ಅನಂತರಾಜ ಉಪಾಧ್ಯರಿಗೆ ಕಲಾರಂಗದ ಸೇವಾಭೂಷಣ ಪ್ರಶಸ್ತಿ

Public TV
1 Min Read
Udupi

ಉಡುಪಿ: ಜಿಲ್ಲೆಯ ಪ್ರತಿಷ್ಠಿತ ಯಕ್ಷಗಾನ ಕಲಾರಂಗದ ಸೇವಾಭೂಷಣ ಪ್ರಶಸ್ತಿ ಸಮರ್ಪಣೆಯಾಗಿದೆ. ಉಡುಪಿಯ ಯು. ಅನಂತರಾಜ ಉಪಾಧ್ಯರಿಗೆ ಈ 2019-2020ನೇ ಸಾಲಿನ ಸೇವಾಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಪೇಜಾವರ ಮಠದ ರಾಮವಿಠಲ ಸಭಾಭವನದಲ್ಲಿ ಕಾರ್ಯಕ್ರಮ ನಡೆಯಿತು. ಸೋದೆ ಮಠದ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಪ್ರಶಸ್ತಿ ವಿತರಣೆ ಮಾಡಿದರು. ಸ್ವಾಮೀಜಿ ಈ ಸಂದರ್ಭ ಮಾತನಾಡಿ, ಯಕ್ಷಗಾನ ಕಲಾರಂಗದ ಸೇವೆ ಅನನ್ಯವಾದದ್ದು. ಅರ್ಹರಿಗೆ ಪ್ರಶಸ್ತಿ ನೀಡಿದರೆ ಪ್ರಶಸ್ತಿಯ ಗೌರವ ಹೆಚ್ಚುತ್ತದೆ ಎಂದರು.

Udupi 2

ಮಾತು ಮುಂದುವರೆಸಿದ ಶ್ರೀಗಳು ಜನರಲ್ಲಿ ಸೇವಾ ಮನೋಭಾವ ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ಯಕ್ಷಗಾನ ಕಲಾರಂಗದಲ್ಲಿ ನಿಸ್ವಾರ್ಥ ಸೇವೆಗಳು ನಡೆಯುತ್ತಿದೆ. ಈ ಮೂಲಕ ಸಮಾಜಕ್ಕೆ ಕೊಡುಗೆಗಳನ್ನು ನೀಡುತ್ತಿದ್ದಾರೆ. ನಿಸ್ವಾರ್ಥ ಸೇವೆ ಮಾಡುವವರ ಕೆಲಸವನ್ನು ಸಮಾಜ ಎಂದಿಗೂ ಗೌರವಿಸಬೇಕು ಎಂದು ಹೇಳಿದರು.

ಸಂಸ್ಥೆಯ ಎಸ್. ವಿ ಭಟ್, ಅಧ್ಯಕ್ಷ ಗಣೇಶ್ ರಾವ್, ಮುರಳಿ ಕಡೆಕಾರು ಮತ್ತಿತರರ ಸಮ್ಮುಖದಲ್ಲಿ ಪ್ರಶಸ್ತಿ ವಿತರಣೆ ಕಾರ್ಯಕ್ರಮ ನಡೆಯಿತು.

Share This Article
Leave a Comment

Leave a Reply

Your email address will not be published. Required fields are marked *