ಬೆಂಗಳೂರು: ಬಿರುಬೇಸಿಗೆಯ ಮಧ್ಯೆ ಅಕಾಲಿಕವಾಗಿ ರಾಜ್ಯದ ಹಲವೆಡೆ ಮಳೆಯಾಗಿದೆ. ಹಾಸನ, ಚಿಕ್ಕಬಳ್ಳಾಪುರ, ನೆಲಮಂಗಲ ಹಾಗೂ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಸುತ್ತಮುತ್ತಲಿನ ಪ್ರದೇಶದಲ್ಲಿ ಗುಡುಗು ಮಿಂಚು ಸಹಿತ ಇಂದು ಮಳೆಯಾಗಿದೆ.
ಜೋರಾದ ಗಾಳಿ ಬೀಸಿ ಜೈನ ಸಮಾವೇಶದ ಪಂಚಕಲ್ಯಾಣ ಪ್ರತಿಷ್ಟಾನ ಮಹಾಮಹೋತ್ಸವ ಕಾರ್ಯಕ್ರಮದ ಊಟದ ಆವರಣದ ಪೆಂಡಾಲ್ ಬಿದ್ದು ಮೂವರು ಗಾಯಗೊಂಡ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಅರಟಾಳ ಗ್ರಾಮದಲ್ಲಿ ನಡೆದಿದೆ.
ಬಿಸಿಲಿನಿಂದ ಕಂಗೆಟ್ಟಿದ್ದ ಜನ ಮಳೆಯಿಂದ ಕೂಲ್ ಆಗಿದ್ದಾರೆ. ಈ ಮಧ್ಯೆ, ತೀವ್ರ ಬರಗಾಲದ ನಡುವೆಯೂ ಸಹಕಾರ ಸಂಸ್ಥೆಗಳಿಂದ ರೈತರು ಪಡೆದಿದ್ದ ಶೇ.90ರಷ್ಟು ಸಾಲವನ್ನು ಮರುಪಾವತಿ ಮಾಡಿರುವುದಾಗಿ ತಿಳಿದುಬಂದಿದೆ.