ಒಂದೂವರೆ ಲಕ್ಷ ಮಕ್ಕಳಿಗೆ ಗ್ರಹಣ ತೋರಿಸಿದ ಪಬ್ಲಿಕ್ ಹೀರೋ ಎ.ಪಿ ಭಟ್

Public TV
1 Min Read
UDP AP BHAT

ಉಡುಪಿ: ಕಂಕಣ ಸೂರ್ಯಗ್ರಹಣವನ್ನು ವಿಶ್ವದ ಕೋಟ್ಯಾಂತರ ಜನ ಕಣ್ತುಂಬಿಕೊಂಡಿದ್ದಾರೆ. ರಾಜ್ಯದ ಒಂದೂವರೆ ಲಕ್ಷ ವಿದ್ಯಾರ್ಥಿಗಳು ಅಪರೂಪದ ವಿದ್ಯಮಾನವನ್ನು ಕಣ್ತುಂಬಿಕೊಳ್ಳಲು ಉಡುಪಿಯ ಎ.ಪಿ ಭಟ್ ನಾಲ್ಕು ತಿಂಗಳು ಪಟ್ಟ ಪರಿಶ್ರಮ ಇವತ್ತು ಫಲ ಕೊಟ್ಟಿದೆ.

ಪಬ್ಲಿಕ್ ಹೀರೋ ಕಾರ್ಯಕ್ರಮ ಮೂಲಕ ಲಕ್ಷ ಮಕ್ಕಳನ್ನು ತಲುಪುವ ಯೋಜನೆ ಹಾಕಿದ್ದ ಎ.ಪಿ.ಭಟ್, ಒಂದೂವರೆ ಲಕ್ಷ ಮಕ್ಕಳು ಗ್ರಹಣ ನೋಡುವಂತೆ ಮಾಡಿದರು. ರಾಜ್ಯರ ಮೂಲೆ ಮೂಲೆ ಮಕ್ಕಳು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿಗೆ ಕರೆಸಿ ಗ್ರಹಣ ತೋರಿಸಿದ್ದಾರೆ. ಈ ಸಂದರ್ಭದಲ್ಲಿ ಪಬ್ಲಿಕ್ ಟಿವಿಗೆ ಧನ್ಯವಾದ ಹೇಳಿದ್ದಾರೆ.

ಗ್ರಹಣ ವಿಕ್ಷೇಣೆ ಮಾಡಲು ವಿಶೇಷ ವ್ಯವಸ್ಥೆಯನ್ನು ಮಾಡಿದ್ದೇವೂ. ನಮ್ಮ ಫಿನ್ ಹೋಲ್ ಅನ್ನು ರಾಜ್ಯದ ವಿವಿಧ ಪ್ರದೇಶಗಳಲ್ಲಿ ಬಳಕೆ ಮಾಡಿದ್ದಾರೆ. ಉಡುಪಿ ಮಾತ್ರವಲ್ಲದೇ ರಾಜ್ಯದ ಎಲ್ಲಾ ಪ್ರದೇಶಗಳಲ್ಲಿ ನಮ್ಮ ಯೋಜನೆ ಯಶಸ್ವಿಯಾಗಿದೆ. ಗ್ರಹಣದ ಕುರಿತು ಇರುವ ಭಯವನ್ನು ಬಿಟ್ಟು ಮಕ್ಕಳಿಗೆ ತೋರಿಸುವುದು ನಮ್ಮ ಉದ್ದೇಶವಾಗಿತ್ತು. ಆದ್ದರಿಂದಲೇ ಕಂಕಣ ಸೂರ್ಯಗ್ರಹಣ ಸಂಭ್ರಮ ಎಂದು ಕಾರ್ಯಕ್ರಮಕ್ಕೆ ಹೆಸರಿಟ್ಟೇವೂ. ದಕ್ಷಿಣ ಭಾರತದಲ್ಲಿ ಮತ್ತೆ ಕಂಕಣ ಸೂರ್ಯಗ್ರಹಣ ಕಾಣಿಸುವುದು 2064ಕ್ಕೆ ಮಾತ್ರ. ಆದ್ದರಿಂದಲೇ ಕಂಕಣ ಸೂರ್ಯಗ್ರಹಣವನ್ನು ಹೆಚ್ಚಿನ ಮಕ್ಕಳಿಗೆ ತೋರಿಸಲು ಯೋಜನೆ ರೂಪಿಸಲಾಗಿತ್ತು. ಉಡುಪಿ ಕಾಲೇಜಿನಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಜನ ವೀಕ್ಷಣೆ ಮಾಡಿದ್ದಾರೆ ಎಂದು ಪಬ್ಲಿಕ್ ಟಿವಿ ಧನ್ಯವಾದ ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *