Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Districts

ಅರ್ಧಕ್ಕೆ ನಿಂತಿದೆ ವಿಸರ್ಜನೆಗೆಂದು ಹೊರಟ ಇತಿಹಾಸ ಪ್ರಸಿದ್ಧ ಗೂಳೂರು ಗಣಪ

Public TV
Last updated: December 10, 2019 9:46 am
Public TV
Share
3 Min Read
tmk ganapati
SHARE

– 9 ದಿನಗಳಿಂದ ನಿಂತಲ್ಲೆ ಗಣಪನಿಗೆ ಪೂಜೆ
– 500 ವರ್ಷದ ಇತಿಹಾಸದಲ್ಲೇ ಮೊದಲ ಬಾರಿ ಅರ್ಧಕ್ಕೆ ನಿಂತ ಮೆರವಣಿಗೆ

ತುಮಕೂರು: ಇತಿಹಾಸ ಪ್ರಸಿದ್ಧ ಗೂಳೂರು ಗಣಪತಿಯ ವಿಸರ್ಜನಾ ಮೂರ್ತಿ ಅರ್ಧಕ್ಕೆ ನಿಲ್ಲುವ ಮೂಲಕ ಅಚ್ಚರಿ ಹಾಗೂ ಆತಂಕ ಸೃಷ್ಟಿಸಿದೆ. ಸುಮಾರು ಐನೂರು ವರ್ಷಗಳ ಇತಿಹಾಸದಲ್ಲೇ ಇದೇ ಮೊದಲ ಬಾರಿ ವಿಸರ್ಜನೆಗೆಂದು ಹೊರಟ ಗಣೇಶ ಉತ್ಸವ ಮಳೆಯ ಕಾರಣಕ್ಕೆ ಅರ್ಧಕ್ಕೆ ಮೊಟಕುಗೊಂಡಿದೆ.

tmk ganapati 1

ಕಳೆದ 9 ದಿನಗಳಿಂದ ಗಣೇಶ ಮೂರ್ತಿಗೆ ನಿಂತಲ್ಲೆ ಪೂಜೆ ಪುನಸ್ಕಾರ ನಡೆಯುತ್ತಿದೆ. ಗಣಪತಿ ಮೆರವಣಿಗೆ ಅರ್ಧಕ್ಕೆ ಮೊಟಕುಗೊಂಡಿದ್ದರಿಂದ ಭಕ್ತಾಧಿಗಳಲ್ಲಿ ಮುಂದೇನಾಗಲಿದೆಯೋ ಎಂಬ ಆತಂಕ ಕಾಡುತ್ತಿದೆ. ದೀಪಾವಳಿ ಹಬ್ಬದಿಂದ ಕಾರ್ತಿಕ ಮಾಸದ ಅಂತ್ಯದವರೆಗೂ ನೆರವೇರುವ ಐತಿಹಾಸಿಕ ಪ್ರಸಿದ್ಧ ತುಮಕೂರಿನ ಗೂಳೂರು ಗಣಪತಿ ದೇವರ ಮೆರವಣಿಗೆ ಅರ್ಧಕ್ಕೆ ಮೊಟಕುಗೊಂಡಿದೆ. ನವೆಂಬರ್ 30 ರಂದು ಮೆರವಣಿಗೆಗೆಂದು ಹೊರಟು ನಿಂತಾಗ ಮಳೆ ಬಂದ ಕಾರಣಕ್ಕೆ ಮೆರವಣಿಗೆ ಅರ್ಧಕ್ಕೆ ನಿಲ್ಲಿಸಲಾಗಿತ್ತು. ಆದರೆ ಇದೇ ಮೊದಲ ಬಾರಿಗೆ ವಿಸರ್ಜನೆಗೆಂದು ಮೆರವಣಿಗೆ ಹೊರಟ ಗೂಳೂರು ಗಣೇಶ ಮೂರ್ತಿ ಅರ್ಧದಲ್ಲೆ ನಿಂತಿದೆ. ಮೂಲ ಪೀಠದಿಂದ ಗಣೇಶ ಮೂರ್ತಿಯನ್ನು ಕೆಳಗಿಳಿಸಿ ಮುಖ್ಯದ್ವಾರಕ್ಕೆ ತರುತಿದ್ದಂತೆ ಮಳೆಯ ಕಾರಣಕ್ಕೆ ಮೆರವಣಿಗೆ ಸ್ಥಗಿತಗೊಂಡಿದೆ.

tmk ganapati 2

ಸಂಪ್ರದಾಯದ ಪ್ರಕಾರ ಪೀಠದಿಂದ ಒಮ್ಮೆ ಮೂರ್ತಿಯನ್ನು ಎತ್ತಿದ ಮೇಲೆ ಪುನಃ ಪೀಠಕ್ಕೆ ತರುವುದಾಗಲಿ, ವಿಸರ್ಜನೆ ಮಾಡದೇ ಇರುವುದಾಗಲಿ ಮಾಡಬಾರದು ಎಂಬ ಸಂಪ್ರದಾಯ ಇದೆ. ಆದರೆ ನವೆಂಬರ್ 30ರಂದು ಗಣೆಶೋತ್ಸವ ಮೆರವಣಿಗೆ ಹೋಗುತ್ತಿದ್ದಂತೆ ಮಳೆ ಜೋರಾಗಿ ಬರತೊಡಗಿತು. ಹೀಗಾಗಿ ಮೆರವಣಿಗೆ ಅರ್ಧಕ್ಕೆ ಮೊಟಕುಗೊಳಿಸಲಾಯಿತು. ಆದ್ದರಿಂದ ಮೂಲ ಪೀಠದಿಂದ ಹೊರತಂದಂತಹ ಗಣೇಶ ಮೂರ್ತಿಯನ್ನು ಅರ್ಧದಲ್ಲೆ ನಿಲ್ಲಿಸಿ ಪೂಜೆ ಮಾಡಲಾಗುತ್ತಿದೆ. ಕಳೆದ 9 ದಿನಗಳಿಂದ ದೇವಸ್ಥಾನದ ಮುಖ್ಯದ್ವಾರದ ಬಾಗಿಲಿನಲ್ಲಿ ಗಣೇಶನ ಮೂರ್ತಿ ಇರಿಸಿ ಪೂಜೆ ಸಲ್ಲಿಸಲಾಗುತ್ತಿದೆ.

tmk ganapati 3

ಗೂಳೂರು ಗಣಪತಿಯ ಇತಿಹಾಸದಲ್ಲೇ ವಿಸರ್ಜನಾ ಮೆರವಣಿಗೆ ಅರ್ಧಕ್ಕೆ ನಿಂತಿಲ್ಲ. ಕೆಲವೊಮ್ಮೆ ಮಳೆಯ ಕಾರಣಕ್ಕೆ ಕೆಲ ಗಂಟೆಗಳ ಕಾಲ ಮೆರವಣಿಗೆ ಸ್ಥಗಿತಗೊಂಡಿದ್ದರೂ ಅಂದೇ ಗೂಳೂರು ಕೆರೆಯಲ್ಲಿ ವಿಸರ್ಜನೆ ಮಾಡಲಾಗುತಿತ್ತು. ಆದರೆ ಈ ಬಾರಿ ಮಾತ್ರ ಮೆರವಣಿಗೆ ಹೊರಟು 9 ದಿನ ಕಳೆದರೂ ಗಣಪನಿಗೆ ವಿಸರ್ಜನೆ ಭಾಗ್ಯ ಕೂಡಿ ಬಂದಿಲ್ಲ. ಹಲವು ಪವಾಡ ಹೊಂದಿರುವ ಗೂಳೂರು ಗಣಪತಿಯ ವಿಸರ್ಜನೆಗೆ ಇಷ್ಟೊಂದು ವಿಳಂಬವಾಗಿರುವುದಕ್ಕೆ ಭಕ್ತಾಧಿಗಳಲ್ಲಿ ಆತಂಕ ಸೃಷ್ಟಿಯಾಗಿದೆ. ದೇವರಾದನೆಯಲ್ಲಿ ಏನಾದರೂ ವ್ಯತ್ಯಾಸ ಆಗಿದೆಯಾ? ಮುಂದೆನಾಗಲಿದೆಯೋ? ಒಳ್ಳೆಯೋದೋ? ಕೆಟ್ಟದೋ ಎಂಬ ಆತಂಕ ಸ್ಥಳೀಯರಲ್ಲಿ ಹಾಗೂ ಭಕ್ತಾಧಿಗಳಲ್ಲಿ ಮನೆಮಾಡಿದೆ.

tmk ganapati 4

ಹಿನ್ನೆಲೆ ಏನು?
ಈ ಗಣಪತಿಗೆ ದೇವಸ್ಥಾನಕ್ಕೆ ಸಾವಿರಾರು ವರ್ಷಗಳ ಇತಿಹಾಸ ಹಾಗೂ ಅದರದ್ದೆ ಆದ ವಿಶೇಷತೆ ಇದೆ. ಬಾದ್ರಪದ ಶುಕ್ಲಪಕ್ಷದ ಚತುರ್ಥಿಯಂದು ಸಾಮಾನ್ಯವಾಗಿ ಗಣಪತಿ ಹಬ್ಬ ಆಚರಿಸುತ್ತಾರೆ. ಆದರೆ ಗೂಳೂರಿನಲ್ಲಿ ಮಾತ್ರ ಗಣಪತಿ ಹಬ್ಬದಂದು ಗಣೇಶ ಮೂರ್ತಿ ತಯಾರಿಕೆ ಆರಂಭವಾಗಿ ದೀಪಾವಳಿ ದಿನದಂದು ಪ್ರತಿಷ್ಠಾಪನೆ ಆಗುತ್ತದೆ. ಅಲ್ಲಿಂದ ಒಂದು ತಿಂಗಳ ಕಾಲ ಪೂಜೆ ಪುನಸ್ಕಾರ ನಡೆದು ವಿಸರ್ಜನೆ ಮಾಡಲಾಗುತ್ತದೆ.

tmk ganapati 5

ಭೃಗಮಹರ್ಷಿಗಳು ಕಾಶಿಯಾತ್ರೆ ಹೊರಟಾಗ ಗಣೇಶ ಚತುರ್ಥಿ ದಿನದಂದು ಗೂಳೂರಿಗೆ ಬಂದು ತಂಗಿದ್ದರಂತೆ. ಅಲ್ಲಿಯೇ ಮಣ್ಣಿನಿಂದ ಗಣೇಶ್ ಮೂರ್ತಿ ತಯಾರಿಸಿ ಪೂಜೆ ಮಾಡಿದ್ದರು ಎಂಬ ಪ್ರತೀತಿ ಇದೆ. ಆಗನಿಂದ ದೀಪಾವಳಿಗೆ ಪ್ರತಿಷ್ಠಾಪನೆ ಮಾಡಿ ಕಾರ್ತಿಕ ಮಾಸ ಕಳೆದ ಮೇಲೆ ಬೃಹತ್ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡುವ ಸಂಪ್ರದಾಯ ಬೆಳೆದುಕೊಂಡು ಬಂದಿದೆ. ಆದರೆ ಈ ಬಾರಿ ಗಣೇಶ ಮೆರವಣಿಗೆ ಅರ್ಧಕ್ಕೆ ನಿಂತಿದ್ದು ಭಕ್ತಾಧಿಗಳಲ್ಲಿ ಕಸಿವಿಸಿ ಉಂಟಾಗಿದೆ.

ಸದ್ಯ ಡಿಸೆಂಬರ್ 14-15ರಂದು ವಿಸರ್ಜನಾ ಕಾರ್ಯಕ್ರಮ ನಿಗದಿ ಮಾಡಲಾಗಿದೆ. ಆದರೆ ಹವಾಮಾನ ಇಲಾಖೆ ಮಾಹಿತಿಯಂತೆ ಡಿಸೆಂಬರ್ 14-15 ರಂದು ಮಳೆ ಸಾಧ್ಯತೆ ಕಡಿಮೆ ಇದ್ದು, ಅಂದು ವಿಸರ್ಜನೆ ಮಾಡಲು ಸಮಿತಿ ತೀರ್ಮಾನಿಸಿದೆ.

