ಮಂಗಳೂರು: ನಗರದಲ್ಲಿ ಮಳೆ ಕೊಂಚ ಕಡಿಮೆಯಾದರೂ ಕಡಲ್ಕೊರೆತ ಮಾತ್ರ ನಿಂತಿಲ್ಲ. ಭಾರೀ ಗಾತ್ರದ ಅಲೆಗಳ ಹೊಡೆತಕ್ಕೆ ರಸ್ತೆಯೇ ಕೊಚ್ಚಿಕೊಂಡು ಹೋದ ಪ್ರಸಂಗ ನಡೆದಿದೆ.
ಉಚ್ಚಿಲ, ಬಟ್ಟಪಾಡಿ ಹಾಗೂ ಉಳ್ಳಾಲ ಕಡಲ ತೀರದಲ್ಲಿ ಅಲೆಗಳ ಅಬ್ಬರ ಜೋರಾಗಿದೆ. ಬಟ್ಟಪಾಡಿ ಕಡಲ ತೀರದಲ್ಲಿ ಅಲೆಗಳ ಅಬ್ಬರಕ್ಕೆ ರಸ್ತೆ ಸಮುದ್ರಪಾಲಾಗಿದೆ. ದಡದಲ್ಲಿನ ತೆಂಗಿನ ಮರಗಳು ಧಾರಾಶಾಹಿಯಾಗುತ್ತಿವೆ. ಸದ್ಯ ರಸ್ತೆ ಸಂಪರ್ಕವೇ ಇಲ್ಲದೆ ಬಟ್ಟಪಾಡಿ ಗ್ರಾಮ ದ್ವೀಪದಂತಾಗಿದೆ.
ರಸ್ತೆ ಸಂಪರ್ಕವಿಲ್ಲದೆ ಸುಮಾರು 30ಕ್ಕೂ ಅಧಿಕ ಮನೆಗಳ ನಿವಾಸಿಗಳು ಪರದಾಡುತ್ತಿದ್ದಾರೆ. ಸಮುದ್ರ ಸಮೀಪದ ಮನೆಗಳಿಗೆ ಭಾರೀ ಗಾತ್ರದ ಅಲೆಗಳು ಬಡಿಯುತ್ತಿವೆ. ಇದನ್ನೂ ಓದಿ: ಮದ್ಯದ ದೊರೆ ವಿಜಯ್ ಮಲ್ಯಗೆ 4 ತಿಂಗಳು ಜೈಲು: ಸುಪ್ರೀಂ ಕೋರ್ಟ್ ತೀರ್ಪು