ಚಿಕ್ಕೋಡಿ(ಬೆಳಗಾವಿ): ಮೊನ್ನೆ ಮೊನ್ನೆಯಷ್ಟೆ ಕರಕುಶಲ ಅಭಿವೃದ್ಧಿ ನಿಮಗಮದ ಅಧ್ಯಕ್ಷ ಸ್ಥಾನಕ್ಕೇರಿದ ಮಾರುತಿ ಅಷ್ಟಗಿಯವರ ಕೈ ಬಲಪಡಿಸಬೇಕು. ಅವರಿಗೆ ಶಕ್ತಿ ತುಂಬಬೇಕು ಅಂತ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಪ್ರತಿನಿಧಿಸೋ ಕ್ಷೇತ್ರ ಯಮಕನಮರಡಿಯಲ್ಲಿ ಬಿಜೆಪಿ ನಾಯಕರು ಒಗ್ಗಟ್ಟಿನ ಪ್ರದರ್ಶನ ಮಾಡಿದ್ದರು.
ಅದರ ಮಾರನೇ ದಿನವೇ ಯಮಕನಮರಡಿಯಲ್ಲಿ ಇನ್ನೋರ್ವ ಟಿಕೆಟ್ ಆಕಾಂಕ್ಷಿ ಬಸವರಾಜ್ ಹುಂದ್ರಿ ಅದ್ದೂರಿಯಾಗಿ ತನ್ನ ಹುಟ್ಟುಹಬ್ಬ ಆಚರಿಸಿಕೊಂಡು ನಾನೂ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂದು ಸಂದೇಶ ರವಾನಿಸಿದ್ದಾರೆ. ಇದನ್ನೂ ಓದಿ: ತಾಕತ್ತಿದ್ರೆ ಅಂಬಾರಿ ದಿನ ಸಿದ್ದರಾಮಯ್ಯ ನಾನ್ವೆಜ್ ತಿಂದ ವೀಡಿಯೋ ಇದ್ರೆ ರಿಲೀಸ್ ಮಾಡು: ಸೀತಾರಾಂ ಸವಾಲ್
ಮಾರುತಿ ಅಷ್ಟಗಿ ಪರವಾಗಿ ಆಯೋಜನೆ ಮಾಡಲಾದ ಅಭಿನಂದನಾ ಸಮಾವೇಶ ಸಮಾರಂಭದಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿದ್ದರು. ಈ ಬೆನ್ನಲ್ಲೆ ಈಗ ಯಮಕನಮರಡಿ ಕ್ಷೇತ್ರದಲ್ಲಿ ಬಿಜೆಪಿ ಎಸ್ ಟಿ ಮೋರ್ಚಾ ಜಿಲ್ಲಾಧ್ಯಕ್ಷ ಬಸವರಾಜ್ ಹುಂದ್ರಿ ಅವರು ಹುಟ್ಟುಹಬ್ಬದ ಕಾರ್ಯಕ್ರಮ ಆಯೋಜನೆ ಮಾಡಿ ಬಿಜೆಪಿ ಪಕ್ಷಕ್ಕೂ ಹಾಗೂ ಪಕ್ಷದ ವರಿಷ್ಠರಿಗೂ ಸಹ ತಮ್ಮ ಬೆಂಬಲ, ತಮ್ಮ ಶಕ್ತಿಯ ಬಗ್ಗೆ ಅರಿವು ಮೂಡಿಸುವ ಕೆಲಸ ಬಸವರಾಜ್ ಹುಂದ್ರಿ ಮಾಡಿದ್ದಾರೆ.
ಮಾರುತಿ ಅಷ್ಟಗಿವರೊಂದಿಗೆ ಈ ಬಾರಿ ಬಿಜೆಪಿ ಟಿಕೆಟ್ಗೆ ಬಸವರಾಜ್ ಅವರೂ ಆಕಾಂಕ್ಷಿ ಅಂತ ಅವರ ಬೆಂಬಲಿಗರು ಹೇಳುತ್ತಿದ್ದಾರೆ. ಈ ಬಾರಿ ಬಸವರಾಜ್ ಹುಂದ್ರಿಯವರಿಗೂ ಸಹ ಟಿಕೇಟ್ ನೀಡಿ ಅಂತ ಕೇಳ್ತಿದ್ದಾರೆ.