ನೀನೇನ್ ಸಾಫ್ಟ್ ವೇರ್ ಎಂಜಿನಿಯರಾ?- ಯುವತಿಗೆ ತಹಶೀಲ್ದಾರ್ ಅವಾಜ್

Public TV
1 Min Read
TNK AVAJ

ತುಮಕೂರು: ಜಾತಿ ಹಾಗೂ ಆದಾಯ ಪ್ರಮಾಣ ಪತ್ರಕ್ಕಾಗಿ ಕಚೇರಿಗೆ ಬಂದ ಸಾರ್ವಜನಿಕರಿಗೆ ಗ್ರೇಡ್-2 ತಹಶೀಲ್ದಾರ್ ಅವಾಜ್ ಹಾಕಿದ್ದಾರೆ.

ಡಿ.ಸಿ.ಕಚೇರಿಯಲ್ಲಿರುವ ಪ್ರಮಾಣಪತ್ರ ವಿತರಣಾ ಕೇಂದ್ರದ ಬಳಿ ಜಾತಿ ಹಾಗೂ ಆದಾಯ ಪ್ರಮಾಣ ಪತ್ರಕ್ಕಾಗಿ ನೂರಾರು ಜನರು ಸಾಲಿನಲ್ಲಿ ನಿಂತಿದ್ರು. ಪ್ರಮಾಣ ಪತ್ರ ವಿತರಣೆ ವೇಳೆ ಕಂಪ್ಯೂಟರ್ ಆಪರೇಟರ್ ತಾಂತ್ರಿಕ ಕಾರಣ ಹೇಳಿ ಸರ್ಟಿಫಿಕೇಟ್ ನೀಡಲು ವಿಳಂಬ ಮಾಡುತ್ತಿದ್ದರು.

ಹೀಗೆ ಕಂಪ್ಯೂಟರ್ ಆಪರೇಟರ್ ವಿನಾಕಾರಣ ವಿಳಂಬ ಮಾಡುತ್ತಿದ್ದುದನ್ನು ಅಲ್ಲಿ ನಿಂತಿದ್ದ ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಇದರಿಂದ ಸಿಡಿಮಿಡಿಗೊಂಡ ಗ್ರೇಡ್ -2 ತಹಶೀಲ್ದಾರ್ ಇಂದಿರಾ, ಯುವತಿಯೋರ್ವಳಿಗೆ ಕಚೇರಿಯಲ್ಲೇ ಅವಾಜ್ ಹಾಕಿದ್ದಾರೆ.

ನೀನೇನ್ ಸಾಫ್ಟ್ ವೇರ್ ಇಂಜಿನಿಯರಾ? ಹಾಗಾದ್ರೆ ಬಂದು ರಿಪೇರಿ ಮಾಡು ಎಂದಿದ್ದಾರೆ. ಬ್ಯಾಂಕಲ್ಲಿ ಗಂಟೆಗಟ್ಟಲೆ ಕ್ಯೂ ನಿಲ್ಲುತ್ತೀರಾ? ಇಲ್ಲಿ ನಿಂತುಕೊಳ್ಳೋಕೆ ಏನಾಗತ್ತೆ ನಿಮಗೆ? ಎಂದು ದರ್ಪ ಮೆರೆದಿದ್ದಾರೆ. ಯಾರಿಗೆ ಬೇಕಾದ್ರೂ ಈ ಕುರಿತು ದೂರು ಕೊಡಿ ನಮಗೆ ಏನೂ ಮಾಡೋಕೆ ಆಗಲ್ಲ ಎಂದು ಅವಾಜ್ ಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *