– ಪ್ರಕರಣ ಮುಚ್ಚಿ ಹಾಕಲು ಸಂತ್ರಸ್ತರಿಗೆ 50 ಸಾವಿರ ರೂ. ಆಫರ್
ಹೈದರಾಬಾದ್: ಆಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ತಾಂಜಗಿ ಗ್ರಾಮದಲ್ಲಿ ಸ್ಥಳೀಯ ಜಾತ್ರೆಗೆ ಹೋಗಲು ನಿರ್ಧರಿಸಿದ್ದ ಬುಡಕಟ್ಟು ಜನಾಂಗದ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಗ್ರಾಮದ 8 ಜನರ ತಂಡ ಸಾಮೂಹಿಕ ಅತ್ಯಾಚಾರವೆಸಗಿದೆ.
ಇಬ್ಬರು ಬಾಲಕಿಯರು ಖುಷಿಯಿಂದಲೇ ಜಾತ್ರೆಗೆ ಹೊರಟಿದ್ದರು. ಈ ಸಂದರ್ಭದಲ್ಲಿ ಅವರನ್ನು ಅತ್ಯಾಚಾರವೆಸಗಿ 50,000 ರೂ. ಪರಿಹಾರ ನೀಡಿ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಿದ್ದಾರೆ.
ಆರೋಪಿ ವಸಂತ್, ಚುನಾಯಿತ ಪ್ರತಿನಿಧಿಯೊಬ್ಬರ ಮಗನಾಗಿದ್ದರೆ, ಮತ್ತೊಬ್ಬ ಆರೋಪಿ ನಾಗೇಂದ್ರ ಹೆಡ್ ಕಾನ್ಸೇಟಬಲ್ ಒಬ್ಬರ ಪುತ್ರನಾಗಿದ್ದಾನೆ. ಈಗ ಇವರಿಬ್ಬರೂ ಸೇರಿದಂತೆ ಆರು ಜನ ಸ್ನೇಹಿತರು ತಲೆಮರೆಸಿಕೊಮಡಿದ್ದಾರೆ.
ಜಾತ್ರೆಗೆ ಬಾಲಕಿಯರು ತೆರಳುತ್ತಿರುವಾಗ ಭಾರೀ ಮಳೆ ಬಂದ ಹಿನ್ನೆಲೆಯಲ್ಲಿ ಒಂದು ಅಂಗಡಿಯಲ್ಲಿ ಆಶ್ರಮ ಪಡೆದಿದ್ದರು. ಈ ವೇಳೆ ಅಲ್ಲಿಗೆ ಆಗಮಿಸಿದ ಆರೋಪಿಗಳು ಅತ್ಯಾಚಾರವೆಸಗಿ ಪರಾರಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಪೊಲೀಸರಿಗೆ ದೂರು ನೀಡುವ ಬದಲಾಗಿ ಬುಡಕಟ್ಟು ಸಮುದಾಯದ ಸಂಪ್ರದಾಯದ ಪ್ರಕಾರ ಗ್ರಾಮದ ಹಿರಿಯರನ್ನು ಭೇಟಿಯಾಗಿ ಪ್ರಕರಣದ ಮುಚ್ಚಿ ಹಾಕಲು ಮುಂದಾಗಿದ್ದಾರೆ.
ಸ್ಥಳೀಯ ವರದಿಗಳು ಹೇಳುವ ಪ್ರಕಾರ ಇಬ್ಬರು ಅಪ್ರಾಪ್ತರಿಗೆ 50 ಸಾವಿರ ರೂ. ನೀಡಲು ಬಂದಾಗ ಅದನ್ನು ಅವರು ಒಪ್ಪಿಕೊಳ್ಳಲು ನಿರಾಕರಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಚಿಂತಾಪಲ್ಲಿ ಪೊಲೀಸರು ಅತ್ಯಾಚಾರ ಮತ್ತು ಪೋಸ್ಕೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ.