ಹಂಪಿ: ಸ್ಮಾರಕ ವಿರೂಪಗೊಳಿಸಿದ್ದ ಪ್ರವಾಸಿಗ ಅರೆಸ್ಟ್

Public TV
1 Min Read
ARREST 1

ಬಳ್ಳಾರಿ: ವಿಶ್ವ ವಿಖ್ಯಾತ ಹಂಪಿಯಲ್ಲಿ ಒಂದಲ್ಲ ಒಂದು ರೀತಿಯ ಎಡವಟ್ಟು ಆಗುತ್ತಲೇ ಇವೆ. ಕಳೆದ ಕೆಲವು ದಿನಗಳ ಹಿಂದಷ್ಟೇ ಶಿವಲಿಂಗ ಧ್ವಂಸ ಮಾಡಿದ್ದ ದುಷ್ಕರ್ಮಿಗಳ ಬಗ್ಗೆ ಸುದ್ದಿಯಾಗಿತ್ತು. ಇದೀಗ ಮತ್ತೊಂದು ಸ್ಮಾರಕವನ್ನು ವಿರೂಪ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಅರೆಸ್ಟ್ ಮಾಡಲಾಗಿದೆ.

vlcsnap 2017 07 02 09h36m01s58

ಬಂಧಿತನನ್ನು ಬಳ್ಳಾರಿ ಜಿಲ್ಲೆ ಸಿರಗುಪ್ಪ ಮೂಲದ ಮಧು ಎಂದು ಗುರುತಿಸಲಾಗಿದೆ. ಈತ ಹಂಪಿಗೆ ಪ್ರವಾಸಕ್ಕೆ ಬಂದಿದ್ದ ಬಳ್ಳಾರಿ ಮೂಲದ ವ್ಯಕ್ತಿ ಹಜಾರ ರಾಮ ದೇವಸ್ಥಾನದ ಮುಂಭಾಗದ ಪಾನ್ ಸುಪಾರಿ ಬಜಾರ್ ಬಳಿಯ ಕಂಬವೊಂದನ್ನ ನೆಲಕ್ಕುರುಳಿಸಿದ್ದಾನೆ. ಕೂಡಲೇ ಸ್ಥಳದಲ್ಲಿದ್ದ ಹಂಪಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಉದ್ದೇಶ ಪೂರ್ವಕವಾಗಿ ಕಂಬವನ್ನ ನೆಲಕ್ಕೆ ಉರುಳಿಸುವ ಮೂಲಕ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಆರೋಪ ಹೊರಿಸಲಾಗಿದೆ. ಜೊತೆಗೆ ಪುರಾತನ ಸ್ಮಾರಕಗಳನ್ನ ಹಾನಿಗೊಳಿಸಿದ ಆರೋಪದ ಮೇಲೂ ಪ್ರಕರಣ ದಾಖಲಿಸಿದ್ದಾರೆ.

vlcsnap 2017 07 02 09h35m37s60

vlcsnap 2017 07 02 09h35m52s217

vlcsnap 2017 07 02 09h35m45s152

Share This Article
Leave a Comment

Leave a Reply

Your email address will not be published. Required fields are marked *