– ವಿಶ್ರಾಂತಿ ಪಡೆಯಲು ಕುಳಿತು ನಿದ್ದೆಗೆ ಜಾರಿದ್ದೆ ತಪ್ಪಾಯ್ತು
– ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ
ಮುಂಬೈ: ಇಂದು ಮುಂಜಾನೆ ಮಹಾರಾಷ್ಟ್ರದ ಔರಂಗಾಬಾದ್ನಲ್ಲಿ ರೈಲು ಅವಘಡ ಸಂಭವಿಸಿದೆ. 36 ಕಿಲೋ ಮೀಟರ್ ದೂರದಿಂದ ನಡೆದುಕೊಂಡು ಬಂದು ಸುಸ್ತಾಗಿ ರೈಲ್ವೆ ಹಳಿ ಮೇಲೆ ಮಲಗಿದ್ದ 15 ಮಂದಿ ಕೂಲಿ ಕಾರ್ಮಿಕರ ಮೇಲೆ ಗೂಡ್ಸ್ ರೈಲು ಹರಿದ ಪರಿಣಾಮ ಎಲ್ಲರೂ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ಇಂದು ಮುಂಜಾನೆ ಸುಮಾರು 5.30ಕ್ಕೆ ತಮ್ಮ ಮನೆಗಳಿಗೆ ಹಿಂದಿರುಗುತ್ತಿದ್ದ ಕೂಲಿ ಕಾರ್ಮಿಕರು ರೈಲ್ವೆ ಹಳಿಗಳಲ್ಲಿ ನಿದ್ರೆಗೆ ಜಾರಿದಾಗ ಈ ಘಟನೆ ನಡೆದಿದೆ. ರೈಲು ಅವಘಡದಿಂದ ಘಟನೆಯಲ್ಲಿ 14 ಜನರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇಬ್ಬರು ಗಾಯಗೊಂಡಿದ್ದರು. ಅವರನ್ನು ತಕ್ಷಣ ಘಾಟಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ರೈಲ್ವೆ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
An accident happened near Karmad, Aurangabad when an empty rake of goods wagon ran over some people. RPF and local police are reaching spot to asses the situation. More details awaited: Chief Public Relations Officer (CPRO) of South Central Railway (SCR) #Maharashtra pic.twitter.com/uAqWn1HsQI
— ANI (@ANI) May 8, 2020
ರೈಲಿನ ಅವಘಡದಿಂದ ಮೃತಪಟ್ಟಿರುವ ಕಾರ್ಮಿಕರು ಮಧ್ಯಪ್ರದೇಶದ ಉಮರಿಯಾ ಮತ್ತು ಶಹ್ದೋಲ್ ನಿವಾಸಿಗಳಾಗಿದ್ದು, ಇವರು ಮಹಾರಾಷ್ಟ್ರದ ಜಲ್ನಾದ ಎಸ್ಆರ್ಜಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಲಾಕ್ಡೌನ್ ಸಡಿಲಿಕೆಯಾದ ಹಿನ್ನೆಲೆಯಲ್ಲಿ ನಡೆದುಕೊಂಡು ಜಲ್ನಾದಿಂದ ಭೂಸಾವಲ್ಗೆ ಹೋಗಲು ನಿರ್ಧರಿಸಿದ್ದರು.
ಅದರಂತೆಯೇ 16 ಜನರ ಗುಂಪು ಗುರುವಾರ ಸಂಜೆ 7 ಗಂಟೆಗೆ ಜಲ್ನಾದಿಂದ ಹೊರಟು, ಕಾಲ್ನಡಿಗೆ ಮೂಲಕ ಬದ್ನಾಪುರದವರೆಗೆ ಬಂದಿದ್ದರು. ಸುಮಾರು 36 ಕಿಲೋ ಮೀಟರ್ ನಡೆದ ನಂತರ ಅವರು ದಣಿದಿದ್ದರು. ಹೀಗಾಗಿ ಸ್ವಲ್ಪ ವಿಶ್ರಾಂತಿ ಪಡೆಯಲು ಔರಂಗಾಬಾದ್-ಜಲ್ನಾ ರೈಲ್ವೆ ಟ್ರ್ಯಾಕ್ ಮೇಲೆ ಕುಳಿತುಕೊಂಡಿದ್ದರು. ಆದರೆ ತುಂಬಾ ಆಯಾಸವಾಗಿದ್ದರಿಂದ ತಕ್ಷಣ ನಿದ್ರೆಗೆ ಜಾರಿದರು. 14 ಜನರು ಮಾತ್ರ ಟ್ರ್ಯಾಕ್ ಮೇಲೆ ಕುಳಿತುಕೊಂಡಿದ್ದರು. ಟ್ರ್ಯಾಕ್ ಪಕ್ಕದಲ್ಲಿ ಇಬ್ಬರು ಮತ್ತು ಮೂವರು ಹಳಿಯಿಂದ ದೂರ ಕುಳಿತು ವಿಶ್ರಾಂತಿ ಪಡೆಯುತ್ತಿದ್ದರು. ಆದರೆ ನಿದ್ರೆಯಲ್ಲಿದ್ದಾಗಲೇ ಈ ದುರಂತ ನಡೆದಿದೆ.
Extremely anguished by the loss of lives due to the rail accident in Aurangabad, Maharashtra. Have spoken to Railway Minister Shri Piyush Goyal and he is closely monitoring the situation. All possible assistance required is being provided.
— Narendra Modi (@narendramodi) May 8, 2020
ಖಾಲಿ ಪೆಟ್ರೋಲಿಯಂ ಟ್ಯಾಂಕರ್ ರೈಲು ತೆಲಂಗಾಣದ ಚೆರ್ಲಪಲ್ಲಿಯಿಂದ ಮಹಾರಾಷ್ಟ್ರದ ಮನ್ಮಾದ್ ಬಳಿಯ ಪಾನಿವಾಡಿಗೆ ಹೋಗುತ್ತಿತ್ತು. ಆದರೆ ಬದ್ನಾಪುರ ನಿಲ್ದಾಣದಿಂದ ಮುಂದೆ ಹೋಗುತ್ತಿದ್ದಾಗ ಕೆಲವು ಜನರು ರೈಲ್ವೇ ಹಳಿಯ ಮೇಲೆ ಮಲಗಿರುವುದನ್ನು ನೋಡಿ ರೈಲನ್ನು ನಿಲ್ಲಿಸಲು ಪ್ರಯತ್ನಿಸಿದನು. ಅಲ್ಲದೇ ಹಾರನ್ ಕೂಡ ಮಾಡಿದ್ದಾನೆ. ಅಷ್ಟರಲ್ಲಿ ರೈಲು ಅವರ ಮೇಲೆ ಹರಿದಿದೆ ಎಂದು ರೈಲ್ವೆ ಅಧಿಕಾರಿ ರಾಕೇಶ್ ತಿಳಿಸಿದರು.
ರೈಲ್ವೆ ಸಚಿವ ಪಿಯೂಷ್ ಗೋಯಲ್, ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟ್ಟರ್ ಮೂಲಕ ಸಂತಾಪ ಸೂಚಿಸಿದ್ದಾರೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮೃತಪಟ್ಟ ಕುಟುಂಬದವರಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.
औरंगाबाद में हुए रेल हादसे से हृदय पर ऐसा कुठाराघात हुआ है की मैं उसे शब्दों में व्यक्त नहीं कर सकता! संवेदना से मन भर जाता है…
मैंने रेल मंत्री श्री @PiyushGoyal जी से बात की है और उनसे त्वरित जाँच और उचित व्यवस्था की माँग की है।
— Shivraj Singh Chouhan (@ChouhanShivraj) May 8, 2020