ಕಲಬುರಗಿ: ನನಗೆ ಬಹಳ ಸಂತೋಷ ಹಾಗೂ ಹೆಮ್ಮೆಯಾಗುತ್ತಿದೆ. ನಿಮ್ಮ ಭರವಸೆಯ ಮೇಲೆ ಬಂದಿದ್ದೇನೆ. ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕು ಎಂದು ಉಮೇಶ್ ಜಾಧವ್ ಹೇಳಿದ್ದಾರೆ.
ನಗರದಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾದ ಬಳಿಕ ಮಾತನಾಡಿದ ಅವರು, ಇವತ್ತು ಬಹಳ ಸಂತೋಷ ಹಾಗು ಹೆಮ್ಮೆಯಿಂದ ಬಿಜೆಪಿ ಸೇರಿದ್ದೇನೆ. ಇಂದು ನನ್ನನ್ನು ಬಹಳ ಚೆನ್ನಾಗಿ ಬರಮಾಡಿಕೊಂಡಿದ್ದಾರೆ. ನನಗೆ ಒಂದು ಅವಕಾಶ ನೀಡಿ ಅಂತಾ ನಿಮಗೆ ಕೈ ಜೋಡಿಸುತ್ತೆನೆ. ಮೋದಿ ಅವರು ಇನ್ನೊಮ್ಮೆ ಪ್ರಧಾನಿ ಆಗಲು ನಿಮ್ಮ ಬೆಂಬಲ ನನಗೆ ಬೇಕು ಅಂದ್ರು.
ಬಿಜೆಪಿಯವರು ಕೋಲಿ ಸಮಾಜ ಗುರುತಿಸಿ ರಾಷ್ಟ್ರಪತಿ ಮಾಡಿದ್ದಾರೆ. ಇವತ್ತು ಮಲ್ಲಿಕಾರ್ಜುನ ಖರ್ಗೆ ನಮ್ಮ ಸಮಾಜಕ್ಕೆ ಎಸ್ ಟಿ ಸೇರಿಸದೇ ಕೊಡಲಿ ಪೆಟ್ಟು ಹಾಕಿದ್ದಾರೆ. ಇವತ್ತಿನ ದಿನ ಮಲ್ಲಿಕಾರ್ಜುನ ಖರ್ಗೆ ಕುದುರೆ ಓಡುವುದಿಲ್ಲ. ಉಮೇಶ್ ಜಾಧವ್ ಅವರ ಕುದುರೆ ಓಡುತ್ತದೆ. ಇಂದು ನನಗೊಂದು ಅವಕಾಶ ಮಾಡಿಕೊಡಿ ಎಂದು ನಾನು ನಿಮ್ಮಲ್ಲಿ ಕೈಮುಗಿದು ವಿನಂತಿ ಮಾಡಿಕೊಳ್ಳುತ್ತೇನೆ ಅಂದ್ರು.
ಈ ಮೈದಾನದಲ್ಲಿ ಅಟಲಜೀ ಸೇರಿದಂತೆ ಹಲವರು ಬಂದು ಹೋಗಿದ್ದಾರೆ. ಈ ಹಿಂದೆ ನಾನು 8 ವರ್ಷದವನಿದ್ದಾಗ ವಾಜಪೇಯಿ ಭಾಷಣ ಕೇಳಲು ಬಂದಿದ್ದೆ ಎಂದು ಹೇಳಿದ್ರು. ಜಾಧವ್ ಭಾಷಣ ಆರಂಭಿಸುತ್ತಿದ್ದಂತೆ ಮೋದಿ ಮೋದಿ ಅಂತಾ ಜನರ ಹರ್ಷೋದ್ಗಾರ ಕೂಗಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv