ಬಂಧನದ ಬೆದರಿಕೆ ಒಡ್ಡಿ ಹಣ ಪೀಕಿದ ಪೇದೆ: ಆರೋಪ

Public TV
1 Min Read
TMK Police

ತುಮಕೂರು: ನಗರದ ಕ್ಯಾತಸಂದ್ರ ಪೊಲೀಸ್ ಠಾಣೆಯ ಪೇದೆಯೊಬ್ಬರ ವಿರುದ್ಧ ಕಿರುಕುಳ ಆರೋಪ ಕೇಳಿಬಂದಿದೆ.

ಗೋಕುಲ ಬಡಾವಣೆ ನಿವಾಸಿ ನಾಗೇಂದ್ರಯ್ಯ ಪೇದೆ ಕಿರಣ್ ಕುಮಾರ್ ವಿರುದ್ಧ ಆರೋಪ ಮಾಡಿದ್ದು, ಈ ಸಂಬಂಧ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. 10 ವರ್ಷದ ಹಿಂದೆ ನಾಗೇಂದ್ರಯ್ಯ ಇಸ್ಪಿಟ್ ಅಡ್ಡೆ ನಡೆಸುತ್ತಿದ್ದ ಎಂದು ಬಂಧಿಸಲಾಗಿತ್ತು. ಘಟನೆ ನಂತರದ ಇಸ್ಟಿಟ್ ಆಡಿಸುವುದನ್ನು ನಿಲ್ಲಿಸಿದ್ದ ಎನ್ನಲಾಗಿದೆ. ಆದರೂ ಪೇದೆ ಕಿರಣ್ ಕುಮಾರ್, ನಾಗೇಂದ್ರಯ್ಯಗೆ ಬೆದರಿಕೆ ಒಡ್ಡಿ ಹಣ ಕೊಡುವಂತೆ ಪೀಡಿಸುತ್ತಿದ್ದಾರೆ ಎಂಬ ಆರೋಪಿಸಲಾಗಿದೆ.

TMK Police A

ತಿಂಗಳಿಗೆ 50 ಸಾವಿರ ರೂ. ಲಂಚ ಕೊಡಬೇಕು ಎಂದು ಕಿರಣ್ ಕುಮಾರ್ ಪದೇ ಪದೇ ಬಂದು ಕಿರುಕುಳ ನೀಡುತ್ತಿದ್ದಾನೆ. ಹಣ ಕೊಡದಿದ್ದರೆ ಕೇಸ್ ಹಾಕಿಸಿ ಜೈಲಿಗೆ ಕಳುಹಿಸುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದಾನೆ ಎಂದು ನಾಗೇಂದ್ರಯ್ಯ ಆರೋಪಿಸಿದ್ದಾರೆ. ಜೊತೆಗೆ ಕಿರಣ್ ಕುಮಾರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಎಸ್‍ಪಿ ವಂಶಿಕೃಷ್ಣರ ಅವರಿಗೆ ಮನವಿ ಮಾಡಿಕೊಂಡಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *