`ರೈತರ ಸಾಲಮನ್ನಾ ಮಾಡಿ, ಇಲ್ಲವಾದ್ರೆ ಬ್ಯಾಂಕ್ ಕಳ್ಳತನ ಮಾಡ್ತೀವಿ’

Public TV
1 Min Read
dwd

ಧಾರವಾಡ: ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ರೈತರ ಹೆಸರಲ್ಲಿ ಕಳ್ಳರಿಬ್ಬರು ಬ್ಯಾಂಕ್ ಕಳ್ಳತನ ಮಾಡಲು ಯತ್ನಿಸಿದ ಘಟನೆ ನಡೆದಿದೆ.

ನವಲಗುಂದ ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಕೀಲಿಯನ್ನು ಮುರಿದು ಬ್ಯಾಂಕ್ ಒಳಗಡೆ ನುಗ್ಗಲು ಯತ್ನಿಸಿದ್ದಾರೆ. ಈ ವೇಳೆ ರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸರನ್ನು ಕಂಡು ಭಯಭೀತರಾಗಿ ಕಾಲ್ಕಿತ್ತಿದ್ದಾರೆ.

31dwd bank dhamki 5

ಬ್ಯಾಂಕ್ ಮುಂಭಾಗದಲ್ಲಿ ಎರಡು ಬ್ಯಾಗ್‍ಗಳು ಪತ್ತೆಯಾಗಿವೆ. ಬ್ಯಾಗ್‍ನಲ್ಲಿ ಸುತ್ತಿಗೆ ಹಾಗೂ ಒಂದು ಭಿತ್ತಿಪತ್ರ ದೊರಕಿದ್ದು, ಅದರಲ್ಲಿ ರೈತರ ಸಾಲಮನ್ನಾ ಎಲ್ಲಿವರೆಗೂ ಮಾಡಲ್ಲ, ಅಲ್ಲಿಯವರೆಗೂ ನಾವು ಕಳ್ಳತನ ಮಾಡ್ತೀವಿ ಎಂದು ಬರೆಯಲಾಗಿದೆ.

31dwd bank dhamki 1

ಬ್ಯಾಂಕ್ ಮುಂಭಾಗದ ಒಂದು ಸಿಸಿಟಿವಿಯನ್ನು ಕದ್ದಿದ್ದು, ಇನ್ನೊಂದನ್ನು ಮುರಿದು ಹೋಗಿದ್ದಾರೆ. ಕಳ್ಳರು ರೈತರ ಹೆಸರಿನಲ್ಲಿ ಕಳ್ಳತನ ಮಾಡಲು ಯತ್ನಿಸಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

ಈ ಸಂಬಂಧ ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

31dwd bank dhamki 2

31dwd bank dhamki 3

Share This Article
Leave a Comment

Leave a Reply

Your email address will not be published. Required fields are marked *