ಮಾಂಜ್ರಾನದಿ ದಡದಲ್ಲಿ ಎದುರಾದ ಪ್ರವಾಹ ಸ್ಥಿತಿ – ಸಾವಿರಾರು ಎಕರೆ ಬೆಳೆ ಸರ್ವನಾಶ

Public TV
1 Min Read
bidar flood 3

ಬೀದರ್: ಮಹಾರಾಷ್ಟ್ರದ ಧನ್ನೆಗಾಂವ್ ಜಲಾಶಯದಿಂದ 20 ರಿಂದ 30 ಸಾವಿರ ಕ್ಯೂಸೆಕ್ ನೀರು ಮಾಂಜ್ರಾನದಿಗೆ ಬಿಟ್ಟಿರುವ ಕಾರಣ ನದಿ ಉಕ್ಕಿ ಹರಿಯುತ್ತಿದೆ.

bidar flood 1

ಮಾಂಜ್ರಾನದಿ ದಡದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ನದಿ ದಡದಲ್ಲಿದ್ದ ಜಮೀನುಗಳಿಗೆ ನೀರು ನುಗ್ಗಿ ಸಾವಿರಾರು ಎಕರೆಯಲ್ಲಿ ಬೆಳೆದ್ದ ಬೆಳೆ ನಾಶವಾಗಿದೆ. ಸೋಯಾ, ಉದ್ದು, ಹೆಸರು, ತೊಗರಿ, ಕಬ್ಬು ಸೇರಿದಂತೆ ವಿವಿಧ ಬೆಳೆಗಳು ಸರ್ವನಾಶವಾಗಿದೆ. ಇದನ್ನೂ ಓದಿ:  ಕರಾವಳಿ, ಉತ್ತರ ಒಳನಾಡಿನಲ್ಲಿ ಅ.3ರವರೆಗೆ ಭಾರೀ ಮಳೆ

bidar flood 6

ಧನ್ನೆಗಾಂವ್ ಜಲಾಶಯದಿಂದ ನೀರು ಬಿಟ್ಟ ಪರಿಣಾಮದ ಜೊತೆಗೆ ಗುಲಾಬ್ ಚಂಡಮಾರುತ ಹಾಗೂ ಕಾರಂಜಾ ಜಲಾಶಯದಿಂದ ನೀರು ಬಿಡುಗಡೆಯಾಗಿದೆ. ಈ ಕಾರಣ ಮಾಂಜ್ರಾನದಿ ದಡದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿ ಸಾವಿರಾರು ಎಕರೆ ಬೆಳೆಗಳು ನಾಶವಾಗಿದೆ. ಇದನ್ನೂ ಓದಿ:  ಅನೈತಿಕ ಸರ್ಕಾರದಲ್ಲಿ ನೀವು ಪಾಪದ ನೀರಾವರಿ ಮಂತ್ರಿ: ಕಾರಜೋಳ ವಿರುದ್ಧ ಎಂಬಿಪಿ ಕಿಡಿ

bidar flood 2

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಕ್ಷೇತ್ರದಲ್ಲೆ ರೈತರು ಮಾಂಜ್ರಾದಿಂದ ಬೆಳೆ ಕಳೆದುಕೊಂಡು ಕಂಗಾಲಾಗಿ ಸಚಿವರು ಇನ್ನೂ ಸ್ಥಳಕ್ಕೆ ಬಾರದಕ್ಕೆ ಅವರ ವಿರುದ್ದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *