Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಇಂದು ವಿಶ್ವ ಏಡ್ಸ್ ದಿನ – ಈ ವಿಷಯಗಳು ನಿಮಗೆ ಗೊತ್ತಿರಲಿ

Public TV
Last updated: December 1, 2018 12:34 pm
Public TV
Share
7 Min Read
120117 world aids day
SHARE

1987ರಲ್ಲಿ ಭಾರತದಲ್ಲಿ ಮೊದಲ ಏಡ್ಸ್ ಪ್ರಕರಣ ಪತ್ತೆಯಾಯಿತು. 1990ರಿಂದ ಇದನ್ನು ಗಂಭೀರವಾಗಿ ಪರಿಗಣಿಸಿದ ಭಾರತ ಸರ್ಕಾರ ಮಾರಕ ಕಾಯಿಲೆ ನಿಯಂತ್ರಣಕ್ಕೆ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಏಡ್ಸ್ ಗೆ ಗುರಿಯಾಗುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆ ಆಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿಯಲ್ಲಿ ತಿಳಿಸಿದೆ.

ಕರ್ನಾಟಕ ರಾಜ್ಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅತಿ ಹೆಚ್ಚು ಹೆಚ್‍ಐವಿ ಮತ್ತು ಏಡ್ಸ್ ರೋಗ ಪೀಡಿತರಿದ್ದು, 2006ರಿಂದ ಸೋಂಕಿತರ ದೃಢೀಕರಣವಾಗಿರುವ ಪ್ರಕಾರ ART ಮಾತ್ರೆ ಪಡೆದುಕೊಳ್ಳುವರ ಸಂಖ್ಯೆ ಜಿಲ್ಲೆಯಲ್ಲಿ 14,994 ಇದ್ದು, ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಈ ಹಿಂದೆ ಬಾಗಲಕೋಟೆ ಜಿಲ್ಲೆಯಲ್ಲಿ ಹೆಚ್‍ಐವಿ ಮತ್ತು ಏಡ್ಸ್ ರೋಗ ಪೀಡಿತರ ಸಂಖ್ಯೆ ಹೆಚ್ಚಾಗಿದ್ದು, ಮೊದಲ ಸ್ಥಾನದಲ್ಲಿತ್ತು.

AIDS 1

ವಿಶ್ವ ಆರೋಗ್ಯ ಸಂಸ್ಥೆ (WHO) ನಡೆಸುವ ವಿಶ್ವ ಏಡ್ಸ್ ದಿನವನ್ನು 1988ರ ಡಿಸೆಂಬರ್ 1ರಿಂದ ಪ್ರತಿ ವರ್ಷ ಆಚರಿಸುತ್ತಾ ಬಂದಿದೆ. ಈ ದಿನದಂದು ಹೆಚ್‍ಐವಿ ಸೋಂಕಿನಿಂದ ಉಂಟಾಗುವ ಏಡ್ಸ್ ಸಾಂಕ್ರಾಮಿಕ ರೋಗದ ಬಗ್ಗೆ ಅರಿವು ಮೂಡಿಸುವ ಮೂಲಕ ಆಚರಿಸಲಾಗುತ್ತದೆ. 2017ರ ಏಡ್ಸ್ ದಿನವನ್ನು “”Right to Health” ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸಲಾಗಿತ್ತು. 2018ರ ಏಡ್ಸ್ ದಿನವನ್ನು #KnowYourStatus ಎಂಬ ಧ್ಯೇಯವಾಕ್ಯದೊಂದಿಗೆ ಆಚರಣೆ ಮಾಡಲಾಗುತ್ತಿದೆ.

ಏಡ್ಸ್ ಅಂದರೇನು?
ಅಕ್ವೈರ್ಡ್ ಇಮ್ಯುನೋ ಡಿಫಿಷಿಯೆನ್ಸಿ ಸಿಂಡ್ರೋಮ್ ಹೃಸ್ವ ರೂಪವೇ ಏಡ್ಸ್ (Acquired immune deficiency syndrome.) ಇದನ್ನು ರೋಗ ಅನ್ನುವಂತಕ್ಕಿಂತ ರೋಗಗಳ ಸರಮಾಲೆ ಎಂದು ಕರೆಯಬಹುದು. ಇದನ್ನು ಮೊಟ್ಟ ಮೊದಲ ಬಾರಿಗೆ 1981ರಲ್ಲಿ ಅಮೆರಿಕದಲ್ಲಿ ಗುರುತಿಸಲಾಯಿತು. ಭಾರತದಲ್ಲಿ 1986ರಲ್ಲಿ ಭಾರತದ ಚೆನ್ನೈನಲ್ಲಿ ಪತ್ತೆ ಮಾಡಲಾಯಿತು. ಏಡ್ಸ್ ಗೆ ಕಾರಣವಾದ ವೈರಸ್ ಹೆಚ್‍ಐವಿ (Human Immuno Deficiency Virus) ಇದನ್ನು ಮೊಟ್ಟ ಮೊದಲ ಬಾರಿಗೆ 1983ರಲ್ಲಿ ಫ್ರೆಂಚ್ ವಿಜ್ಞಾನಿಗಳು ಪತ್ತೆ ಹಚ್ಚಿದರು. 1984ರಲ್ಲಿ ಅಮೆರಿಕಾದ ವಿಜ್ಞಾನಿಗಳು ಏಡ್ಸ್ ಗೆ ಕಾರಣವಾಗುವ ವೈರಸ್ ಬಗ್ಗೆ ಸವಿವರವಾದ ಮಾಹಿತಿ ನೀಡಿದರು.

ಅಭಾದತೆ: ರೋಗಗಳ ವಿರುದ್ಧ ತನ್ನನ್ನು ರಕ್ಷಿಸಿಕೊಳ್ಳಬಲ್ಲ ದೇಹದ ಸಾಮಥ್ರ್ಯಕ್ಕೆ ಅಭಾದತೆ ಎಂದು ಕರೆಯಲಾಗುತ್ತದೆ. ಈ ಅಭಾದತೆಯನ್ನು ಹಾಳುಮಾಡಬಲ್ಲ ರೋಗವೇ ಏಡ್ಸ್.

ಏಡ್ಸ್ ಪತ್ತೆಯಾಗುವುದಕ್ಕೆ ಮುಂಚೆ, ಮಾನವರಲ್ಲಿ ಅಭಾದತೆ ಕುಂಠಿತಗೊಳ್ಳುವ ಮೂರು ಪರಿಸ್ಥಿತಿಗಳನ್ನು ಗುರುತಿಸಲಾಗಿತ್ತು.
1. ಅನುವಂಶೀಯ (ತಂದೆ-ತಾಯಿಯಿಂದ ಮಕ್ಕಳಿಗೆ)
2. ಪ್ರೇರಪಿತ (ಕಸಿ ಮಾಡುವಿಕೆಯಿಂದ)
3. ಅರ್ಜಿತ (ಲೈಂಗಿಕ ಸಂಪರ್ಕದ ಮೂಲಕ ಉಂಟಾಗುವಿಕೆ)

AIDS 3

ಕುಂಠಿತಗೊಂಡ ಅಭಾದತೆಯು ಆಫ್ರಿಕಾದ ದೇಶಗಳಲ್ಲಿ ಹಾಗು ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿರುವ ಏಷಿಯಾದ ಭಾರತ ಸೇರಿದಂತೆ ಇತರೆ ದೇಶಗಳಲ್ಲಿ ಹೆಚ್ಚಾಗಿ ಪತ್ತೆಯಾಗುತ್ತಿತ್ತು. ಆದರೆ ಇದನ್ನು ಪರಾವಲಂಬಿ ಜೀವಿಗಳಿಂದ ಉಂಟಾದ ರೋಗಗಳೆಂದು ಜೊತೆಗೆ ಪೋಷಣೆಯ ಕೊರತೆಯಿಂದಾಗಿ ಇನ್ನಷ್ಟು ಸಂಕೀರ್ಣಗೊಂಡ ಕಾಯಿಲೆಗಳಿಂದ ಭಾವಿಸಲಾಗಿತ್ತು.

ಹೆಚ್‍ಐವಿ ರಚನೆ:
ಹೆಚ್.ಐ.ವಿ ದುಂಡಾಗಿದ್ದು RNA ಯನ್ನು ಅನುವಂಶೀಯ ವಸ್ತುವನ್ನಾಗಿ ಹೊಂದಿದೆ. RNA ಸುತ್ತಲೂ ಪ್ರೋಟಿನ್ ಕವಚವಿದೆ. ಅದರ ಸುತ್ತಲೂ ಕೊಬ್ಬಿನ ಪದರ ಮಧ್ಯದಲ್ಲಿ ಆರ್.ಎನ್.ಎ ಜೊತೆಗೆ ರಿಸರ್ವ್ ಟ್ರಾನ್ಸ್ ಕಿಪ್ಟೇಸ್ ಎಂಬ ಕಿಣ್ವ ಇದೆ. ಹೆಚ್.ಐ.ವಿ ರಿಟ್ರೋವೈರಸ್ ಗಳ ಗುಂಪಿಗೆ ಸೇರುತ್ತದೆ. ಹೆಚ್.ಐ.ವಿ ಪೋಷಕ ಜೀವಿಯನ್ನು ಪ್ರವೇಶಿಸಿದ ನಂತರ ಲಿಂಪೋಸೈಟ್ ಗಳನ್ನು ನಾಶಪಡಿಸುತ್ತದೆ. ಬಿ ಮತ್ತು ಟಿ ಲಿಂಪೋಸೈಟ್ ಗಳು ಸೋಂಕಿನ ವಿರುದ್ಧ ದೇಹಕ್ಕೆ ರಕ್ಷಣೆಯನ್ನು ಒದಗಿಸುತ್ತದೆ.

ಏಡ್ಸ್ ನ ಲಕ್ಷಣಗಳು:
ಹೆಚ್‍ಐವಿ ವೈರಾಣುಗಳು ವ್ಯಕ್ತಿಯ ರಕ್ತವನ್ನು ಪ್ರವೇಶಿಸಿದ ಎರಡು ಅಥವಾ ಮೂರು ವಾರಗಳ ನಂತರ ಆತನಲ್ಲಿ ಜ್ವರ. ತಲೆನೋವು, ಕೀಲುಗಳಲ್ಲಿ ನೋವು ಹಾಗು ಬಾಯಿ ಮತ್ತು ಗಂಟಲಿನಲ್ಲಿ ಹುಣ್ಣುಗಳು ಕಾಣಿಸಿಕೊಳ್ಳುತ್ತವೆ. ದುಗ್ಧ ಗ್ರಂಥಿಗಳು ಊದಿಕೊಳ್ಳುವ ಜೊತೆಗೆ ಚರ್ಮದ ತುರಿಕೆ ಸಹ ಪ್ರಾರಂಭವಾಗುತ್ತದೆ. ಕೆಲವೊಮ್ಮೆ ತುರಿಕೆ ನಂತರ ಕಡಿಮೆ ಆಗುತ್ತದೆ. ಈ ಲಕ್ಷಣಗಳ ಜೊತೆಗೆ ವೈರಾಣುಗಳ ಸಂಖ್ಯೆ ಅಭಿವೃದ್ಧಿ ಹೊಂದುತ್ತಾ ಹೋಗುತ್ತದೆಯಾದರೂ ಯಾವುದೇ ಬಾಹ್ಯ ಲಕ್ಷಣಗಳು ಕಾಣಿಸಿಕೊಳ್ಳದೇ ಇರಬಹುದು.

AIDS 4

ಕ್ರಮೇಣ ದೇಹದ ರೋಗ ನಿರೋಧಕ ಶಕ್ತಿ ಕುಂದುತ್ತಾ ಹೋಗುತ್ತದೆ. ಏಡ್ಸ್ ರೋಗ ಪೂರ್ತಿ ಪ್ರಕಟವಾಗಲು ಮೊದಲು ದುಗ್ಧಗ್ರಂಥಿಗಳು ಊದಿಕೊಳ್ಳುತ್ತವೆ. ಅದರಲ್ಲಿಯೂ ಕತ್ತಿನ ಭಾಗದ ಸುತ್ತಮುತ್ತ ಈ ಊಟ ಕಂಡು ಬರುತ್ತದೆ. ಇದು ಏಡ್ಸ್ ರೋಗ ಸಂಪೂರ್ಣವಾಗಿ ಪ್ರಾರಂಭವಾಗಿರುವುದನ್ನು ಸೂಚಿಸುತ್ತದೆ. ಈ ಎಲ್ಲವನ್ನು ಮೊದಲ ಹಂತದ ಲಕ್ಷಣಗಳು ಎಂದು ಕರೆಯುತ್ತಾರೆ.

ದ್ವಿತೀಯ ಹಂತದ ಲಕ್ಷಣಗಳು:
1. ರೋಗ ನಿರೋಧಕ ಶಕ್ತಿ ಪೂರ್ಣವಾಗಿ ಕುಂದಿರುತ್ತದೆ.
2. ಪ್ರತಿ ತಿಂಗಳು 10% ತೂಕ ಕಡಿಮೆ ಆಗುತ್ತದೆ.
3. ಚರ್ಮದಲ್ಲಿ ತುರಿಕೆ, ಉಸಿರ್ನಾಳದಲ್ಲಿ ಉರಿಯೂತ, ಕೆಮ್ಮು ಹಾಗು ಕಫ ಉಂಟಾಗುವಿಕೆ
4. ನಿರಂತರವಾಗಿ ತೀವ್ರ ಧಣಿವಾಗುವುದು.
5. ಒಂದು ತಿಂಗಳಿಗೂ ದೀರ್ಘಕಾಲ ಉಳಿಯುವ ಜ್ವರ
6. ಬಾಯಿಯಲ್ಲಿ ಬಿಳಿ ಮಚ್ಚೆಗಳು ಕಾಣಿಸಿಕೊಳ್ಳುಬವುದು.
7. ಒಂದು ತಿಂಗಳಿಗೂ ಅಧಿಕ ಕಾಲ ಅತಿಸಾರ ಭೇದಿಯಾಗುದವುದು.
8. ವ್ಯಕ್ತಿಯ ನೆನಪಿನನ ಶಕ್ತಿ ಕುಂದುತ್ತದೆ.

AIDS 2

ಸೋಂಕು ತಗುಲವ ರೀತಿ:
1. ಸೋಂಕು ತಗುಲಿರುವ ವ್ಯಕ್ತಿಯ ಜೊತೆಗೆ ಅಸುರಕ್ಷಿತ ಲೈಂಗಿಕ ಸಂಪರ್ಕ: ಬಹುತೇಕ ಏಡ್ಸ್ ರೋಗಿಗಳು ಈಗಾಗಲೇ ಸೋಂಕು ತಗುಲಿರುವ ವ್ಯಕ್ತಿಗಳ ಜೊತೆಗೆ ಅಸುರಕ್ಷಿತ ಲೈಂಗಿಕ ಸಂಪರ್ಕ ಹೊಂದುವ ಮೂಲಕ ತಾವು ಸೋಂಕಿಗೆ ಒಳಗಾಗಿದ್ದಾರೆ.
2. ಸೋಂಕು ತಗುಲಿದ ವ್ಯಕ್ತಿಯ ರಕ್ತವನ್ನು ದಾನ ಪಡೆಯುವ ಮೂಲಕ: ವೈರಾಣು ಇರುವ ರಕ್ತವನ್ನು ವ್ಯಕ್ತಿಯೊಬ್ಬನಿಂದ ದಾನ ಪಡೆದ ವ್ಯಕ್ತಿಗೆ ಸೋಂಕು ತಗುಲಬಹುದು.
3. ಸೋಂಕು ತಗುಲಿದ ತಾಯಿಯಿಂದ ಮಗುವಿಗೆ: ಹೆಚ್‍ಐವಿ ಸೋಂಕು ತಗುಲಿರುವ ತಾಯಿಯಿಂದ ಆಕೆಯ ಮಗುವಿಗೆ ಈ ಕೆಳಗಿನ ರೀತಿಗಳಲ್ಲಿ ವೈರಾಣುಂವಿನ ಸೋಂಕು ಉಂಟಾಗಬಹುದು.
ಎ. ಜರಾಯುವಿನ ಮೂಲಕ ಭ್ರೂಣಕ್ಕೆ(ಜರಾಯು ಎಂಬುದು ಬೆಳವಣಿಗೆಯಾಗುತ್ತಿರುವ ಭ್ರೂಣವನ್ನು ಗರ್ಭಾಶಯದ ಭಿತ್ತಿಗೆ ಜೋಡಿಸುವ ಒಂದು ಅಂಗ)
ಬಿ. ಹೆರಿಗೆಯಾಗುವ ಸಂದರ್ಭದಲ್ಲಿ
ಸಿ. ಮೊಲೆಯೂಡಿಸುವ ಮೂಲಕ
4. ಸೋಂಕು ತಗುಲಿದ ವ್ಯಕ್ತಿಗಳು ಬಳಸಿದ ಸಿರಿಂಜ್ ಹಾಗೂ ಸೂಜಿಗಳನ್ನು ಸಂಸ್ಕರಿಸದೆ ಮತ್ತೆ ಬಳಕೆಸುವದರಿಂದ

ಹೆಚ್‍ಐವಿ ಪತ್ತೆಗೆ ಇರುವ ಲಕ್ಷಣಗಳು:
1. ಎಲಿಸಾ (ELISA) (Enzyme Linked Immunosorbent Assay)
2. ಪಿಸಿಆರ್ ಪಾಲಿಮರೇಸ್ ಚೈನ್ ರಿಯಾಕ್ಷನ್ (Polymer Chain Reaction)
3. ವೆಸ್ಟರ್ನ್ ಬ್ಲಾಟ್

HIV

ಹೆಚ್‍ಐವಿ ವೈರಾಣವು ಒಬ್ಬ ವ್ಯಕ್ತಿಯ ದೇಹವನ್ನು ಪ್ರವೇಶಿಸಿದರೂ ದೀರ್ಘ ಸಮಯ ಯಾವುದೇ ರೋಗಲಕ್ಷಣವನ್ನು ಉಂಟು ಮಾಡದೇ ಇರಬಹುದು. ರೋಗವು ಪಕ್ವಗೊಳ್ಳುವ ಅವಧಿಯಲ್ಲಿ ಸೋಂಕು ತಗುಲಿದ ವ್ಯಕ್ತಿ ಸಾಮನ್ಯನಂತೆಯೇ ಇರುತ್ತಾನೆ. ಈ ಅವಧಿ ಮಕ್ಕಳಲ್ಲಿ 18 ರಿಂದ 24 ತಿಂಗಳಿದ್ದರೆ ಪ್ರೌಢವ್ಯಕ್ತಿಯಲ್ಲಿ 8 ರಿಂದ 10 ವರ್ಷಗಳಷ್ಟಿರಬಹುದು. ಒಂದು ತಿಳುವಳಿಕೆಯ ಪ್ರಕಾರ ಸೋಂಕು ತಗುಲಿದ ವ್ಯಕ್ತಿಗಳಲ್ಲಿ ಪ್ರತಿಶತ ಸುಮಾರು 50 ಮಂದಿಯಲ್ಲಿ ಏಡ್ಸ್ ರೋಗ ಸುಮಾರು ಹತ್ತು ವರ್ಷಗಳಲ್ಲಿ ಕಾಣಿಸಿಕೊಳ್ಳುತ್ತದೆ.

ಏಡ್ಸ್ ಒಂದು ಸಾಂಕ್ರಾಮಿಕ ರೋಗವಾದರೂ ಅದು ಗಾಳಿ, ಆಹಾರಗಳ ಮೂಲಕ ಹರಡುವುದಿಲ್ಲ. ನೆಗಡಿ. ಇನ್ ಫ್ಲೂಯೆಂಜ್, ದಡಾರ ಮುಂತಾದ ರೋಗಗಳಂತೆ ಇದು ಸಾಂಕ್ರಾಮಿಕವಾಗಿ ಹರಡುವುದಿಲ್ಲ. ಇಂಥ ಒಂದು ಭಯಾನಕ ರೋಗಕ್ಕೆ ಯಾವುದೇ ರೀತಿಯ ಔಷಧವನ್ನು ಕಂಡುಹಿಡಿದಿಲ್ಲ. ಆದ್ರೆ ರೋಗ ಹರಡುವ ವೇಗವನ್ನು ಕುಂಠಿತಗೊಳಿಸುವ ಹಾಗೂ ರೋಗಿಯಲ್ಲಿ ಕಾಣಿಸಿಕೊಳ್ಳುವ ತಡೆಯುವ ಪ್ರಯತ್ನಗಳು ನಿರಂತರವಾಗಿ ಸಾಗಿವೆ.

ಏಡ್ಸ್ ಈ ರೀತಿ ಹರಡಲ್ಲ:
1. ಏಡ್ಸ್ ರೋಗಿ ಜೊತೆ ಹಸ್ತಲಾಘವ ಮಾಡುವ ಮೂಲಕ
2. ಆಲಿಂಗನ ಮಾಡಿಕೊಳ್ಳುವ ಮೂಲಕ
3. ಏಡ್ಸ್ ರೋಗಿ ಬಳಸಿದ ತಟ್ಟೆ, ಲೋಟ ಪಾತ್ರೆಗಳನ್ನು ಬಳಸುವುದರಿಂದ
4. ರೋಗಿಯ ಜೊತೆ ಆಹಾರ ಸೇವಿಸುವುದರಿಂದ
5. ಸಾರ್ವಜನಿಕ ಶೌಚಾಲಯಗಳನ್ನು, ಪಾರ್ಕ್, ಈಜುಕೊಳಗಳನ್ನು ಬಳಸುವುದರಿಂದ
6. ಸೊಳ್ಳೆ ಅಥವಾ ಇತರ ಕೀಟಗಳ ಕಡಿತದಿಂದ

