ಹೈದರಾಬಾದ್: ಮಾವೋವಾದಿ (Maoist) ಸಂಘಟನೆಯ ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿಯ (ಪಿಎಲ್ಜಿಎ) ಉನ್ನತ ಕಮಾಂಡರ್ ಸೋಡಿ ಕೇಶಲು ಮತ್ತು ಇತರ 40 ಜನ ತೆಲಂಗಾಣ (Telangana) ಪೊಲೀಸರ ಮುಂದೆ ಶರಣಾಗಿದ್ದಾರೆ.
ಮಲ್ಲಾ ಎಂದೂ ಕರೆಯಲ್ಪಡುವ ಕೇಶಲು, ಬಸ್ತಾರ್ನ ಪಿಜಿಎಲ್ಎಯ ಉನ್ನತ ನಾಯಕರಲ್ಲಿ ಒಬ್ಬನಾಗಿದ್ದ. ಈತ ತೆಲಂಗಾಣ – ಛತ್ತೀಸ್ಗಢ ಗಡಿಯಲ್ಲಿ ಸಕ್ರಿಯವಾಗಿರುವ ಮಾವೋವಾದಿ ಬೆಟಾಲಿಯನ್ನ ಉಪ ಕಮಾಂಡರ್ ಆಗಿ ಕೆಲಸ ಮಾಡುತ್ತಿದ್ದ. ಈ ಹಿಂದೆ ಶರಣಾಗಿದ್ದ ಹಿರಿಯ ಮಾವೋವಾದಿ ನಾಯಕ ಬಡಿಸೆ ದೇವಾ ನಂತರ ಈತನನ್ನು ಎರಡನೇ-ಇನ್-ಕಮಾಂಡ್ ಎಂದು ಪರಿಗಣಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ತಲೆಗೆ ಲಕ್ಷ ಲಕ್ಷ ಬಹುಮಾನ ಘೋಷಣೆಯಾಗಿದ್ದ 9 ನಕ್ಸಲರು ಶರಣು
40ರ ದಶಕದ ಅಂತ್ಯದಲ್ಲಿ, ಕೇಶಲುನನ್ನು ತೆಲಂಗಾಣ-ಛತ್ತೀಸ್ಗಢ ಗಡಿಯಲ್ಲಿ ಸಕ್ರಿಯವಾಗಿರುವ ಎರಡನೇ ಪ್ರಮುಖ ಕಮಾಂಡರ್ ಎಂದು ಪರಿಗಣಿಸಲಾಗಿತ್ತು. ಈತ ಕರ್ರೆಗುಟ್ಟ ಬೆಟ್ಟಗಳಲ್ಲಿ ಸುಮಾರು 20 ರಿಂದ 30 ಕೇಡರ್ಗಳನ್ನು ಮುನ್ನಡೆಸಿದ್ದ. ಈತನ ಬಂಧನಕ್ಕೆ 20 ಲಕ್ಷ ರೂ.ಗಳ ಬಹುಮಾನವನ್ನು ಘೋಷಿಸಲಾಗಿತ್ತು.
ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮುಖ್ಯವಾಹಿನಿಗೆ ಸೇರಿದ ಗುಂಪಿನಲ್ಲಿ ವಿಭಾಗೀಯ ಸಮಿತಿ ಸದಸ್ಯರು, ಪ್ರದೇಶ ಸಮಿತಿ ನಾಯಕರು ಮತ್ತು ಪ್ಲಟೂನ್-ಮಟ್ಟದ ಕಾರ್ಯಕರ್ತರು ಸೇರಿದ್ದಾರೆ. ಅವರು ಎಕೆ-47 ರೈಫಲ್ಗಳು, ಐಎನ್ಎಸ್ಎಎಸ್ ರೈಫಲ್ಗಳು ಮತ್ತು ಎಸ್ಎಲ್ಆರ್ ರೈಫಲ್ಗಳು ಸೇರಿದಂತೆ ಹಲವಾರು ಶಸ್ತ್ರಾಸ್ತ್ರಗಳನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಮಾರ್ಚ್ 7 ರಂದು ಹೈದರಾಬಾದ್ನಲ್ಲಿ 130 ಮಾವೋವಾದಿಗಳು ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಸಮ್ಮುಖದಲ್ಲಿ ಶರಣಾಗಿದ್ದರು. ಈ ವೇಳೆ 124 ಶಸ್ತ್ರಾಸ್ತ್ರಗಳನ್ನು ಹಸ್ತಾಂತರಿಸಿದ್ದರು. ಇದನ್ನೂ ಓದಿ: ಇಂದಿರಾ ಗಾಂಧಿಗೆ ಎಡಪಂಥೀಯ ಗುಂಪುಗಳ ಬೆಂಬಲ, ರಾಹುಲ್ ನಕ್ಸಲ್ ಬೆಂಬಲಿಗರೊಂದಿಗೆ ವೇದಿಕೆ ಹಂಚಿಕೊಳ್ತಾರೆ: ಅಮಿತ್ ಶಾ

