ಅಣ್ಣನ ರಕ್ಷಣೆಗೆ ತೆರಳಿದ ತಮ್ಮ- ಇಬ್ಬರೂ ದುರ್ಮರಣ

Public TV
0 Min Read
Electricity

ರಾಯಚೂರು: ವಿದ್ಯುತ್ ಸ್ಪರ್ಶಿಸಿ ಸಹೋದರರಿಬ್ಬರು ಮೃತಪಟ್ಟ ಘಟನೆ ಸಿಂಧನೂರು ತಾಲೂಕಿನ ಸಾಲಗುಂದ ಗ್ರಾಮದಲ್ಲಿ ನಡೆದಿದೆ.

ಸಾಲಗುಂದ ಗ್ರಾಮದ ಹುಸೇನ್ ಬಾಷಾ (36) ಹಾಗೂ ಹಸನ್ ಬಾಷಾ (34) ಮೃತ ದುರ್ದೈವಿಗಳು. ಗ್ರಾಮದಲ್ಲಿ ಭಾನುವಾರ ಸಂಜೆ ಭಾರೀ ಗಾಳಿ ಬೀಸಿದ್ದು, ವಿದ್ಯುತ್ ತಂತಿಗಳು ತುಂಡಾಗಿ ಬಿದ್ದಿದ್ದವು.

ಅದನ್ನು ಸರಿಪಡಿಸಲು ಹೋಗಿದ್ದ ಹುಸೇನ್‍ಗೆ ವಿದ್ಯುತ್ ಶಾಕ್ ಹೊಡೆದಿದೆ. ತಕ್ಷಣವೇ ಅಣ್ಣನ ರಕ್ಷಣೆಗೆ ಮಾಡಲು ಹಸನ್ ಹೋಗಿದ್ದಾರೆ. ಪರಿಣಾಮ ಇಬ್ಬರೂ ಮೃತಪಟ್ಟಿದ್ದಾರೆ.

ಸಿಂಧನೂರು ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *