– ನಾಲ್ಕು ಕಾರು ಜಖಂ, ಅನಾಥವಾದ ಸಾವಿರಾರು ಬಾವಲಿಗಳು
ಉಡುಪಿ: ಮಣಿಪಾಲದ ಕೆಎಂಸಿ ಆಸ್ಪತ್ರೆಯ ಆವರಣದಲ್ಲಿ ಬೃಹತ್ ಮರ ಉರುಳಿ ಬಿದ್ದಿದೆ. ಮರದಡಿಯಲ್ಲಿದ್ದ ನಾಲ್ಕು ಕಾರುಗಳು ಜಖಂ ಆಗಿದ್ದು ಇಬ್ಬರಿಗೆ ಗಾಯವಾಗಿದೆ.
ಮಣಿಪಾಲ ಆಸ್ಪತ್ರೆಯ ಎಮರ್ಜೆನ್ಸಿ ಕಟ್ಟಡದ ಮುಂಭಾಗದಲ್ಲೇ ದೊಡ್ಡ ಮರವೊಂದಿತ್ತು. ಏಕಾಯೇಕಿ ಮರ ಧಾರಾಶಾಹಿಯಾಗಿದೆ. ಕೆಎಂಸಿ ಆಸ್ಪತ್ರೆಯ ಕಟ್ಟಡದ ಮೇಲೆ ಕೂಡಾ ಮರದ ಕೊಂಬೆಗಳು ಬಿದ್ದಿದೆ. ಆಸ್ಪತ್ರೆಯೊಳಗೆ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಕಡೆಯವರು ಇದೇ ಮರದಡಿ ವಿಶ್ರಾಂತಿ ಪಡೆಯುತ್ತಾರೆ. ಕಾರು ಪಾರ್ಕ್ ಮಾಡುತ್ತಾರೆ. ಹೀಗೆ ಮರದ ಅಡಿಯಲ್ಲಿದ್ದ ಇಬ್ಬರಿಗೆ ಗಾಯವಾಗಿದೆ. ಗಾಯಾಳುಗಳನ್ನು ಕೂಡಲೇ ಕೆಎಂಸಿ ಆಸ್ಪತ್ರೆಗೆ ಸೇರಿಸಲಾಗಿದೆ. ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಲಾಗಿದೆ.
ಸ್ಥಳಕ್ಕೆ ಅಗ್ನಿಶಾಮಕ ಅಧಿಕಾರಿಗಳು ದೌಡಾಯಿಸಿದ್ದು, ಮರ ಕತ್ತರಿಸಿ ಕಾರುಗಳನ್ನು ತೆರವುಗೊಳಿಸಲಾಗಿದೆ. ಗಾಳಿ ಮಳೆ ಇಲ್ಲದಿದ್ದರೂ, ಆಶ್ಚರ್ಯಕರ ರೀತಿಯಲ್ಲಿ ಮರ ಬಿದ್ದಿದೆ ಅಂತ ಸ್ಥಳೀಯರು ಹೇಳಿದ್ದಾರೆ. ಮಣಿಪಾಲ ಆಸ್ಪತ್ರೆ ಆವರಣದಲ್ಲಿ ಕಳೆದ ಹಲವು ವರ್ಷಗಳಿಂದ ಜನರಿಗೆ, ಪಕ್ಷಿಗಳಿಗೆ, ಬಾವಲಿಗಳಿಗೆ ಆಶ್ರಯ ಕೊಡ್ತಾಯಿತ್ತು. ಮರದಲ್ಲಿ ಸಾವಿರಾರು ಬಾವಲಿಗಳು ಬೀಡು ಬಿಟ್ಟಿದ್ದವು. ಮರ ಬಿದ್ದ ನಂತರ ನೆಲೆ ಕಳೆದುಕೊಂಡ ಬಾವಲಿಗಳು ಆಕಾಶದಲ್ಲೆಲ್ಲಾ ಹಾರಾಟ ಮಾಡುತ್ತಿದೆ.
ಕೆಲ ಬಾವಲಿಗಳಿಗೆ ಗಾಯವಾಗಿ ಬಿದ್ದಿದೆ. ಕೆಲ ಬಾವಲಿ ಮರಿಗಳ ರೆಕ್ಕೆಗೆ ಗಾಯವಾಗಿದೆ. ಯಾವಾಗಲು ಮರದ ಕೆಳಗೆ ತುಂಬಾ ಜನ ಕುಳಿತಿರುತ್ತಾರೆ. ಆದ್ರೆ ಇವತ್ತು ಕಡಿಮೆ ಜನ ಇದ್ರು. ಆವರಣದಲ್ಲೇ ಮರ ಬಿದ್ದ ಕಾರಣ ದೊಡ್ಡ ಅವಘಡ ತಪ್ಪಿದೆ, ರಸ್ತೆಗೆ ಬಿದ್ದಿದ್ದರೆ ಅನಾಹುತವಾಗುತ್ತಿತ್ತು ಅಂತ ಸ್ಥಳದಲ್ಲಿದ್ದ ಸರಳೇಬೆಟ್ಟು ಗಣೇಶ್ ರಾಜ್ ಆತಂಕ ವ್ಯಕ್ತಪಡಿಸಿದರು.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]