ವೈಟಿಪಿಎಸ್‍ನಲ್ಲಿ ಅವಘಡ- 30 ಅಡಿ ಆಳದಲ್ಲಿ ಮಣ್ಣು ಕುಸಿದು ಬಿದ್ದು ಕಾರ್ಮಿಕ ಗಂಭೀರ

Public TV
0 Min Read
RCR YTPS ACCIDENT

ರಾಯಚೂರು: ನಗರದ ವೈಟಿಪಿಎಸ್‍ನಲ್ಲಿ ಭೀಕರ ಅವಘಡವೊಂದು ಸಂಭವಿಸಿದ ಪರಿಣಾಮ ಕಾರ್ಮಿಕ ಗಂಭೀರವಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ರಾಯಚೂರಿನ ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ರೈಲ್ವೆ ಹಳಿಗಾಗಿ ಭೂಮಿ ಅಗೆಯುವಾಗ ಮಣ್ಣು ಕುಸಿದು ಬಿದ್ದುದರಿಂದ 30 ಅಡಿ ಆಳದಲ್ಲಿದ್ದ ಕಾರ್ಮಿಕ ಮಣ್ಣಿನಡಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾರೆ.

RCR YTPS

 

ಕೂಡಲೆ ಗಾಯಾಳು 25 ವರ್ಷದ ಕಾಂತರಾಜ್ ನನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದು, ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್ ಗೆ ರವಾನೆ ಮಾಡಲಾಗಿದೆ.

ಘಟನೆ ಸಂಬಂಧ ರಾಯಚೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *