ಉಡುಪಿ: ಶಾಲೆಗೆ ಕರೆದುಕೊಂಡು ಹೋಗುವುದಾಗಿ ಹೇಳಿ 7ನೇ ತರಗತಿ ವಿದ್ಯಾರ್ಥಿನಿಯನ್ನು ಕಿಡ್ನಾಪ್ ಮಾಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ಉಡುಪಿಯ ಕುಂದಾಪುರ ತಾಲೂಕಿನ ಕಟ್ ಬೆಳ್ತೂರಿನಲ್ಲಿ ಪವಿತ್ರಾ ಎಂಬಾಕೆಯನ್ನು ಅಪಹರಿಸಲಾಗಿದೆ. ತನ್ನ ದೊಡ್ಡಪ್ಪನ ಮಗ ಮತ್ತು ಆತನ ಗೆಳೆಯನ ಜೊತೆ ಶಾಲೆಗೆ ಹೋಗುವುದಾಗಿ ಪವಿತ್ರಾ ಮನೆಯಿಂದ ಹೊರಟಿದ್ದಳು. ಆದ್ರೆ ಅತ್ತ ಶಾಲೆಗೂ ಹೋಗದೆ- ವಾಪಾಸ್ ಮನೆಗೂ ಬಾರದೆ ಪವಿತ್ರಾ ನಾಪತ್ತೆಯಾಗಿದ್ದಾಳೆ.
ಸಂಜೆಯಾದರೂ ಮಗಳು ಮನೆಗೆ ಬಾರದಿದ್ದಾಗ ಆತಂಕಗೊಂಡ ಪೋಷಕರು ಕುಂದಾಪುರ ಪೊಲೀಸ್ ಭಾನುವಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ನೇಪಾಳ ಮೂಲದ ಕುಂದಾಪುರದಲ್ಲಿ ಗೂರ್ಖಾ ಕೆಲಸ ಮಾಡುತ್ತಿರುವ ಭರತರಾಜ್ ಮತ್ತು ಸೋನಾರ ಎರಡನೇ ಮಗಳಾಗಿರುವ ಪವಿತ್ರಾ ಇಲ್ಲೇ ವಿದ್ಯಾಭ್ಯಾಸ ಮಾಡುತ್ತಿದ್ದಳು.
ತನ್ನ ಅಣ್ಣನ ಮಗ ವಿಕ್ರಂ ಮತ್ತು ಆತನ ಗೆಳೆಯ ಸುನೀಲ್ ತಮಿಳುನಾಡಿನಿಂದ ವಾರದ ಹಿಂದೆ ಬಂದಿದ್ದರು. ಅವರೇ ಈಕೆಯನ್ನು ತಮಿಳುನಾಡಿಗೆ ಅಪಹರಣ ಮಾಡಿರಬಹುದು ಎಂಬುವುದು ಕುಟುಂಬದವರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ವಿಕ್ರಂಗೆ ಮೂರು ಮದುವೆಯಾಗಿದೆ. ಆತನೇ ಪವಿತ್ರಾಳನ್ನು ಅಪಹರಣ ಮಾಡಿದ್ದಾನೆ ಎಂದು ಕುಟುಂಬಸ್ಥರು ದೂರಿದ್ದಾರೆ. ಪೊಲೀಸರು ಅಪಹರಣ ಪ್ರಕರಣವನ್ನು ಶೀಘ್ರ ಪತ್ತೆ ಮಾಡಬೇಕೆಂದು ಪವಿತ್ರಾಳ ಕುಟುಂಬಸ್ಥರು ಒತ್ತಾಯಿಸಿದ್ದಾರೆ.
ಈ ಸಂದರ್ಭ ಮಾಧ್ಯಮಗಳ ಜೊತೆ ಮಾತನಾಡಿದ ಪವಿತ್ರಾಳ ಅಜ್ಜ, ವಿಕ್ರಂ ಈ ಹಿಂದೆ ಹಲವು ಯುವತಿಯರಿಗೆ ಮೋಸ ಮಾಡಿದ್ದಾನೆ. ಈ ಪ್ರಕರಣದಲ್ಲೂ ನಂಬಲು ಸಾಧ್ಯವಿಲ್ಲ. ಸಂಬಂಧದಲ್ಲಿ ಅಣ್ಣನಾದ್ರೂ ಆತ ಈಕೆಯನ್ನು ಕೂಡ ಮಾರಾಟ ಮಾಡಿರುವ ಸಾಧ್ಯತೆಯಿದೆ. ಈ ಬಗ್ಗೆ ಪೊಲೀಸರು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಬೆಳಗ್ಗೆ 9 ಗಂಟೆಗೆ ಶಾಲೆಗೆ ಹೋಗಿದ್ದಾಳೆ. ತಂಗಿಯೂ ಜೊತೆಗೆ ಹೋಗಿದ್ದಳು. ವಿಕ್ರಂ ಮತ್ತು ಸುನೀಲ್ ಅಪಹರಿಸುವ ಸಾಧ್ಯತೆಯಿದೆ. ಸುನೀಲ್ಗಾಗಿ ಅಪಹರಿಸಿರುವ ಸಾಧ್ಯತೆಯಿದೆ. ಓದಿನಲ್ಲಿ ಪವಿತ್ರಾ ಮುಂದಿದ್ದಳು ಅಂತ ಪವಿತ್ರಾ ತಾಯಿ ಸೋನಾ ಹೇಳಿದ್ದಾರೆ.