ಉಡುಪಿ: ಸಮುದ್ರದಲ್ಲಿ ಮುಳುಗುತ್ತಿದ್ದ ಮೀನುಗಾರನ್ನು (Fisherman) ಸ್ಥಳೀಯರು ರಕ್ಷಿಸಿದ ಘಟನೆ ಉಡುಪಿ (Udupi) ಜಿಲ್ಲೆಯ ಕಾಪು ಲೈಟ್ ಹೌಸ್ ಸಮೀಪದಲ್ಲಿ ನಡೆದಿದೆ.
ಸಚಿನ್ ಎಂಬ ವ್ಯಕ್ತಿ ಮೀನಿಗೆ ಬಲೆ ಬೀಸುತ್ತಿದ್ದ ವೇಳೆ ಆಯತಪ್ಪಿ ಸಮುದ್ರಕ್ಕೆ (Sea) ಬಿದ್ದಿದ್ದ. ಈತನ ರಕ್ಷಣೆ ಮಾಡುವುದಕ್ಕೆ ಸತತ ಒಂದು ಗಂಟೆಗಳ ಕಾಲ ಸ್ಥಳೀಯರು ಶೋಧಕಾರ್ಯ ನಡೆಸಿದರು. ಇದನ್ನೂ ಓದಿ: Gujarat Floods | ಸ್ಕೂಟಿ ಮೇಲೆ ಹೊತ್ತೊಯ್ದು ಮೊಸಳೆ ರಕ್ಷಣೆ – ವೀಡಿಯೋ ವೈರಲ್
ಶರ್ಮಾ, ಹರೀಶ್, ಬಾಲಕೃಷ್ಣ ಕೋಟ್ಯಾನ್, ಚಂದ್ರಶೇಖರ್ ಎಂಬವರು ಕಾರ್ಯಾಚರಣೆ ನಡೆಸಿ ವ್ಯಕ್ತಿಯನ್ನ ರಕ್ಷಿಸಿದ್ದಾರೆ.