– 25 ನಿಮಿಷ ಕಳೆದರೂ ಗಾಯಾಳುವನ್ನು ಆಸ್ಪತ್ರೆ ಸಾಗಿಸದ ರೈಲ್ವೆ ಪೊಲೀಸರು
ತುಮಕೂರು: ರೈಲು ನಿಲ್ಲೋದಕ್ಕೂ ಮುನ್ನವೇ ಇಳಿಯಲು ಹೋಗಿ, ಹಳಿಗೆ ಕಾಲು ಸಿಲುಕಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ತುಮಕೂರು (Tumakuru) ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
Advertisement
ಮೃತ ಯುವಕನನ್ನು ತುರುವೇಕೆರೆ ಅಮ್ಮಸಂದ್ರ ಮೂಲದ ಛಾಯಾಂಕ್ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಅರ್ಧ ಎಂಜಿನ್ ಆಪ್ ಸರ್ಕಾರದಿಂದ ದೆಹಲಿ ಹಾಳಾಗಿದೆ: ಚಂದ್ರಬಾಬು ನಾಯ್ಡು
Advertisement
Advertisement
ಸೋಮವಾರ ಬೆಳಗ್ಗೆ ಯುವಕ ಪುಷ್ಪುಲ್ ಟ್ರೈನ್ಗೆ ಬಂದಿದ್ದ. ಈ ವೇಳೆ ರೈಲು ನಿಲ್ಲುವ ಮೊದಲು ಇಳಿಯಲು ಹೋಗಿ ಬ್ಯಾಗ್ ರೈಲಿನ ಹ್ಯಾಂಡಲ್ಗೆ ಸಿಲುಕಿ ಈ ಅವಘಡ ಸಂಭವಿಸಿದೆ.
Advertisement
ರೈಲ್ವೆ ನಿಯಮದ ಪ್ರಕಾರ ಸಾರ್ವಜನಿಕರು ಮುಟ್ಟುವ ಹಾಗಿಲ್ಲ, ಹಾಗಾಗಿ ಯಾರೂ ಸಹಾಯಕ್ಕೆ ಬಂದಿರಲಿಲ್ಲ. ಈ ವೇಳೆ ಯುವಕ ತಮ್ಮವರಿಗೆ ಕರೆ ಮಾಡಲು ಫೋನ್ ಹುಡುಕಾಡುತ್ತಿದ್ದ. ಆದರೆ 25 ನಿಮಿಷ ಕಳೆದರೂ ಗಾಯಾಳುವನ್ನು ಆಸ್ಪತ್ರೆ ಸಾಗಿಸದೆ, ಪೊಲೀಸರು ವಿಳಾಸ ಪತ್ತೆ ಮಾಡಲು ಕಾಲಹರಣ ಮಾಡಿದ್ದಾರೆ.
ಕೊನೆಗೆ ಪೊಲೀಸರು ಸ್ಥಳಕ್ಕೆ ಬಾರದೆ ಯುವಕ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ.ಇದನ್ನೂ ಓದಿ: ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಪಕ್ಷಿ ಗಣತಿ- 253 ಪ್ರಬೇಧ ಪತ್ತೆ