲೇ ಟ್ವಿಸ್ಟ್‌

Public TV
By Public TV
4 hours ago
Rahul Gandhi Tripura Student
Crime

ಡೆಹ್ರಾಡೂನ್‌ನಲ್ಲಿ ತ್ರಿಪುರಾ ವಿದ್ಯಾರ್ಥಿಯ ಹತ್ಯೆ – ʻಭಯಾನಕ ದ್ವೇಷದ ಅಪರಾಧʼ ಅಂತ BJP ವಿರುದ್ಧ ರಾಗಾ ಕಿಡಿ

Public TV
By Public TV
4 hours ago
Mahatma Gandhi
Belgaum

ಗಾಂಧಿ ಪ್ರತಿಮೆಗೆ ಸಾಂತಾ ಕ್ಲಾಸ್ ಟೋಪಿ ಹಾಕಿ ಅಪಮಾನ – ಇಬ್ಬರು ಅರೆಸ್ಟ್‌

Public TV
By Public TV
5 hours ago
BMTC 2
Bengaluru City

ಹೊಸ ವರ್ಷಾಚರಣೆಗೆ ಗುಡ್‌ನ್ಯೂಸ್‌ – ಮಧ್ಯರಾತ್ರಿ 2 ಗಂಟೆವರೆಗೂ BMTC ಬಸ್ ಸೇವೆ

Public TV
By Public TV
5 hours ago
Kogilu Layout Demolition 20 officials of Rajiv Gandhi Housing Scheme visited site
Bengaluru City

ಬೈಯ್ಯಪ್ಪನಹಳ್ಳಿಯಲ್ಲಿ ಪುನರ್ವಸತಿ: ಸಿಎಂ ಸಿದ್ದರಾಮಯ್ಯ ಘೋಷಣೆ – ಕರ್ನಾಟಕದಲ್ಲಿ ಕೇರಳ ರೂಲ್ ಎಂದು ಬಿಜೆಪಿ ಆಕ್ರೋಶ

Public TV
By Public TV
6 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?