ಚೆನ್ನೈನಿಂದ ಚಿಂಗವನಂಗೆ ರೈಲು ಸೇವೆ – ಶಬರಿಮಲೆ ಯಾತ್ರಾರ್ಥಿಗಳಿಗೆ ಬಂಪರ್ ಆಫರ್

Public TV
1 Min Read
trian

ತಿರುವನಂತಪುರಂ: ಶಬರಿಮಲೆ ಯಾತ್ರಾರ್ಥಿಗಳಿಗೆ ಬಂಪರ್ ಆಫರ್ ಸಿಕ್ಕಿದ್ದು, ಚೆನ್ನೈನಿಂದ ಚಿಂಗವನಂಗೆ ರೈಲು ಸೇವೆ ನೀಡಲಾಗುವುದು ಎಂದು ಸೌತ್ ಸ್ಟಾರ್ ರೈಲಿನ ಯೋಜನಾ ಅಧಿಕಾರಿ ಎಸ್.ರವಿಶಂಕರ್ ಮಾಹಿತಿ ನೀಡಿದ್ದಾರೆ.

ಸೌತ್ ಸ್ಟಾರ್ ರೈಲಿನ ಯೋಜನಾ ಅಧಿಕಾರಿ ಎಸ್.ರವಿಶಂಕರ್ ಈ ಕುರಿತು ಮಾತನಾಡಿದ್ದು, ತೀರ್ಥಯಾತ್ರಾ ಕಾಲದಲ್ಲಿ ಶಬರಿಮಲೆ ಯಾತ್ರಾರ್ಥಿಗಳ ಪ್ರಯಾಣಕ್ಕೆ ಅನುಕೂಲವಾಗುವಂತೆ ಭಾರತೀಯ ರೈಲ್ವೆಯ ಭಾರತ್ ಗೌರವ್ ರೈಲುಗಳು ಚೆನ್ನೈನಿಂದ ಕೇರಳದ ಕೊಟ್ಟಾಯಂನ ಚಿಂಗವನಂ ರೈಲು ನಿಲ್ದಾಣಕ್ಕೆ ಸೇವೆಗಳನ್ನು ನೀಡಲಾಗುವುದು ಎಂದು ವಿವರಿಸಿದ್ದಾರೆ.

train
ಸಾಂದರ್ಭಿಕ ಚಿತ್ರ

ಭಾರತೀಯ ದಕ್ಷಿಣ ರೈಲ್ವೇ ವಲಯದಿಂದ ಏರ್ಪಡಿಸಲಾಗುವ ರೈಲು ಸೇವೆಗಳು ಆಗಸ್ಟ್ 18, ಸೆಪ್ಟೆಂಬರ್ 17, ಅಕ್ಟೋಬರ್ 20, ನವೆಂಬರ್ 17, ಡಿಸೆಂಬರ್ 1 ಮತ್ತು 15 ರಂದು ಚಾಲ್ತಿಯಲ್ಲಿ ಇರುತ್ತೆ. ಭಾರತ್ ಗೌರವ್ ರೈಲಿನ ದರವು ತತ್ಕಾಲ್ ಟಿಕೆಟ್‍ಗಿಂತ ಶೇಕಡಾ 20 ರಷ್ಟು ಹೆಚ್ಚಾಗಿರುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯವರು ಕಡ್ಲೆಪುರಿ ತಿನ್ನುವುದನ್ನು ನಿಲ್ಲಿಸುತ್ತಾರೆಯೇ?: GST ವಿರುದ್ಧ ಬ್ಯಾನರ್ಜಿ ವಾಗ್ದಾಳಿ

train

ಭಾರತ್ ಗೌರವ್ ರೈಲು
ನವೆಂಬರ್ 2021 ರಲ್ಲಿ, ಭಾರತೀಯ ರೈಲ್ವೆಯು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಐತಿಹಾಸಿಕ ಸ್ಥಳಗಳನ್ನು ಪ್ರದರ್ಶಿಸಲು ಥೀಮ್ ಆಧಾರಿತ ಭಾರತ್ ಗೌರವ್ ರೈಲುಗಳನ್ನು ಓಡಿಸಲು ಖಾಸಗಿ ಕಂಪನಿಗೆ ಅವಕಾಶ ಮಾಡಿಕೊಟ್ಟಿತು. ಈ ಯೋಜನೆಯು ಐಆರ್‌ಸಿಟಿಸಿಯ ಥೀಮ್-ಆಧಾರಿತ ಪ್ರವಾಸಿ ರೈಲುಗಳಂತೆಯೇ ಇದೆ. ರಾಮಾಯಣ ಎಕ್ಸ್‌ಪ್ರೆಸ್‌ನಂತೆ, ಇದು ಭಾರತ ಮತ್ತು ವಿದೇಶಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *