ಈಜಲು ಹೋಗಿದ್ದ ವ್ಯಕ್ತಿ ಮೊಸಳೆ ಪಾಲು

Public TV
1 Min Read
bly 5

ಬಳ್ಳಾರಿ: ಈಜಲು ಹೋಗಿದ್ದ ವ್ಯಕ್ತಿಯನ್ನು ಮೊಸಳೆಯೊಂದು ಕಚ್ಚಿ ತಿಂದಿರುವ ಘಟನೆ ಜಿಲ್ಲೆಯ ಸಿರುಗುಪ್ಪ ತಾಲೂಕಿನ ವಿನಾಯಕ ಕ್ಯಾಂಪ್ ಬಳಿಯ ತುಂಗಭದ್ರಾ ನದಿ ದಡದಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ರಹೆಮತ್ ಅಲಿ (30) ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ ರಹೆಮತ್ ಅಲಿ ವಿನಾಯಕ್ ಕ್ಯಾಂಪ್ ಬಳಿಯ ತುಂಗಭದ್ರಾ ನದಿಯಲ್ಲಿ ಸ್ನಾನಕ್ಕೆ ಹೋಗಿದ್ದನು.

byl 1

ಇತ್ತ ಸ್ನಾನಕ್ಕೆ ಹೋಗಿದ್ದ ಅಲಿ ತುಂಬಾ ಸಮಯವಾದರೂ ಮನೆಗೆ ವಾಪಸ್ ಬಂದಿರಲಿಲ್ಲ. ಇದರಿಂದ ಮನೆಯವರು ಗಾಬರಿಗೊಂಡು ನದಿಯಲ್ಲಿ ಹುಡುಕಾಟ ನಡೆಸಿದ್ದಾರೆ. ಕೆಲ ಘಂಟೆಗಳ ಕಾಲ ಹುಡುಕಾಟದ ಬಳಿಕ ರೆಹಮತ್ ಮೃತದೇಹ ನದಿಯಲ್ಲಿ ಪತ್ತೆಯಾಗಿದೆ. ದೇಹದ ಬಹುತೇಕ ಭಾಗವನ್ನು ಮೊಸಳೆ ಕಚ್ಚಿ ತಿಂದಿದೆ.

ಈ ಸಂಬಂಧ ಸಿರಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತ ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

Share This Article
Leave a Comment

Leave a Reply

Your email address will not be published. Required fields are marked *