‘ಜಾತಿಯಲ್ಲಿ ಹಿಂದುಳಿಯುದಲ್ಲ.. ಜೀವನದಲ್ಲಿ ಮುಂದೆ ಬರದಂತೆ ನೋಡಿಕೊಳ್ಳಬೇಕು.. ಇಲ್ಲಿ ನ್ಯಾಯ ನೀತಿ ಧರ್ಮಕ್ಕೆ ಬೆಲೆ ಇಲ್ಲ…’ ಅವ್ನಾ ಉಸಿರಾಡೋಕೆ ಬಿಟ್ಟರೆ ನಮಗೇ ತೊಂದರೆ..’ಧರ್ಮ ಉಳಿಬೇಕಂದ್ರೆ ..ನಿನ್ನ ಜಾತಿ ಸಾಯಬೇಕು..’ ಹೀಗೆ ಹಳ್ಳಿಯ ಹಿನ್ನೆಲೆಯಲ್ಲಿ ರಗಡ್ ಲುಕ್ನಲ್ಲಿರುವ ‘ಧರ್ಮಂ’ ಚಿತ್ರದ ಖಡಕ್ ಸಂಭಾಷಣೆ ಇರುವ ಟ್ರೈಲರ್ನಲ್ಲಿ ಶೋಷಣೆ, ದಬ್ಬಾಳಿಕೆ, ಸೇರಿದಂತೆ ಆ್ಯಕ್ಷನ್ ಸನ್ನಿವೇಶ ಹದಗೊಳಿಸಿ ಕಟ್ಟಿಕೊಡಲಾಗಿದೆ.

ಧರ್ಮಂ ಚಿತ್ರದ ಟ್ರೈಲರ್ ಅನ್ನು ನಿರ್ದೇಶಕ ತರುಣ್ ಸುಧೀರ್ ಬಿಡುಗಡೆ ಮಾಡಿ ಶುಭ ಹಾರೈಸಿದರು. ಈ ವೇಳೆ ಚಿತ್ರದ ಹಾಡುಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಮಾತನಾಡಿ ಪವರ್ ಫುಲ್ ಶೀರ್ಷಿಕೆ, ಡ್ಯುಯೆಟ್ ಹಾಡು ನೋಡಿ ಚಿತ್ರದ ಬಗ್ಗೆ ಆಕರ್ಷಿತನಾಗಿದ್ದೆ. ಚಿತ್ರದ ಛಾಯಾಗ್ರಾಹಕನಿಗೆ ಒಳ್ಳೆಯ ಭವಿಷ್ಯವಿದೆ. ಟ್ರೈಲರ್ ನೋಡಿದಾಗಲೇ ಚಿತ್ರವನ್ನು ಹಿಡಿದು ಕೂಡಿಸಲಿದೆ. 80ರ ದಶಕದ ಚಿತ್ರವನ್ನು ಅತ್ಯುತ್ತಮವಾಗಿ ಕಟ್ಟಿಕೊಟ್ಟಿದ್ದೀರಿ.. ಚಿತ್ರಕ್ಕೆ ನೀವೂ ಒಬ್ಬ ನಾಯಕ. ನಾಯಕಿ ವಿರಾಣಿಕ ಶೆಟ್ಟಿ ಮತ್ತು ನಾಯಕ ಸಾಯಿ ಶಶಿಕುಮಾರ್ ಉತ್ತಮವಾಗಿ ನಟಿಸಿದ್ದಾರೆ. ಧರ್ಮಂ ಚಿತ್ರದ ವಿಷಯವನ್ನು ಯಾವುದೇ ಪೂರ್ವಾಗ್ರಹ ಪೀಡಿತವಿಲ್ಲದೆ ಚಿತ್ರವನ್ನು ತೆರೆಗೆ ಕಟ್ಟಿಕೊಡಬೇಕು. ನಾವೂ ಕೂಡ ಕಾಟೇರ ಚಿತ್ರವನ್ನು ಇದೇ ರೀತಿ ಮಾಡಿದ್ದೆವು ಒಳ್ಳೆಯದಾಗಲಿ ಎಂದು ಹಾರೈಸಿದರು.ಇದನ್ನೂ ಓದಿ: ರಿಷಾ ಪ್ರಕಾರ ಬಿಗ್ಬಾಸ್ ಟಾಪ್ 5 ಸ್ಪರ್ಧಿಗಳು ಇವರು!
ನಿರ್ದೇಶಕ ನಾಗಮುಖ ಮಾತನಾಡಿ ತಂದೆ, ತಾಯಿ ಹಾಗೂ ನಿಕ್ ನೇಮ್ ಸೇರಿಸಿ ನಾಗಮುಖ ಅಂತ ಹೆಸರು ಇಟ್ಟುಕೊಂಡಿದ್ದೇನೆ. ನನ್ನ ಹೆಸರು ನಾಗರಾಜು. ಚಿತ್ರದಲ್ಲಿ ಜಾತಿ ಮತ್ತು ಹಿಂದು ಧರ್ಮದ ಹಿನ್ನೆಲೆಯಲ್ಲಿ ಚಿತ್ರ ಮಾಡಲಾಗಿದೆ. ಹಿಂದುತ್ವ ಉಳಿಬೇಕು ಎನ್ನುವುದು ನಮ್ಮ ಉದ್ದೇಶ .ಚಿತ್ರದ ಟ್ರೈಲರ್ ನಲ್ಲಿ ಕಠಿಣವಾದ ವಿಷಯವನ್ನು ತೆರೆಯ ಮೇಲೆ ತಂದಿದ್ದೇವೆ. ಈ ರೀತಿಯ ಕಥೆಗಳಿಗೆ ಪ್ರಮುಖ ವ್ಯಕ್ತಿಬೇಕಾಗಿತ್ತು ಹೀಗಾಗಿ ತರುಣ್ ಸುಧೀರ್ ಅವರ ಬಳಿ ಚಿತ್ರದ ಟ್ರೈಲರ್ ಬಿಡುಗಡೆ ಮಾಡಲಾಗಿದೆ ಎಂದರು. ಹಿಂದೂ ಧರ್ಮವನ್ನು ಎತ್ತಿ ಹಿಡಿಯುವ ಕೆಲಸ ಮಾಡಿದ್ದೇನೆ. ಮೇಲು ಕೀಳಿನಿಂದ ಧರ್ಮ ಹೇಗೆ ಸೊರಗುತ್ತಿದೆ. ಅದನ್ನು ಅಪವಿತ್ರ ಮಾಡದೆ ಧರ್ಮ ಕಾಪಾಡಬೇಕು ಎನ್ನುವುದು ಚಿತ್ರದ ಉದ್ದೇಶ.

ನಾಯಕ ಸಾಯಿ ಶಶಿಕುಮಾರ್ ಮಾತನಾಡಿ ಚಿತ್ರದಲ್ಲಿ ಕರಿಮುತ್ತು ಎನ್ನುವ ಪಾತ್ರ ಮಾಡಿದ್ದೇನೆ. ಜೀವನದ ಪ್ರಮುಖ ಚಿತ್ರ. ಇಡೀ ತಂಡಕ್ಕೆ ಧನ್ಯವಾದ ಎಂದಿದ್ದಾರೆ. ನಾಯಕಿ ವಿರಾಣಿಕ ಶೆಟ್ಟಿ ಮಾತನಾಡಿ ಚಿತ್ರದಲ್ಲಿ ನೀಲಾ ಎನ್ನುವ ಪಾತ್ರ ಮಾಡಿದ್ದೇನೆ. ಗಂಡಸರನ್ನು ಕಂಡರೆ ಕತ್ತೆತ್ತಿ ನೋಡದ ಹುಡುಗಿ ಪಾತ್ರ ಎಂದು ಹೇಳಿದರು. ಇನ್ನು ಧರ್ಮಂ ಸಿನಿಮಾಗೆ ನಿರ್ಮಾಪಕ ಡಾ. ಎಸ್ ಕೆ ರಾಮಕೃಷ್ಣ ಬಂಡವಾಳ ಹೂಡಿದ್ದಾರೆ. ಇನ್ನುಳಿದಂತೆ ಚಿತ್ರದಲ್ಲಿ ಅತಿದೊಡ್ಡ ತಾರಾಗಣವಿದೆ.ಇದನ್ನೂ ಓದಿ: ಪತಿ ವಿರುದ್ಧ ಕೇಸ್ ದಾಖಲಿಸಿ 50 ಕೋಟಿ ಪರಿಹಾರ ಕೇಳಿದ `ಶ್ರೀಮತಿ’ ನಟಿ!