naco

ಎಚ್ಚರಿಕೆಯ ಕ್ರಮಗಳು
1. ಸೋಂಕು ತಗುಲಿದ ವ್ಯಕ್ತಿಯ ಜೊತೆಗೆ ಲೈಂಗಿಕ ಸಂಪರ್ಕ ಹೊಂದುವುದನ್ನು ಸಂಪೂರ್ಣವಾಗಿ ತಡೆಯುವುದು.
2. ಏಡ್ಸ್ ರೋಗಿ ಬಳಸಿದ ಸೂಜಿ ಸಿರಿಂಜ್ ಗಳನ್ನು ಬಳಸದೇ ಇರುವುದು
3. ರಕ್ತದಾನ ಮಾಡುವುದಕ್ಕೆ ಇಲ್ಲವೇ ಪಡೆಯುವುದಕ್ಕೆ ಮುಂಚೆ ಹೆಚ್‍ಐವಿ ಸೋಂಕು ಇಲ್ಲದಿರುವುದನ್ನು ಖಚಿತ ಪಡಿಸಿಕೊಳ್ಳುವುದು.
4. ಹೆಚ್‍ಐವಿ ಸೋಂಕು ತಗುಲಿರುವ ತಾಯಿಯ ತನ್ನ ಮಗುವಿಗೆ ಮೊಲೆಹಾಲು ನೀಡುವುದನ್ನು ತಡೆಯುವುದು.
5. ಮಾದಕ ದ್ರವ್ಯ ವ್ಯಸನಿಯಾಗದಂತೆ ವ್ಯಕ್ತಿಗಳನ್ನು ತಡೆಯುವುದು. ಅಂಥವರಿಗೆ ದ್ರವ್ಯಸೇವನೆಯಯ ಹಂತದಲ್ಲಿ ಸೋಂಕು ತಗುಲುವ ಸಾಧ್ಯತೆಗಳಿರುತ್ತವೆ.

ಏಡ್ಸ್ ಸೋಂಕಿತರಿಗೆ ಇರುವ ಯೋಜನೆಗಳು:
ಅಂತ್ಯೋದಯ ಯೋಜನೆ, ರಾಜೀವ್ ಗಾಂಧಿ ವಸತಿ ಮನೆ ನಿರ್ಮಾಣ, ಉಚಿತ ಪರೀಕ್ಷೆ, ಕಡ್ಡಾಯ ಶಿಕ್ಷಣ, ವಿದ್ಯಾರ್ಥಿ ವೇತನ, ಧನಶ್ರೀ, ಮೈತ್ರಿ, ಚೇತನ ಯೋಜನೆ, ಉಚಿತ ಕಾನೂನು ಸೇವೆ, ಕಾಬಾ ಯೋಜನೆಗಳನ್ನು ಸರ್ಕಾರ ಅನುಷ್ಠಾನಗೊಳಿಸಿದೆ. ಸೋಂಕಿತ ಮಕ್ಕಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಆರೋಗ್ಯ ಆರೈಕೆಗಾಗಿ ಮಾಸಿಕ 650 ರೂ. ಮತ್ತು 750 ರೂ. ನೀಡಲಾಗುತ್ತಿದೆ.

10

ಏಡ್ಸ್ ಬಗ್ಗೆ ಅರಿವು ಮೂಡಿಸಲು ಭಾರತೀಯ ರೈಲ್ವೆಯು ರೆಡ್ ರಿಬ್ಬನ್ ಎಕ್ಸ್ ಪ್ರೆಸ್ ಎಂಬ ಹೊಸ ರೈಲನ್ನು 2007 ಡಿಸೆಂಬರ್ 1ರಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಉದ್ಘಾಟಿಸಿದ್ದರು. 2017 ಡಿಸೆಂಬರ್ 2ರಂದು ಭಾರತ ಸರ್ಕಾರ ಆರೋಗ್ಯ ಮತ್ತು ಕಲ್ಯಾಣ ಕುಟುಂಬ ಕಲ್ಯಾಣ ಇಲಾಖೆ 2001-2014ರ ಅವಧಿಯ ರಾಷ್ಟ್ರೀಯ ಕಾರ್ಯತಂತ್ರ ಯೋಜನೆ ಮತ್ತು ಸಂಪರ್ಕ ಅಭಿಯಾನವನ್ನು ಡಿಸೆಂಬರ್ 1ರ ಏಡ್ಸ್ ದಿನಾಚರಣೆ ಅಂಗವಾಗಿ ಉದ್ಘಾಟಿಸಿದೆ. 2030ರೊಳಗೆ ಸಾಂಕ್ರಾಮಿಕ ರೋಗ ಏಡ್ಸ್ ನ್ನು ಸಂಪೂರ್ಣ ಹತೋಟಿಗೆ ತರುವ ಉದ್ದೇಶದಿಂದ 90:90:90 ಕಾರ್ಯತಂತ್ರವನ್ನು ಕೇಂದ್ರ ಸರ್ಕಾರ ರೂಪಿಸಿದೆ. ಇದರ ಅರ್ಥ ಶೇ.90 ದೇಶದ ಜನರಿಗೆ ಏಡ್ಸ್ ರೋಗದ ಬಗ್ಗೆ ಅರಿವು ಕಾರ್ಯಕ್ರಮಗಳನ್ನು ಮೂಡಿಸುವುದು. ಶೇ.90 ರಷ್ಟು ಹೆಚ್‍ಐವಿ ರೋಗದ ಸ್ಥಿತಿಯನ್ನು ಶೀಘ್ರವಾಗಿ ಗುರುತಿಸಿ ಎ.ಆರ್.ಟಿ. ಚಿಕಿತ್ಸೆ ನೀಡುವುದು ಮತ್ತು ಶೇ.90 ರಷ್ಟು ಜನರಿಗೆ ಎಆರ್‍ಟಿ (Antietroviral Theraphy) ಚಿಕಿತ್ಸೆ ನೀಡುವುದು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv 

