ಬೆಂಗಳೂರು: ಕೋವಿಡ್-19ನಿಂದ ಗುಣಮುಖರಾದರು ಕೂಡ ಸಂಕಟ ತಪ್ಪುತ್ತಿಲ್ಲ. ಕೊರೊನಾದಿಂದ ಚೇತರಿಸಿಕೊಂಡ 104 ಮಂದಿ ಹಾಗೂ ಅವರ ಸಂಪರ್ಕಿತ 51 ಮಂದಿಯಲ್ಲಿ ಕ್ಷಯ ರೋಗ ಪತ್ತೆಯಾಗಿದೆ.
ಆರೋಗ್ಯ ಇಲಾಖೆಯ ಕ್ಷಯ ರೋಗ ತಪಾಸಣೆ ಅಭಿಯಾನದಲ್ಲಿ ಈ ವರದಿ ಬಹಿರಂಗವಾಗಿದ್ದು, ಆಗಸ್ಟ್ 16ರಿಂದ 31ರ ವರೆಗೆ ರಾಜ್ಯಾದ್ಯಂತ ಕ್ಷಯ ರೋಗ ತಪಾಸಣೆ ಅಭಿಯಾನವನ್ನು ಆರೋಗ್ಯ ಇಲಾಖೆ ಹಮ್ಮಿಕೊಂಡಿತ್ತು. ಇದನ್ನೂ ಓದಿ: ಮಗಳ ಮೃತ ದೇಹ ನೋಡಲು ಜೈಲಿನಿಂದ ಬಂದ ತಂದೆ-ತಾಯಿ
ಕೋವಿಡ್-19 ಬಂದ ಬಳಿಕ ಕ್ಷಯ ರೋಗವು ಕೆಮ್ಮು, ಜ್ವರ, ಉಸಿರಾಟ ಸಂಬಂಧಿ ಲಕ್ಷಣಗಳುಳ್ಳ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳಾಗಿವೆ. ಕ್ಷಯರೋಗ ಕೋವಿಡ್ನ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನದಲ್ಲಿ ಬಹಿರಂಗವಾಗಿದೆ.
ಕ್ಷೇತ್ರ ಮಟ್ಟದ ಆರೋಗ್ಯ ಕಾರ್ಯಕರ್ತರು ಕೋವಿಡ್ನಿಂದ ಚೇತರಿಸಿಕೊಂಡವರ ಮನೆಗಳಿಗೆ ತೆರಳಿ, ಲಕ್ಷಣಗಳ ಆಧಾರದಲ್ಲಿ ಅವರ ಹಾಗೂ ಸಂಪರ್ಕಿತರ ಕಫದ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಸಂಗ್ರಹಿಸಿದ ಮಾದರಿಯನ್ನು ಆಯಾ ಜಿಲ್ಲಾ ಕೇಂದ್ರಗಳಲ್ಲಿನ ಟಿಬಿಪಿಸಿಆರ್ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಲಾಗಿತ್ತು. ಈ ವೇಳೆ ಕ್ಷಯ ರೋಗ ಪತ್ತೆಯಾಗಿದೆ. ಇದನ್ನೂ ಓದಿ: ಪಿಡಿಓ ಹೊರಹಾಕಿ ಕಚೇರಿಗೆ ಬೀಗ ಜಡಿದ ಗ್ರಾ.ಪಂ. ಅಧ್ಯಕ್ಷೆ, ಸದಸ್ಯರು