108 ಸಿಬ್ಬಂದಿಯ ಲಂಚಕ್ಕೆ ಡೆಂಘೀ ಪೀಡಿತ ಬಾಲಕ ಬಲಿ!

Public TV
1 Min Read
TMK 108 DEATH

ತುಮಕೂರ: 108 ಸಿಬ್ಬಂದಿಯ ಲಂಚಕ್ಕೆ ಡೆಂಘೀ ಪೀಡಿತ ಬಾಲಕನೊಬ್ಬ ಬಲಿಯಾಗಿರುವ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ವೈಎನ್ ಹಳ್ಳಿಯಲ್ಲಿ ನಡೆದಿದೆ.

ವೆಂಕಟಸ್ವಾಮಿ-ಸುಗುಣಮ್ಮ ದಂಪತಿಯ ಮಗನಾದ ಶ್ರೀನಿಧಿ(8) ಮೃತ ಬಾಲಕ. ಶ್ರೀನಿಧಿ ಕಳೆದ ಮೂರ್ನಾಲ್ಕು ದಿನಗಳಿಂದ ಡೆಂಘೀ ಜ್ವರದಿಂದ ಬಳಲುತ್ತಿದ್ದ. ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸಲಹೆ ನೀಡಿದ್ದರು.

ಈ ವೇಳೆ 108 ಸಿಬ್ಬಂದಿಗೆ ಮೃತ ಶ್ರೀನಿಧಿ ಪೋಷಕರು ತುರ್ತಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಮನವಿ ಮಾಡಿದ್ದಾರೆ. ಸಮಯ ಸಾಧಕ 108 ಸಿಬ್ಬಂದಿ ಹಣ ಕೊಟ್ಟರೆ ಮಾತ್ರ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುವುದಾಗಿ ಎಂದು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ.

ಕೊನೆಗೂ 108 ಸಿಬ್ಬಂದಿ 2ಗಂಟೆ ತಡವಾಗಿ ಬಾಲಕನನ್ನ ತುಮಕೂರು ಜಿಲ್ಲಾಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಆ ವೇಳೆಗಾಗಲೇ ಬಾಲಕನ ಸ್ಥಿತಿ ತೀರಾ ಹದಗೆಟ್ಟಿದ್ದು, ವೈದ್ಯರು ಬಾಲಕನನ್ನ ಕೂಡಲೇ ಬೆಂಗಳೂರಿಗೆ ರವಾನಿಸುವಂತೆ ಹೇಳಿದ್ದಾರೆ. ಹಾಗಾಗಿ ಬಾಲಕನನ್ನ ಬೆಂಗಳೂರಿಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯದಲ್ಲಿ ಬಾಲಕ ಮೃತಪಟ್ಟಿದ್ದಾನೆ.

TMK 108 DEATH 2 1

 

Share This Article
Leave a Comment

Leave a Reply

Your email address will not be published. Required fields are marked *