ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸಾರಿಗೆ ನೌಕರರ (Transport Staff) ಮುಷ್ಕರದ ಎಫೆಕ್ಟ್ ತಟ್ಟಿದೆ. ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಕೆಯಾಗಿದೆ. ಬಸ್ ಸಂಚಾರ ಇದ್ದರೂ ಪ್ರಯಾಣಿಕರಿಲ್ಲದಂತಾಗಿದೆ.
38 ತಿಂಗಳ ಹಿಂಬಾಕಿ ಪಾವತಿಗೆ ಒತ್ತಾಯಿಸಿ ಸಾರಿಗೆ ನೌಕರರು ‘ಬೆಂಗಳೂರು ಚಲೋ’ ಮುಷ್ಕರ ನಡೆಸುತ್ತಿದ್ದಾರೆ. ನೌಕರರ ಮನವೊಲಿಸಲು ಸರ್ಕಾರ ಯತ್ನಿಸಿತ್ತು. 38 ತಿಂಗಳ ಬದಲು 26 ತಿಂಗಳ ಹಿಂಬಾಕಿ ಪಾವತಿಗೆ ಸರ್ಕಾರ ಒಪ್ಪಿಗೆ ನೀಡಿತ್ತು. ಆದರೆ, ಸರ್ಕಾರದ ನಿಲುವನ್ನು ನೌಕರರು ಒಪ್ಪಿಲ್ಲ. ಹೀಗಾಗಿ, ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಸರ್ಕಾರದ ಮತ್ತೊಂದು ಆಫರ್ ಕೂಡ ರಿಜೆಕ್ಟ್ – ಸಾರಿಗೆ ನೌಕರರಿಂದ ಇಂದು ಬೆಂಗಳೂರು ಚಲೋ
ಇಂದು ಬೆಳಗ್ಗೆಯಿಂದ ನಗರದಲ್ಲಿ ಎಂದಿನಂತೆ ಬಸ್ಗಳು ಸಂಚರಿಸುತ್ತಿವೆ. ಮೆಜೆಸ್ಟಿಕ್ನಲ್ಲೂ ಬಸ್ಗಳು ಸಂಚರಿಸುತ್ತಿವೆ. ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ಗಳ ಸಂಚಾರದಲ್ಲಿ ಸದ್ಯಕ್ಕೆ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ. ಆದರೆ, ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಕೆಯಾಗಿದೆ.
ಯಶವಂತಪುರ ಡಿಪೋದಿಂದ ಮಾರ್ನಿಂಗ್ ಶಿಫ್ಟ್ನ ಎಲ್ಲ ಬಸ್ಸುಗಳ ಸಂಚಾರ ನಡೆಸುತ್ತಿವೆ. ಯಶವಂತಪುರ ಡಿಪೋದ ಸುಮಾರು 400 ಕ್ಕೂ ಹೆಚ್ಚು ಬಸ್ಸುಗಳ ಸಂಚಾರ ಮಾಡುತ್ತಿವೆ. ಯಾವುದೇ ಸಿಬ್ಬಂದಿ ಗೈರು ಆಗಿಲ್ಲ. ಎಂದಿನಂತೆ ಎಲ್ಲರೂ ಕೆಲಸಕ್ಕೆ ಹಾಜರಾಗಿದ್ದಾರೆ.
ಸದ್ಯ 4 ನಿಗಮದಿಂದ ಬೆಂಗಳೂರು ಸೇರಿದಂತೆ ಜಿಲ್ಲೆಗಳಲ್ಲಿ 10,879 ಬಸ್ಗಳು ಓಡಾಡುತ್ತಿವೆ. ಕೆಎಸ್ಆರ್ಟಿಸಿಯಿಂದ 3533 ಬಸ್ಗಳು, ಬಿಎಂಟಿಸಿಯಿAದ 3308 ಬಸ್ಗಳು, ಎನ್ಡಬ್ಲ್ಯೂಆರ್ಟಿಸಿಯಿಂದ 1976 ಬಸ್ಗಳು, ಕೆಕೆಆರ್ಟಿಸಿಯಿಂದ 2062 ಬಸ್ಗಳು ಸಂಚರಿಸುತ್ತಿವೆ. ಹೆಚ್ಚುವರಿ ಜಾತ್ರೆ ಸ್ಪೆಷಲ್ 591 ಬಸ್ಗಳನ್ನು ರಸ್ತೆಗಳಿಸಲಾಗಿದೆ. ಇದನ್ನೂ ಓದಿ: ಬೆಂಗಳೂರು ಚಲೋ ನಡೆಯುತ್ತೆ, ಸಾರಿಗೆ ನೌಕರರು ಮುಷ್ಕರದಲ್ಲಿ ಭಾಗಿಯಾಗಿ: ಸಂಘಟನೆ ಮನವಿ
ಬಸ್ ಸಂಚಾರ ಭವಿಷ್ಯ ಸಂಜೆ 4 ಗಂಟೆಗೆ ನಿರ್ಧಾರವಾಗುವ ಸಾಧ್ಯತೆ ಇದೆ. ಸಾರಿಗೆ ಸಂಘಟೆನಗಳಿಂದ ಸಂಜೆ ನಾಲ್ಕು ಗಂಟೆಗೆ ಮಹತ್ವದ ಸಭೆ ಇದೆ. ಸಭೆ ಮಾಡಿ ತಮ್ಮ ನಿರ್ಣಯವನ್ನು ಘೋಷಣೆ ಮಾಡಲಿವೆ. ಈಗಾಗಲೇ ನಿನ್ನೆ ರಾತ್ರಿಯ ಸರ್ಕಾರದ ಆದೇಶಕ್ಕೆ ಸಂಘಟನೆಗಳು ಸೆಡ್ಡು ಹೊಡೆದಿವೆ. ಹೀಗಾಗಿ, ಇಂದು ಸಂಜೆ ಬಸ್ ಸಂಚಾರ ಹೋರಾಟದ ರೂಪುರೇಷೆ ಘೋಷಣೆ ಆಗಲಿದೆ.

