ರಾಯಚೂರು: ವಿದ್ಯುತ್ ಕೇಂದ್ರ ಆರ್ ಟಿ ಪಿಎಸ್ ನಲ್ಲಿ ಕಲ್ಲಿದ್ದಲು ತುಂಬಿದ ರೈಲು ಹಳಿ ತಪ್ಪಿದ ಘಟನೆ ರಾಯಚೂರಿನ ಶಕ್ತಿನಗರದಲ್ಲಿ ನಡೆದಿದೆ.
ರೈಲು ಹಳಿ ತಪ್ಪಿದ್ದರಿಂದ ಮಾರ್ಗದಲ್ಲಿ ರೈಲು ಸಂಚಾರ ಸ್ಥಗಿತಗೊಂಡಿದೆ. ಕಲ್ಲಿದ್ದಲು ತುಂಬಿದ ರೈಲಿನ ರೇಕ್ ಗಳು ನೆಲಕ್ಕೆ ಇಳಿದಿವೆ. ಮಹಾನದಿ ಕೋಲ್ ಫೀಲ್ಡ್ ನಿಂದ ಆರ್ ಟಿ ಪಿಎಸ್ ಗೆ ಕಲ್ಲಿದ್ದಲು ಸಾಗಿಸುತ್ತಿದ್ದ ವೇಳೆ ಘಟನೆ ನಡೆದಿದೆ.
ವಿದ್ಯುತ್ ಕೇಂದ್ರದಲ್ಲಿ ಯಾವುದೇ ಅಪಾಯವಾಗಿಲ್ಲ. ಎರಡು ದಿನ ಕಾಲ ರೈಲು ಸಂಚಾರ ಮಾರ್ಗ ನಿಲುಗಡೆಯಾಗಲಿದೆ. ಕಲ್ಲಿದ್ದಲನ್ನು ನೆಲಕ್ಕೆ ಹಾಕಿ ಸಿಬ್ಬಂದಿ ಸಾಗಣೆ ಮಾಡುತ್ತಿದ್ದಾರೆ. ಕಲ್ಲಿದ್ದಲು ಸಂಗ್ರಹಣೆ ಕೊರತೆಯಾಗುವ ಹಿನ್ನೆಲೆ ವಿದ್ಯುತ್ ಉತ್ಪಾದನೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
ಇನ್ನೂ 1720 ಮೆಗಾ ವ್ಯಾಟ್ ಸಾಮಥ್ರ್ಯದ ವಿದ್ಯುತ್ ಕೇಂದ್ರದಲ್ಲಿ ಈಗ ಕೇವಲ 402 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಒಟ್ಟು ಎಂಟು ಘಟಕಗಳಲ್ಲಿ ಐದು ಮತ್ತು ಎಂಟನೆ ಘಟಕ ಮಾತ್ರ ವಿದ್ಯುತ್ ಉತ್ಪಾದಿಸುತ್ತಿವೆ. ಉಳಿದ 6 ಘಟಕಗಳ ಬೇಡಿಕೆ ಕುಸಿತ ಹಾಗೂ ತಾಂತ್ರಿಕ ಕಾರಣದಿಂದ ಕಾರ್ಯ ಸ್ಥಗಿತಗೊಳಿಸಿವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews