– ಕೇವಲ 10 ಗಂಟೆಯಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು
ಹಾಸನ: ಚಿನ್ನಾಭರಣಕ್ಕಾಗಿ ಕಂಟ್ರಾಕ್ಟರ್ ಹತ್ಯೆ (Contractor Murder) ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಅಪ್ರಾಪ್ತ ಬಾಲಕ ಸೇರಿ ಇಬ್ಬರು ಆರೋಪಿಗಳನ್ನು ಅರಸೀಕೆರೆ ಪೊಲೀಸರು ಬಂಧಿಸಿದ್ದಾರೆ.
ಬಿಹಾರ (Bihar) ಮೂಲದ ಕಾರ್ಮಿಕರಾದ ಬಿಕ್ರಂಕುಮಾರ್ (25), ಅಪ್ರಾಪ್ತ ಸಚಿನ್ಕುಮಾರ್ (15) ಬಂಧಿತ ಆರೋಪಿಗಳು. ಇದನ್ನೂ ಓದಿ: ಚಿನ್ನಕ್ಕಾಗಿ ಜೊತೆಗಿದ್ದ ಕಾರ್ಮಿಕರಿಂದಲೇ ಕಂಟ್ರಾಕ್ಟರ್ ಬರ್ಬರ ಹತ್ಯೆ – ಆಭರಣ ದೋಚಿ ಪರಾರಿಯಾದ ದುಷ್ಕರ್ಮಿಗಳು
ಆರೋಪಿ ಬಿಕ್ರಂಕುಮಾರ್ ಬಿಹಾರದ ಪೂರ್ನಿಯಾ ಜಿಲ್ಲೆಯ ರಾಂಪುರ ಗ್ರಾಮದವನಾಗಿದ್ದು, ಅಪ್ರಾಪ್ತ ಬಾಲಕ ಸಚಿನ್ಕುಮಾರ್ ಪೂರ್ನಿಯಾ ಜಿಲ್ಲೆಯ ರೂಪೋಲಿ ಗ್ರಾಮದವನೆಂದು ತಿಳಿದುಬಂದಿದೆ. ಬಿಕ್ರಂಕುಮಾರ್ 2 ತಿಂಗಳ ಹಿಂದೆ ಕುಟುಂಬ ಸಮೇತರಾಗಿ ಕೆಲಸ ಹುಡುಕಿಕೊಂಡು ಅರಸೀಕೆರೆಗೆ ಬಂದಿದ್ದ. ಬಳಿಕ ಒಂದೂವರೆ ತಿಂಗಳು ಕೆಲಸ ಮಾಡಿ, ಹಬ್ಬ ಇದೆ ಎಂದು ಹೇಳಿ ಗ್ರಾಮಕ್ಕೆ ತೆರಳಿದ್ದ. ಬಿಕ್ರಂಕುಮಾರ್ ಪತ್ನಿ ಹಾಗೂ ಮಗುವನ್ನು ಊರಲ್ಲೇ ಬಿಟ್ಟು, ಅಪ್ರಾಪ್ತ ಬಾಲಕನನ್ನು ಕಳೆದ ಹದಿನೈದು ದಿನಗಳ ಹಿಂದೆ ಅರಸೀಕೆರೆಗೆ ಕರೆದುಕೊಂಡು ಬಂದಿದ್ದ. ಇದನ್ನೂ ಓದಿ: ತಪ್ಪಿಲ್ಲದಿದ್ರೂ ನನ್ನ ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡಿದ್ದಾರೆ: ಆಟೋ ಚಾಲಕ
ಕೊಲೆ ಆರೋಪಿಗಳನ್ನು ಅರಸೀಕೆರೆ ನಗರ ಠಾಣೆ ಪೊಲೀಸರು (Arsikere City Police), ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಬಂಧಿತರಿಂದ 2 ಚಿನ್ನದ ಸರ, 3 ಚಿನ್ನದ ಉಂಗುರಗಳು ಹಾಗೂ 1 ಬೈಕ್ ವಶಕ್ಕೆ ಪಡೆದಿದ್ದಾರೆ.
ಏನಿದು ಪ್ರಕರಣ?
ಅರಸೀಕೆರೆ ಪಟ್ಟಣದ ವಿಜಯಕುಮಾರ್ (46), ಕಟ್ಟಡ ಹಾಗೂ ಲೇಬರ್ ಗುತ್ತಿಗೆದಾರರಾಗಿದ್ದರು. ಕೆಎಸ್ಆರ್ಟಿಸಿ ಮುಂಭಾಗ ನಿರ್ಮಾಣವಾಗುತ್ತಿರುವ ಹೊಸ ಹೋಟೆಲ್ ಕಟ್ಟಡದ ಗಾರೆ ಕೆಲಸಕ್ಕೆ ಬಿಕ್ರಂಕುಮಾರ್ ಹಾಗೂ ಅಪ್ರಾಪ್ತ ಬಾಲಕನನ್ನು ಕರೆ ತಂದಿದ್ದರು. ಕೆಲವು ದಿನಗಳಿಂದ ಆರೋಪಿಗಳಾದ ಬಿಕ್ರಂಕುಮಾರ್ ಹಾಗೂ ಅಪ್ರಾಪ್ತ ಬಾಲಕ, ವಿಜಯ್ಕುಮಾರ್ ಜೊತೆಯಲ್ಲೇ ಕೆಲಸ ಮಾಡುತ್ತಿದ್ದರು. ಇದನ್ನೂ ಓದಿ: ಬೆಂಗಳೂರು ಹೊರವಲಯದಲ್ಲಿ ಚಿರತೆ ಪ್ರತ್ಯಕ್ಷ – ಬೋನ್ ಅಳವಡಿಸಿ ಪತ್ತೆ ಕಾರ್ಯಾಚರಣೆ
ವಿಜಯಕುಮಾರ್ ಯಾವಾಗಲೂ ಕೊರಳಿನಲ್ಲಿ ದಪ್ಪದಾದ ಚಿನ್ನದ ಸರ, ನಾಲ್ಕೈದು ಚಿನ್ನದ ಉಂಗುರಗಳನ್ನು ಹಾಕಿಕೊಳ್ಳುತ್ತಿದ್ದರು. ವಿಜಯಕುಮಾರ್ ಮೈಮೇಲಿದ್ದ ಚಿನ್ನದ ಒಡವೆಗಳ ಮೇಲೆ ಆರೋಪಿಗಳ ಕಣ್ಣು ಹಾಕಿದ್ದು, ಅದನ್ನು ಪಡೆಯಲು ಮಾಸ್ಟರ್ ಪ್ಲಾನ್ ಮಾಡಿದ್ದರು.
