ರಾಂಚಿ: ಜಾರ್ಖಂಡ್ನ (Jharkhand) ಸುವರ್ಣರೇಖಾ ರೈಲ್ವೆ ಸೇತುವೆಯ ಕಬ್ಬಿಣದ ಪಿಲ್ಲರ್ನಿಂದ ಬೋಲ್ಟ್ಗಳು ಹಾಗೂ ನಟ್ಗಳನ್ನು ಕಿಡಿಗೇಡಿಗಳು ಕಳಚಿರುವುದು ಪತ್ತೆಯಾಗಿದೆ. ಹತಿಯಾ-ರೂರ್ಕೆಲಾ ರೈಲು ಮಾರ್ಗದ (Railway) ಸೇತುವೆಯ ಬೋಲ್ಟ್ಗಳನ್ನು ತೆಗೆದಿರುವುದನ್ನು ಸಿಬ್ಬಂದಿ ಪತ್ತೆ ಮಾಡಿದ್ದಾರೆ.
ಕೂಡಲೇ ಇದನ್ನು ಸರಿಪಡಿಸಿದ್ದು, ಇದರಿಂದ ದೊಡ್ಡ ರೈಲು ಅಪಘಾತ ತಪ್ಪಿದಂತಾಗಿದೆ. ಈ ಮಾರ್ಗದ ಬೇರೆ ಎಲ್ಲಾದರೂ ಇದೇ ರೀತಿಯ ಕೃತ್ಯ ಎಸಗಿರುವ ಬಗ್ಗೆ ಶೋಧ ಕಾರ್ಯ ನಡೆಸಲಾಗುತ್ತಿದೆ. ಈ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ದುರಂತ: ಸಿಬಿಐನಿಂದ ಮೂವರು ಅರೆಸ್ಟ್
ಎಫ್ಐಆರ್ನಲ್ಲಿ ಕೆಲ ಕಿಡಿಗೇಡಿಗಳು ಸೇತುವೆಯ ಮೇಲಿನ ಕಬ್ಬಿಣದ ಪಿಲ್ಲರ್ನಿಂದ ಮೂರು ನಟ್ಗಳನ್ನು ತೆಗೆದಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಈ ರೈಲು ಸೇತುವೆಯು ಧುರ್ವಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿದೆ. ಇತ್ತೀಚೆಗೆ ಒಡಿಶಾದಲ್ಲಿ ನಡೆದ ಭೀಕರ ದುರಂತ ಮರೆಯುವ ಮುನ್ನವೇ, ಇಂತಹ ಪ್ರಕರಣ ನಡೆದಿರುವುದು ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ಅಚ್ಚರಿಯಾದ್ರೂ ಸತ್ಯ- ಅದಾನಿಗೆ ಸೇರಿದ 6 ಸಾವಿರ ಕೆ.ಜಿಯ ಸೇತುವೆ ಕಳ್ಳತನ!
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]