ಚಲಿಸುತ್ತಿದ್ದ ಕಾರುಗಳ ಮೇಲೆ ಧರೆಗೆ ಉರುಳಿದ ಮರ: ಇಬ್ಬರಿಗೆ ಗಾಯ

Public TV
1 Min Read
Tree Fall

ಬೆಂಗಳೂರು: ಒಣಗಿದ ಮರವೊಂದು ಧರೆಗೆ ಉರುಳಿ ಇಬ್ಬರು ಗಾಯಗೊಂಡಿರುವ ಘಟನೆ ನಗರದ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ (M.Chinnaswamy Stadium) ಹತ್ತಿರ ನಡೆದಿದೆ.ಇದನ್ನೂ ಓದಿ: ಇಂದು ಕಿಚ್ಚನ ಹುಟ್ಟುಹಬ್ಬ: ಸೆಲೆಬ್ರೆಷನ್‌ಗೆ ಜಯನಗರದಲ್ಲಿ ಭರ್ಜರಿ ತಯಾರಿ

ನಿನ್ನೆ (ಸೆ.1) ಸಂಜೆ ಒಣಗಿದ ಬೃಹತ್ ಮರವೊಂದು ನಡುರಸ್ತೆಯಲ್ಲಿ ಉರುಳಿ ಬಿದ್ದಿದೆ. ಮೂರು ಕಾರುಗಳು ಅಡಿಗೆ ಸಿಲುಕಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಚಲಿಸುತ್ತಿದ್ದ ಕಾರುಗಳ ಮೇಲೆ ಮರ ಧರೆಗೆ ಉರುಳಿದೆ. ಘಟನೆಯಲ್ಲಿ ಇಬ್ಬರಿಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಬಿಬಿಎಂಪಿ ಅರಣ್ಯ ಸಿಬ್ಬಂದಿಗಳು ಮರವನ್ನು ತೆರವುಗೊಳಿಸಿದ್ದು, ಸ್ಥಳಕ್ಕೆ ಕಬ್ಬನ್ ಪಾರ್ಕ್ (Cubbon Park) ಸಂಚಾರಿ ಪೊಲೀಸರು (Traffic Police) ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.ಇದನ್ನೂ ಓದಿ: ನನ್ನ ಬಂಧನಕ್ಕೆ ಇಡಿ ಬಂದಿದೆ – ದೆಹಲಿ ಆಪ್ ಶಾಸಕ ಕಿಡಿ

Share This Article