ಮಂಗಳೂರು: ಕಾಂಗ್ರೆಸ್ ಚುನಾವಣೆ ಸಂದರ್ಭದಲ್ಲಿ ಮೃದು ಹಿಂದುತ್ವದತ್ತ ಮರಳುತ್ತಿದೆಯೇ ಅನ್ನುವ ಸಂಶಯ ಮೂಡಿದೆ. ದ.ಕ. ಉಸ್ತುವಾರಿ ಸಚಿವ ಯು.ಟಿ ಖಾದರ್ ಬಳಿ, ಈ ಪ್ರಶ್ನೆ ಮುಂದಿಟ್ಟಾಗ ಕಾಂಗ್ರೆಸಿನದ್ದು ಉತ್ತಮ ಹಿಂದುತ್ವ ಅನ್ನುವ ಉತ್ತರ ನೀಡಿದ್ದಾರೆ.
ಕಾಂಗ್ರೆಸ್, ವಿವೇಕಾನಂದ ಮತ್ತು ರಾಮಕೃಷ್ಣ ಪರಮಹಂಸರು ಹೇಳಿಕೊಟ್ಟ ಹಿಂದುತ್ವವನ್ನು ಪಾಲಿಸುತ್ತದೆ. ಆದರೆ ಬಿಜೆಪಿಯದ್ದು ಬೇರೆಯದ್ದೇ ಹಿಂದುತ್ವ ಎಂದಿದ್ದಾರೆ. ಇದೇ ವೇಳೆ, ದ.ಕ. ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಪ್ರಚಾರ ಸಂದರ್ಭದಲ್ಲಿ ಹನುಮಾನ್ ಚಾಲೀಸಾ, ಖುರಾನ್ ಪಠಣ ಮಾಡಿದ್ದನ್ನು ಸಚಿವ ಖಾದರ್ ಸಮರ್ಥಿಸಿಕೊಂಡಿದ್ದಾರೆ.
ಹನುಮಾನ್ ಚಾಲೀಸಾ ಪಠಿಸಿದರೆ ಒಂದು ವೋಟು ಹೆಚ್ವು ಕೊಡಬೇಕು. ಖುರಾನ್ ಪಠಣ ಮಾಡಿದರೆ ಮತ್ತೂ ಹೆಚ್ಚು ವೋಟು ಲಭಿಸಲಿದೆ ಎಂದು ಖಾದರ್ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್, ಚುನಾವಣೆಗಾಗಿ ಮೃದು ಹಿಂದುತ್ವದತ್ತ ಮರಳುತ್ತಿರುವುದರ ಸಂಕೇತ ಇದು ಎನ್ನಲಾಗುತ್ತಿದೆ.