ಶುಕ್ರವಾರ ತಡರಾತ್ರಿ ಆರೋಪಿಗಳು, ವಿಜಯಕುಮಾರ್ ಅವರಿಗೆ ಕರೆ ಮಾಡಿ ನಮಗೆ ಆರೋಗ್ಯ ಸರಿಯಿಲ್ಲ, ನಮ್ಮನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ, ನಾವು ಹೊರಗಡೆ ಹೋದರೆ ಅನುಮಾನ ಪಡುತ್ತಾರೆ ಎಂದಿದ್ದರು. ತಕ್ಷಣವೇ ವಿಜಯಕುಮಾರ್ ಕಟ್ಟಡದ ಮಾಲೀಕ ಶ್ರೀನಿವಾಸ್ಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಇದನ್ನೂ ಓದಿ: Miss World | ಥಾಯ್ಲೆಂಡ್ನ ಒಪಾಲ್ ಸುಚಾತಾಗೆ 72ನೇ ವಿಶ್ವ ಸುಂದರಿ ಕಿರೀಟ
ಈಗ ನೀನು ಹೋಗುವುದು ಬೇಡ ನಾಳೆ ನೋಡೋಣ ಬಿಡು ಎಂದಿದ್ದರು. ಆದರೆ ವಿಜಯಕುಮಾರ್ ಅವರಿಗೆ ಏನಾದರೂ ಹೆಚ್ಚು ಕಡಿಮೆ ಆದರೆ ನಾನು ಹೊಣೆಗಾರನಾಗಬೇಕಾಗುತ್ತದೆ, ಹೋಗಿ ನೋಡಿಕೊಂಡು ಬರುತ್ತೇನೆ ಎಂದು ತಮ್ಮ ಸ್ಕೂಟಿಯಲ್ಲಿ ಕಟ್ಟಡದ ಬಳಿಗೆ ತೆರಳಿದ್ದರು. ವಿಜಯಕುಮಾರ್ ಬರುವುದನ್ನೇ ಆರೋಪಿಗಳು ಕಾಯುತ್ತ ನಿಂತಿದ್ದರು. ನಿರ್ಮಾಣ ಹಂತದ ಕಟ್ಟಡದ ಮುಂದೆ ಸ್ಕೂಟಿ ನಿಲ್ಲಿಸಿ ಒಳಗೆ ಹೋಗುತ್ತಿದ್ದಂತೆ ಆರೋಪಿಗಳು, ಕಬ್ಬಿಣದ ರಾಡ್ನಿಂದ ಬಲವಾಗಿ ತಲೆಗೆ ಹೊಡೆದಿದ್ದು, ಪರಿಣಾಮ ಆ ಕೂಡಲೇ ವಿಜಯಕುಮಾರ್ ನೆಲಕ್ಕೆ ಬಿದ್ದಿದ್ದರು. ನಂತರ ಸಣ್ಣ ಗ್ಯಾಸ್ ಸಿಲಿಂಡರ್ನಿಂದ ತಲೆ, ಮುಖವನ್ನು ಜಜ್ಜಿ ಭೀಕರವಾಗಿ ಕೊಲೆ ಮಾಡಿದ್ದರು. ಇದನ್ನೂ ಓದಿ: ಮಳೆ ಅಬ್ಬರ; 5 ತಿಂಗಳು ಬೆಂಗಳೂರು, ಮಂಗಳೂರು ರೈಲು ಸಂಚಾರ ಸ್ಥಗಿತ
ವಿಜಯಕುಮಾರ್ ಮೃತಪಟ್ಟ ನಂತರ ಆರೋಪಿಗಳು ಅವರ ಕೊರಳಿನಲ್ಲಿದ್ದ ಚಿನ್ನದ ಚೈನ್, ಕೈಯಲ್ಲಿದ್ದ ಮೂರು ಉಂಗರುಗಳನ್ನು ಕಸಿದುಕೊಂಡಿದ್ದರು. 1 ಉಂಗುರ ಬೆರಳಿನಿಂದ ಬಾರದಿದ್ದಾಗ ಬೆರಳನ್ನು ತುಂಡರಿಸಿ ಬೆರಳಿನ ಸಮೇತ ಉಂಗುರವನ್ನು ಎತ್ತಿಕೊಂಡು ವಿಜಯಕುಮಾರ್ ಅವರ ಸ್ಕೂಟಿಯಲ್ಲಿಯೇ ಸ್ಥಳದಿಂದ ಹೊರಟಿದ್ದರು. ಬಳಿಕ ಪಟ್ಟಣದ ಹೋಟೆಲ್ವೊಂದರ ಮುಂದೆ ಸ್ಕೂಟಿ ನಿಲ್ಲಿಸಿ ಎಸ್ಕೇಪ್ ಆಗಿದ್ದರು. ಆರೋಪಿಗಳು ವಿಜಯಕುಮಾರ್ ಅವರನ್ನು ಕೊಲೆ ಮಾಡಿ ಸ್ಕೂಟಿಯಲ್ಲಿ ಎಸ್ಕೇಪ್ ಆಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.