-ಬಳ್ಳಾರಿಯಲ್ಲಿ ಮನೆಯ ಸೀಟ್ ಕುಸಿದು ಎರಡು ಸಾವು
– ಕಾರವಾರದಲ್ಲಿ ಸಿಡಿಲುಬಡಿದು ಜಾನುವಾರು ಸಾವು
ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಲವೆಡೆ ಭಾರೀ ಬಿರುಗಾಳಿ ಸಹಿತ ಮಳೆಯಾಗಿದೆ. ಹೊಸೂರು ಗ್ರಾಮದಲ್ಲಿ ಮರ, ವಿದ್ಯುತ್ ಕಂಬಗಳು ಧರೆಗುರುಳಿದ್ದು, ಮನೆಗಳ ಛಾವಣಿ ಹಾರಿಹೋಗಿವೆ.
Contents
ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿಯೂ ಮಳೆಯಾಗಿದ್ದು, ಮನೆಯೊಂದರ ಹೆಂಚೊಂದು ಹಾರಿಹೋಗಿ ಮನೆಯಲ್ಲಿದ್ದ ಕಂಪ್ಯೂಟರ್ ಮತ್ತು ದಿನಬಳಕೆಯ ವಸ್ತುಗಳು ನೀರು ಪಾಲಾಗಿವೆ. ಬಳ್ಳಾರಿಯಲ್ಲಿ ಕಳೆದ ರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆಗೆ ಇಬ್ಬರು ಬಲಿಯಾಗಿದ್ದಾರೆ.
ಹೊಸಪೇಟೆಯ ಊರಮ್ಮ ದೇವಿ ದೇವಸ್ದಾನದ ಬಳಿಯ ಮನೆಯ ಸೀಟ್ ಕುಸಿದ ಬಿದ್ದ ಪರಿಣಾಮ ಮನೆಯಲ್ಲಿದ್ದ ನಿವಾಸಿ 35 ವರ್ಷದ ಸಣ್ಣ ಮಾರೆಪ್ಪ ಮತ್ತು 25 ವರ್ಷದ ಮಹಿಳೆ ರಾಜವ್ವ ಮೃತಪಟ್ಟಿದ್ದಾರೆ. ಅತ್ತ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಓರಲಗಿಯಲ್ಲಿ ಸಿಡಿಲು ಬಡಿದು ಎರಡು ಹಸುಗಳು ಸಾವನ್ನಪ್ಪಿವೆ.