TAGGED:diseasehealthPublic TVWorld AIDS Dayಆರೋಗ್ಯಪಬ್ಲಿಕ್ ಟಿವಿರೋಗವಿಶ್ವ ಏಡ್ಸ್ ದಿನ
Share This Article
Facebook Whatsapp Whatsapp Telegram

You Might Also Like

Huge tree falls on tourists car in Kallatthagiri
Chikkamagaluru

ಕಲ್ಲತ್ತಗಿರಿ | ಪ್ರವಾಸಿಗರ ಕಾರಿನ ಮೇಲೆ ಬಿದ್ದ ಬೃಹತ್ ಮರ – ತಪ್ಪಿದ ಅನಾಹುತ

Public TV
By Public TV
4 minutes ago
UT Khadar in Malaysia 1
Latest

ಅಧ್ಯಯನ ಪ್ರವಾಸ: ಮಲೇಶಿಯಾದಲ್ಲಿ ಸಭಾಧ್ಯಕ್ಷ ಯು.ಟಿ.ಖಾದರ್

Public TV
By Public TV
18 minutes ago
G 7 Summit Leaders
Latest

ಇರಾನ್‌ ಜೊತೆ ಸಂಘರ್ಷ; ಇಸ್ರೇಲ್‌ ಬೆಂಬಲಕ್ಕೆ ನಿಂತ G-7 ನಾಯಕರು

Public TV
By Public TV
24 minutes ago
Bike taxi Seize
Bengaluru City

ಬೈಕ್ ಟ್ಯಾಕ್ಸಿಗೆ ಬ್ರೇಕ್ – ಒಂದೇ ದಿನದಲ್ಲಿ 103 ವಾಹನಗಳು ಸೀಜ್

Public TV
By Public TV
30 minutes ago
D K Shivakumar 2
Latest

ಇಡಿ ತನಿಖೆಗೆ ನನ್ನ ಸಹೋದರ ಡಿ.ಕೆ ಸುರೇಶ್ ಸಹಕಾರ ಕೊಡ್ತಾರೆ: ಡಿಕೆಶಿ

Public TV
By Public TV
31 minutes ago
Samyuktha Menon
Cinema

ಪುರಿ ಜಗನ್ನಾಥ್ ನಿರ್ದೇಶನದ ಚಿತ್ರಕ್ಕೆ ಸಂಯುಕ್ತ ಮೆನನ್ ಎಂಟ್ರಿ

Public TV
By Public TV
39 minutes ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?