ಬೈಕ್‍ಗೆ ಡಿಕ್ಕಿ ಹೊಡೆದ ಶಾಸಕರ ಕಾರು-ಅಪಘಾತದ ಬಳಿಕ ಕಾರ್ ನಿಲ್ಲಿಸದೇ ಹೋದ ಶಾಸಕ

Public TV
0 Min Read
vlcsnap 2017 08 27 08h14m20s351

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಕಬ್ಬಿಣ ಸೇತುವೆ ಬಳಿ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಬೈಕ್‍ಗೆ ಡಿಕ್ಕಿ ಹೊಡೆದು ಕಾರು ನಿಲ್ಲಿಸದೇ ತಮ್ಮ ಅಧಿಕಾರದ ದರ್ಪ ಮೆರೆದಿದ್ದಾರೆ.

vlcsnap 2017 08 27 08h15m30s325

ಜನರು ಕಾಶಪ್ಪನವರ ಕಾರನ್ನು ಬೆನ್ನತ್ತಿ, ಬಿಳುಗುಳದ ಬಳಿ ಕಾರಿಗೆ ಮುತ್ತಿಗೆ ಹಾಕಿ ಶಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಪಘಾತದ ಬಳಿಕ ಗಾಯಗೊಂಡಿದ್ದ ಯುವಕನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸದ್ಯ ಯುವಕ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.

CKM KASHAPPANAVAR AV 1

Share This Article
Leave a Comment

Leave a Reply

Your email address will not be published. Required fields are marked *