ಚೆನ್ನೈ: ಮದುವೆಗಾಗಿ ದೇವಸ್ಥಾನಕ್ಕೆ ಬಂದ 2 ಕುಟುಂಬಗಳ ಮಧ್ಯೆ ಹೊಡೆದಾಟವಾಗಿರುವ ಘಟನೆ ತಮಿಳುನಾಡಿನ ಕುಂದ್ರತ್ತೂರಿನ ಮುರುಗನ್ ದೇವಸ್ಥಾನದಲ್ಲಿ ನಡೆದಿದೆ.
ಮುರುಗನ್ ದೇವಸ್ಥಾನದಲ್ಲಿ ಮದುವೆ ಮಾಡಲು ಎರಡು ಬೇರೆಬೇರೆ ಕುಟುಂಬದವರು ಆಗಮಿಸಿದ್ದರು. ಆದರೆ ಒಂದು ಬಾರಿಗೆ ಇಲ್ಲಿ ಒಂದು ಕುಟುಂಬ ಮಾತ್ರ ಮದುವೆ ಮಾಡಬಹುದು. ಆದರೆ ಈ ಎರಡೂ ಕುಟುಂಬಗಳು ತಾವು ಮೊದಲು ಎಂದು ಕೂಗಾಡಿಕೊಂಡಿದ್ದಾರೆ. ಒಂದು ಕುಟುಂಬಕ್ಕೆ ಸೇರಿದ ವಧುವನ್ನು ಹಿಡಿದು ಎಳೆದಾಡಲಾಗಿದೆ. ಅದನ್ನು ನೋಡಲಾಗದೆ ಇನ್ನೊಂದು ಕುಟುಂಬದ ವರ ಹೋಗಿ ನಿಲ್ಲಿಸಲು ಪ್ರಯತ್ನಿಸಿದ್ದಾನೆ. ಆಗ ಆತನಿಗೂ ಏಟು ಬಿದ್ದಿದೆ.
Which couple will tie the knot first? Two families fight it out at the Murugan temple in Chennai’s Kundrathur area! Looks like the groom also got caught in between ????????♀️???? pic.twitter.com/AZlek8DUEN
— Shilpa (@Shilpa1308) August 20, 2021
ಕುಟುಂಬದವರು ಅದೆಷ್ಟರ ಮಟ್ಟಿಗೆ ಹೊಡೆದಾಟದಲ್ಲಿ ತಲ್ಲೀನರಾಗಿದ್ದಾರೆ ಎಂದರೆ ಅವರಿಗೆ ಕೊರೊನಾ ನಿಯಂತ್ರಣಾ ನಿಯಮಗಳನ್ನು ತಾವು ಪಾಲಿಸುತ್ತಿಲ್ಲ ಎಂಬ ವಿಷಯವೇ ಮರೆತುಹೋಗಿದೆ. 21 ಸೆಕೆಂಡ್ಗಳ ವೀಡಿಯೋಕ್ಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ತಿಂಗಳಲ್ಲಿ ಇರುವ ಕೊನೆಯ ಒಳ್ಳೆಯ ಮುಹೂರ್ತ ಆಗಿದ್ದರಿಂದ ಎರಡೂ ಕುಟುಂಬಗಳೂ ಪರಸ್ಪರ ಕಿತ್ತಾಡಿಕೊಂಡಿವೆ. ಮುಹೂರ್ತ ತಪ್ಪಿದರೆ ಮತ್ತೆ ಮದುವೆ ವಿಳಂಬವಾಗುತ್ತದೆ ಎಂಬ ಆತಂಕದಲ್ಲಿ ದೈಹಿಕ ಹಿಂಸಾಚಾರ ನಡೆಸಿಕೊಂಡಿದ್ದಾರೆಂದು ವರದಿಯಾಗಿದೆ. ಈ ವೀಡಿಯೋಗೆ ವಿವಿಧ ರೂಪದ ಕಮೆಂಟ್ಗಳನ್ನು ನೆಟ್ಟಿಗರು ಬರೆದಿದ್ದಾರೆ.