TAGGED:devoteesGulur GanapaPublic TVraintumakuruvisarjaneಗೂಳೂರು ಗಣಪತುಮಕೂರುಪಬ್ಲಿಕ್ ಟಿವಿಭಕ್ತರುಮಳೆವಿಸರ್ಜನೆ
Share This Article
Facebook Whatsapp Whatsapp Telegram

Cinema Updates

Kamal Haasan
ಅಹಂಕಾರಿ ಕಮಲ್‌ಗೆ ಬಿಗ್‌ ಶಾಕ್‌ – ಕರ್ನಾಟಕದಲ್ಲಿ ಚಿತ್ರ ಬಿಡುಗಡೆ 1 ವಾರ ಮುಂದೂಡಿಕೆ
4 hours ago
Kamal Haasan
ಮೊದಲು ಕ್ಷಮೆ ಕೇಳಿ, ಜನರ ಭಾವನೆಗೆ ಧಕ್ಕೆ ತರಬೇಡಿ: ಕಮಲ್‌ಗೆ ಹೈಕೋರ್ಟ್‌ ಚಾಟಿ
7 hours ago
Thug Life 2
ಕಮಲ್ ಹಾಸನ್‌ಗೆ ಇಂದು ನಿರ್ಣಾಯಕ ದಿನ – ಹೈಕೋರ್ಟ್‌ನಲ್ಲಿ ‘ಥಗ್‌ಲೈಫ್’ ಬಿಡುಗಡೆ ನಿರ್ಧಾರ
11 hours ago
Ananth Nag MODI
ಹೈ ಟೀ ಸಮಾರಂಭದಲ್ಲಿ ಮೋದಿ ಭೇಟಿಯಾದ ಅನಂತ್‌ನಾಗ್‌
22 hours ago

You Might Also Like

rcb fans
Cricket

RCB vs PBKS: ಅಹಮದಾಬಾದ್‌ ಸ್ಟೇಡಿಯಂ ತುಂಬಾ ಆರ್‌ಸಿಬಿ ಫ್ಯಾನ್ಸ್‌

Public TV
By Public TV
5 minutes ago
IPL Final 01
Cricket

Photo Gallery | ಭಾರತೀಯ ಸೇನೆಗೆ ಫೈನಲ್‌‌ ಪಂದ್ಯ ಅರ್ಪಣೆ… ಸುಂದರ ಕ್ಷಣಗಳನ್ನು ಕಣ್ತುಂಬಿಕೊಳ್ಳಿ

Public TV
By Public TV
14 minutes ago
BY Vijayendra
Bengaluru City

ಕರಾವಳಿಯಲ್ಲಿ ದ್ವೇಷದ ರಾಜಕಾರಣ ಬಿಜೆಪಿ ಸಹಿಸಲ್ಲ: ವಿಜಯೇಂದ್ರ

Public TV
By Public TV
20 minutes ago
RCB vs PBKS
Cricket

IPL Final | ಟಾಸ್‌ ಗೆದ್ದು ಮೊದಲು ಫೀಲ್ಡಿಂಗ್‌ ಆಯ್ದುಕೊಂಡ ಪಂಜಾಬ್‌ ಕಿಂಗ್ಸ್‌

Public TV
By Public TV
32 minutes ago
IPL 3
Cricket

ಐಪಿಎಲ್‌ ಸಮಾರೋಪ ಸಮಾರಂಭದಲ್ಲಿ ʻಆಪರೇಷನ್ ಸಿಂಧೂರʼ ವಿಜಯೋತ್ಸವ – ಯೋಧರಿಗೆ ಗೀತನಮನ!

Public TV
By Public TV
59 minutes ago
rcb fan
Chamarajanagar

ಆರ್‌ಸಿಬಿ ಕಪ್ ಗೆಲ್ಲಲೆಂದು ಮಾದಪ್ಪನಿಗೆ ಮುಡಿ ಕೊಟ್ಟ ಅಭಿಮಾನಿ

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?