Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Sports

ಆರ್‌ಸಿಬಿ ಖರೀದಿಗೆ ಆಸಕ್ತಿ ತೋರಿಸಿದ ಇಬ್ಬರು ಬಿಲಿಯನೇರ್‌ ಕನ್ನಡಿಗರು!

Public TV
Last updated: November 7, 2025 3:30 pm
Public TV
Share
3 Min Read
RCB Champions
SHARE

ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು(RCB) ತಂಡವನ್ನು ಖರೀದಿಸಲು ಇಬ್ಬರು ಕನ್ನಡಿಗರು ಮುಂದೆ ಬಂದಿದ್ದಾರೆ ಎಂದು ವರದಿಯಾಗಿದೆ.

ಆರ್‌ಸಿಬಿ ತಂಡವನ್ನು ಡಿಯಾಜಿಯೊ (Diageo) ಮಾರಾಟ ಮಾಡಲಿದೆ ಎಂದು ಮಾಲೀಕತ್ವ ಹೊಂದಿರುವ ಯುನೈಟೆಡ್ ಸ್ಪಿರಿಟ್ಸ್ (United Spirits) ಅಧಿಕೃತವಾಗಿ ಹೇಳಿದ ಬೆನ್ನಲ್ಲೇ ಹಲವು ಖರೀದಿದಾರರ ಹೆಸರು ಓಡಾಡುತ್ತಿದೆ. ಈ ಪಟ್ಟಿಗೆ ಈಗ ಇಬ್ಬರು ಕನ್ನಡಿಗ ಶತಕೋಟ್ಯಧಿಪತಿಗಳು ಹೆಸರು ಸೇರ್ಪಡೆಯಾಗಿದೆ.

ಡಿಸ್ಕೌಂಟ್ ಬ್ರೋಕರೇಜ್ ಪ್ಲಾಟ್‌ಫಾರ್ಮ್ ಜೆರೋಧಾದ (Zerodha) ಸಹ-ಸಂಸ್ಥಾಪಕ ನಿಖಿಲ್ ಕಾಮತ್ (Nikhil Kamath) ಮತ್ತು ಮಣಿಪಾಲ್ ಎಜುಕೇಶನ್ ಅಂಡ್ ಮೆಡಿಕಲ್ ಗ್ರೂಪ್ (MEMG) ಅಧ್ಯಕ್ಷ ರಂಜನ್ ಪೈ (Ranjan Pai) ಆರ್‌ಸಿಬಿ ತಂಡವನ್ನು ಖರೀದಿಸಲು ಆಸಕ್ತಿ ವಹಿಸಿದ್ದಾರೆ ಎಂದು ಮೂಲಗಳನ್ನು ಆಧರಿಸಿ ಮಾಧ್ಯಮವೊಂದು ವರದಿ ಮಾಡಿದೆ.

ಆರ್‌ಸಿಬಿಯಲ್ಲಿ ಬೆಂಗಳೂರು ಇದೆ. ಹೀಗಾಗಿ ಕರ್ನಾಟಕದ ವ್ಯಕ್ತಿಗಳು ಮಾಲೀಕತ್ವ ಹೊಂದಿದರೆ ಅದರ ಬ್ರ್ಯಾಂಡ್‌ ಮೌಲ್ಯ ಮತ್ತಷ್ಟು ಹೆಚ್ಚಾಗಬಹುದು ಮತ್ತು ಅಭಿಮಾನಿಗಳು ಇಷ್ಟಪಡಬಹುದು ಎನ್ನುವ ಕಾರಣಕ್ಕೆ ಆರ್‌ಸಿಬಿ ಖರೀದಿಗೆ ಕನ್ನಡಿಗ ಉದ್ಯಮಿಗಳು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಆರ್‌ಸಿಬಿಯಲ್ಲೇ ಉಳಿಯಲಿದ್ದಾರೆ ಸ್ಮೃತಿ, ಪೆರ್ರಿ – ಯಾವ ತಂಡದಲ್ಲಿ ಯಾರು? ಯಾರಿಗೆ ಎಷ್ಟು ಕೋಟಿ?

ಜೆರೋಧಾ ಸಹ ಸಂಸ್ಥಾಪಕ ನಿಖಿಲ್‌ ಕಾಮತ್‌ ಮತ್ತು ಮಣಿಪಾಲ ಗ್ರೂಪ್‌ ಮುಖ್ಯಸ್ಥ ರಂಜನ್‌ ಪೈ
ಜೆರೋಧಾ ಸಹ ಸಂಸ್ಥಾಪಕ ನಿಖಿಲ್‌ ಕಾಮತ್‌ ಮತ್ತು ಮಣಿಪಾಲ ಗ್ರೂಪ್‌ ಮುಖ್ಯಸ್ಥ ರಂಜನ್‌ ಪೈ

ಕೋವಿಡ್‌ ಲಸಿಕೆ (Covid Vaccine) ಕೋವಿಶೀಲ್ಡ್‌ ತಯಾರಿಸಿದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ (SII) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅದಾರ್ ಪೂನವಾಲಾ (Adar Poonawalla) ಅವರು ಆರ್‌ಸಿಬಿ ಖರೀದಿಗೆ ಆಸಕ್ತಿ ತೋರಿಸಿದ್ದಾರೆ. ಹೀಗಾಗಿ ಈ ಮೂವರು ಒಳಗೊಂಡ ಒಕ್ಕೂಟವು ಆರ್‌ಸಿಬಿ ಖರೀದಿಗೆ ಬಿಡ್‌ ಮಾಡಬಹುದು ಎನ್ನಲಾಗುತ್ತಿದೆ. ಆದರೆ ಇಲ್ಲಿಯವರೆಗೆ ನಿಖಿಲ್‌ ಕಾಮತ್‌ ಮತ್ತು ರಂಜನ್‌ ಪೈ ಆರ್‌ಸಿಬಿ ಖರೀದಿಗೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಫೋರ್ಬ್ಸ್ ಪ್ರಕಾರ ರಂಜನ್ ಪೈ ಅವರ ಅಂದಾಜು ಸಂಪತ್ತಿನ ನಿವ್ವಳ ಮೌಲ್ಯ 2.8 ಬಿಲಿಯನ್ ಡಾಲರ್‌ ಆಗಿದ್ದರೆ, ಕಾಮತ್ ಅವರ ಸಂಪತ್ತಿನ ಮೌಲ್ಯ 2.5 ಬಿಲಿಯನ್ ಡಾಲರ್‌ ಆಗಿದೆ. ಪೂನವಾಲ್ಲಾ 20 ಬಿಲಿಯನ್‌ ಡಾಲರ್ ಮೌಲ್ಯದ ಸಂಪತ್ತು ಹೊಂದಿದ್ದಾರೆ.

ವರ್ಷದಿಂದ ವರ್ಷಕ್ಕೆ ಐಪಿಎಲ್‌ ಬ್ರ್ಯಾಂಡ್‌ ಮೌಲ್ಯ ಏರಿಕೆಯಾಗುತ್ತಿದೆ. 17 ವರ್ಷದ ಬಳಿಕ ಚಾಂಪಿಯನ್‌ ಪಟ್ಟ ಅಲಂಕರಿಸಿರುವ ಆರ್‌ಸಿಬಿ ಅತ್ಯಂತ ಮೌಲ್ಯಯುತ ತಂಡಗಳಲ್ಲಿ ಒಂದಾಗಿದೆ. ಜಾಗತಿಕ ಹೂಡಿಕೆ ಬ್ಯಾಂಕ್ ಹೌಲಿಹಾನ್ ಲೋಕಿ ಆರ್‌ಸಿಬಿಯನ್ನು ಅತ್ಯಂತ ಮೌಲ್ಯಯುತ ಐಪಿಎಲ್ ಫ್ರಾಂಚೈಸಿ ಎಂದು ಶ್ರೇಣೀಕರಿಸಿದೆ. ಚಾಂಪಿಯನ್‌ಶಿಪ್ ವಿಜಯದ ನಂತರ ಅದರ ಮೌಲ್ಯ ಸುಮಾರು 269 ಮಿಲಿಯನ್ ಡಾಲರ್‌ಗೆ (ಅಂದಾಜು 23 ಸಾವಿರ ಡಾಲರ್‌) ಏರಿಕೆಯಾಗಿದೆ ಎಂದು ಅಂದಾಜಿಸಿದೆ. ಪುರುಷರ ಮತ್ತು ಮಹಿಳೆಯರ ಎರಡೂ ತಂಡ ಚಾಂಪಿಯನ್‌ ಪಟ್ಟ ಅಲಂಕರಿಸಿರುವ ಕಾರಣ ಈಗ ಮೌಲ್ಯಯುತ ತಂಡವಾಗಿ ಹೊರಹೊಮ್ಮಿದೆ. ಇದನ್ನೂ ಓದಿ: ರಂಜನ್‌ ಪೈ ಒಡೆತನದ ಮಣಿಪಾಲ ಗ್ರೂಪ್‌ ತೆಕ್ಕೆಗೆ ಹೋಗುತ್ತಾ ಬೈಜೂಸ್‌ ಕಂಪನಿ?

special RCB victory parade in Bengaluru on Wednesday

ಯಾವ ತಂಡದ ಮೌಲ್ಯ ಎಷ್ಟು?
ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು – 269 ಮಿಲಿಯನ್‌ ಡಾಲರ್‌
ಮುಂಬೈ ಇಂಡಿಯನ್ಸ್‌ – 242 ಮಿಲಿಯನ್‌ ಡಾಲರ್‌
ಚೆನ್ನೈ ಸೂಪರ್‌ ಕಿಂಗ್ಸ್‌ – 235 ಮಿಲಿಯನ್‌ ಡಾಲರ್‌
ಪಂಜಾಬ್‌ ಕಿಂಗ್ಸ್‌ – 141 ಮಿಲಿಯನ್‌ ಡಾಲರ್‌

ಐಪಿಎಲ್‌ ಒಂದರ ಬ್ರ್ಯಾಂಡ್‌ ಮೌಲ್ಯ 3.9 ಬಿಲಿಯನ್‌ ಡಾಲರ್‌ ಎಂದು ಅಂದಾಜಿಸಲಾಗಿದ್ದು ಕಳೆದ ವರ್ಷಕ್ಕಿಂತ ಈ ವರ್ಷ 13.8% ಹೆಚ್ಚಳ ಕಂಡಿದೆ. ಎಲ್ಲಾ ತಂಡಗಳು, ವ್ಯವಹಾರ ಎಲ್ಲಾ ಸೇರಿ ಒಟ್ಟಾರೆ ಎಂಟರ್‌ಪ್ರೈಸಸ್‌ ಮೌಲ್ಯ 18.5 ಬಿಲಿಯನ್‌ ಡಾಲರ್‌ ಎಂದು ಅಂದಾಜಿಸಲಾಗಿದೆ.

RCB Team

ಖರೀದಿಗೆ ಯಾರೆಲ್ಲಾ ಆಸಕ್ತಿ ತೋರಿಸಿದ್ದಾರೆ?
ಆರ್‌ಸಿಬಿಯನ್ನು ಖರೀದಿಸಲು ಹಲವು ಸಂಸ್ಥೆಗಳು ಆಸಕ್ತಿಯನ್ನು ತೋರಿಸಿವೆ. ಅಮೆರಿಕ ಮೂಲದ ಖಾಸಗಿ ಹೂಡಿಕೆ ಸಂಸ್ಥೆ, ಅದಾನಿ ಗ್ರೂಪ್, ಜಿಂದಾಲ್ ಕುಟುಂಬದ ನೇತೃತ್ವದ ಜೆಎಸ್‌ಡಬ್ಲ್ಯೂ ಗ್ರೂಪ್, ದೇವಯಾನಿ ಇಂಟರ್‌ನ್ಯಾಷನಲ್ ಗ್ರೂಪ್‌ನ ರವಿ ಜೈಪುರಿಯಾ ಖರೀದಿಸಲು ಆಸಕ್ತಿ ತೋರಿಸಿದ್ದಾರೆ.

TAGGED:nikhil kamathRanjan PaiUnited Spiritsಆರ್‍ಸಿಬಿಐಪಿಎಲ್ನಿಖಿಲ್‌ ಕಾಮತ್‌ಬೆಂಗಳೂರುರಂಜನ್‌ ಪೈ
Share This Article
Facebook Whatsapp Whatsapp Telegram

Cinema news

Ashwini Gowda Gilli
ಮಾಜಿ ಸ್ಪರ್ಧಿಗಳೆದುರು ಗಿಲ್ಲಿ ಬೆನ್ನಿಗೆ ನಿಂತ ಅಶ್ವಿನಿ ಗೌಡ
Cinema Latest Sandalwood Top Stories
Tiger Shroff Cinema Bollywood
ಮಸ್ತಿ-4 ನಿರ್ದೇಶಕನ ಜೊತೆ ಕೈಜೋಡಿಸಿದ ಟೈಗರ್ ಶ್ರಾಫ್?
Bollywood Cinema Latest Top Stories
Devara
ಜೂ.ಎನ್‌ಟಿಆರ್ ನಟನೆಯ ದೇವರ ಪಾರ್ಟ್-2 ನಿಂತೋಯ್ತಾ..?
Bollywood Cinema Districts Karnataka Latest Top Stories
pawan kalyan OG
ಪವನ್‌ ಕಲ್ಯಾಣ್ ಸಿನಿಮಾಗಳು ಸಾಲು ಸಾಲು ಸೋಲು – ಓಜಿ ಪಾರ್ಟ್-2ಗೆ ಸ್ಟಾರ್ಟ್ ಆಗಲ್ವಾ?
Cinema Latest Top Stories

You Might Also Like

Modi
Districts

ಪ್ರಧಾನಿ ಮೋದಿಯಿಂದ ಬಂಗಾರದ ತೀರ್ಥ ಮಂಟಪ ಉದ್ಘಾಟನೆ, ಭಗವದ್ಗೀತೆಯ 10 ಶ್ಲೋಕ ಪಠಣ – ಉಡುಪಿಯಲ್ಲಿಂದು ಹತ್ತಾರು ವಿಶೇಷ!

Public TV
By Public TV
8 minutes ago
Udupi Modi
Districts

ಉಡುಪಿಗೆ ಇಂದು ಪ್ರಧಾನಿ ಮೋದಿ ಆಗಮನ – ಕಾರ್ಯಕ್ರಮ 40 ನಿಮಿಷ ಪ್ರೀಪೋನ್‌

Public TV
By Public TV
37 minutes ago
Udupi Pm Modi
Karnataka

ಇಂದು ಕೃಷ್ಣನಗರಿ ಉಡುಪಿಗೆ ಮೋದಿ – ಭಗವದ್ಗೀತೆ ಧ್ಯಾನ ಮಂದಿರ ಉದ್ಘಾಟಿಸಲಿರುವ ಪ್ರಧಾನಿ

Public TV
By Public TV
48 minutes ago
Mysuru Tiger Attack
Districts

Mysuru | ಹುಣಸೂರು ತಾಲೂಕಿನಲ್ಲೂ ಶುರುವಾಯ್ತು ಹುಲಿ ಕಾಟ; ಇಬ್ಬರು ರೈತರ ಮೇಲೆ ದಾಳಿ

Public TV
By Public TV
1 hour ago
METRO GIRL
Latest

ಮುಗುಳ್ನಗೆಯಲ್ಲಿ ಹೃದಯ ದೋಚಿ ಹೋದವಳಿಗೊಂದು ಪತ್ರ..!

Public TV
By Public TV
1 hour ago
2019 Public tv old video viral Legal action against miscreants
Bengaluru City

ಕಾಂಗ್ರೆಸ್ ಪ್ರಸ್ತುತ ಬೆಳವಣಿಗೆ: ಪಬ್ಲಿಕ್ ಟಿವಿಯ 2019ರ ವಿಡಿಯೋ ಲಿಂಕ್ ಮಾಡಿ ವೈರಲ್- ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ

Public TV
By Public TV
9 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?