ಸಿಎಂ ಖುರ್ಚಿಗಾಗಿ ಸಿದ್ದರಾಮಯ್ಯ, ಪರಂ ನಡುವೆ ಕಿತ್ತಾಟ – ಸತ್ಯ ಬಿಚ್ಚಿಟ್ರು ಸಚಿವ ರಾಮಲಿಂಗಾ ರೆಡ್ಡಿ

Public TV
1 Min Read
SIDDU PARAM RAMALINGA COLLAGE

ಬೆಂಗಳೂರು: ಮುಖ್ಯಮಂತ್ರಿ ಕುರ್ಚಿಗಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ನಡುವೆ ನಿಜಕ್ಕೂ ಜಗಳ ಆಗುತ್ತಿದ್ದೆ. ಅವರಿಬ್ಬರ ನಡುವೆ ವೈಮನಸ್ಸಿದೆ. ಇದು ಸತ್ಯ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಪಬ್ಲಿಕ್ ಟಿವಿ ಸಂದರ್ಶನದಲ್ಲಿ ಮಾತಾಡಿದ ರಾಮಲಿಂಗಾರೆಡ್ಡಿ, ಸಿಎಂ ಕುರ್ಚಿ ವಿಚಾರದಲ್ಲಿ ಪರಮೇಶ್ವರ್‍ಗೆ ಅಸಮಾಧಾನ ಇದೆ ಎಂದು ಹೇಳಿದ್ರು.

SIDDU PARAM RAMALINGA 2

ಯಾರ ನಾಯಕತ್ವದಲ್ಲಿ ಚುನಾವಣೆ ನಡೆಯುತ್ತೋ ಅವರೇ ಸಿಎಂ ಆಗುತ್ತಾರೆ ಎಂದು ಹೇಳುತ್ತಾರೆ. ಆದರೆ ಪಕ್ಷದ ಹೈಕಮಾಂಡ್ ಯಾರನ್ನು ಸಿಎಂ ಮಾಡಬೇಕು ಅನ್ನೋದನ್ನು ತೀರ್ಮಾನಿಸುತ್ತೆ. ಆದರೆ ಸದ್ಯಕ್ಕಂತೂ ಸಣ್ಣಪುಟ್ಟ ಅಸಮಾಧಾನ ಇರೋದಂತೂ ಸತ್ಯ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ರು.

ಈ ಎಕ್ಸ್‍ಕ್ಲೂಸೀವ್ ಸಂದರ್ಶನ ಇವತ್ತು ಸಂಜೆ 4 ಗಂಟೆಗೆ ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾಗಲಿದೆ.

Share This Article
Leave a Comment

Leave a Reply

Your email address will not be published. Required fields are marked *