ಕೈಲಾಸಂರ ಟೊಳ್ಳುಗಟ್ಟಿ ಈಗ ಮೂಕವಿಸ್ಮಿತ

Public TV
1 Min Read
Mookavismitha

ಬೆಂಗಳೂರು: ಟಿ.ಪಿ. ಕೈಲಾಸಂ ಅವರ ಕೃತಿಯೊಂದು ಈಗ ಚಲನಚಿತ್ರವಾಗಿ ಬೆಳ್ಳಿತೆರೆ ಮೇಲೆ ಬರುತ್ತಿದೆ. 1920ರಲ್ಲಿ ಟಿ.ಪಿ. ಕೈಲಾಸಂ ಅವರು ಬರೆದ ಟೊಳ್ಳು ಗಟ್ಟಿ ಎಂಬ ನಾಟಕವನ್ನಾಧರಿಸಿ ಮೂಕವಿಸ್ಮಿತ ಚಿತ್ರವನ್ನು ಗುರುದತ್ ನಿರ್ದೇಶಿಸಿದ್ದಾರೆ. ಗುರುದತ್ ಆಗಿನ ಕಾಲದ ಕಥೆಗೆ ಈಗಿನ ಕಾಲದ ಪರಿಕಲ್ಪನೆಯನ್ನು ಬ್ಲೆಂಡ್ ಮಾಡಿ ತೆರೆ ಮೇಲೆ ಮೂಡಿಸಿದ್ದಾರೆ.

ಗುರುದತ್, ಶ್ರೀಕಾಂತ್, ಸಂದೀಪ್ ಮಲಾನಿ, ವಾಣಿಶ್ರೀ ಭಟ್, ಶುಭ ರಕ್ಷ, ರಾಜೇಶ್ ಎಸ್.ರಾವ್, ಡಾ.ಕೃಪ ಹಾಗೂ ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಮೂಕವಿಸ್ಮಿತ ಚಿತ್ರದ ಆಡಿಯೋ ಹಾಗೂ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು.

ನಾಟಕ ನಟ ಸಂದೀಪ್ ಮಲಾನಿ ಮಾತನಾಡಿ, ಮಾಧ್ವ ಬ್ರಾಹ್ಮಣ ಕುಟುಂಬದಲ್ಲಿ ನಡೆಯುವಂಥ ಕಥೆಯಿದು. ನಾನು ಕುಟುಂಬದ ಹಿರಿಯ. 53ನೇ ವಯಸ್ಸಿನಲ್ಲಿ ನನಗೆ ಒಂದು ಮಗು ಹುಟ್ಟುತ್ತದೆ. ಆನಂತರ ನಡೆಯುವ ಕಥೆ ಚಿತ್ರದಲ್ಲಿದೆ. ನಾನು 50ಕ್ಕೂ ಹೆಚ್ಚು ಸಿನಿಮಾದಲ್ಲಿ ಆ್ಯಕ್ಟ್ ಮಾಡಿದ್ದರೂ ಪೂರ್ಣ ಪ್ರಮಾಣದ ನಾಯಕನಾಗಿ ಕಾಣಿಸಿರುವುದು ಇದೇ ಚಿತ್ರದಲ್ಲಿ. ನಿಜವಾದ ಶಿಕ್ಷಣ ಎಂದರೇನು, ಮಾನವೀಯ ಮೌಲ್ಯಗಳನ್ನು ಬಿಂಬಿಸುವ ಕಥೆ ಈ ಚಿತ್ರದಲ್ಲಿದೆ ಎಂದು ಹೇಳಿದರು. ಈ ಚಿತ್ರದಲ್ಲಿ 4 ಹಾಡುಗಳನ್ನು ಚಿನ್ಮಯ್ ಎಂ.ರಾವ್ ಸಂಗೀತ ಸಂಯೋಜನೆ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *