ರಾಜ್ಯದಲ್ಲೇ ಅತಿ ಕಡಿಮೆ ಉಷ್ಣಾಂಶ ಬೀದರ್‌ನಲ್ಲಿ ದಾಖಲು – ಕೊರೆಯುವ ಚಳಿಗೆ ಜನರು ಗಡಗಡ

Public TV
1 Min Read
WEATHER

ಬೀದರ್: ರಾಜ್ಯದಲ್ಲೇ (Karnataka State) ಗಡಿ ಜಿಲ್ಲೆ ಬೀದರ್‌ನಲ್ಲಿ (Bidar) ಅತಿ ಕಡಿಮೆ ಉಷ್ಣಾಂಶ ದಾಖಲಾಗಿದ್ದು, ಕೊರೆಯುವ ಚಳಿಗೆ ಗಡಿ ಜಿಲ್ಲೆಯ ಜನರು ಗಡಗಡ ನಡಗುವಂತಾಗಿದೆ. ಸೋಮವಾರ 5.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾದ್ದರೇ, ಮಂಗಳವಾರ 7.5 ಡಿಗ್ರಿ ಹಾಗೂ ಬುಧವಾರ 7 ಡಿಗ್ರಿ ಅತಿ ಕಡಿಮೆ ಉಷ್ಣಾಂಶ ದಾಖಲಾಗಿದ್ದು, ಮನೆಯಿಂದ ಹೊರಗೆ ಬರಲು ಜನರು ಹಿಂದೇಟು ಹಾಕುತ್ತಿದ್ದಾರೆ.

ವಾಕಿಂಗ್, ಯೋಗ, ತರಕಾರಿ, ಹಾಲು ತರಲು ಸೇರಿದಂತೆ ಹಲವು ಕೆಲಸಗಳಿಗೆ ಬೆಳಗ್ಗೆ ಮನೆಯಿಂದ ಆಚೆ ಬರುತ್ತಿದ್ದ ಜನರು, ಇದೀಗ ಮನೆಯಿಂದ ಹೊರಗೆ ಬರಲು ರಣ ಚಳಿಗೆ ಭಯ ಬೀಳುತ್ತಿದ್ದಾರೆ. ಜನರು ಚಳಿಯಿಂದ ರಕ್ಷಣೆ ಪಡೆಯಲು ಸ್ಟೇಟರ್, ಟೋಪಿ, ಮಪ್ಲರ್ ಮೊರೆ ಹೋಗುತ್ತಿದ್ದಾರೆ. ಇದನ್ನೂ ಓದಿ: ಪತ್ನಿ, ಮಗನ ಸಾವಿಗೆ ಕಾರಣರಾದವ್ರ ವಿರುದ್ಧ ಕ್ರಮಕ್ಕೆ ಲೋಹಿತ್ ದೂರು- ಎಫ್‍ಐಆರ್

cold weather

ರಣ ಚಳಿಗೆ ಹೃದಯಾಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ವೈದ್ಯಾಧಿಕಾರಿಗಳು ಶಾಕಿಂಗ್ ಮಾಹಿತಿ ನೀಡುತ್ತಿರುವ ಹಿನ್ನೆಲೆಯಲ್ಲಿ ವಾಕಿಂಗ್ ಸೇರಿದಂತೆ ಇನ್ನಿತರ ಕೆಲಸಗಳಿಗೆ ಭಯದಲ್ಲಿ ಬೆರಳೆಣಿಕೆಯಷ್ಟು ಜನ ಮಾತ್ರವೇ ಮನೆಯಿಂದ ಹೊರಗೆ ಬರುತ್ತಿದ್ದಾರೆ. ಈ ಬಾರಿ ಅತಿ ಹೆಚ್ಚು ಚಳಿ ನಮ್ಮ ಬೀದರ್‌ನಲ್ಲಿ ಇದೆ. ಹೀಗಾಗಿ ಎಲ್ಲರೂ ಮನೆಯಿಂದ ಹೊರಗೆ ಬರಲು ಹೆದರುತ್ತಿದ್ದಾರೆ ಎಂದು ಜಿಲ್ಲೆಯ ಜನರು ಹೇಳುತ್ತಿದ್ದಾರೆ. ಇದನ್ನೂ ಓದಿ: ದಾವಣಗೆರೆಗೆ ಬಂದ ಮೃತ ತೇಜಸ್ವಿನಿ, ಪುತ್ರನ ಶವ- ತಾಯಿ, ಮಗುವಿನ ಪ್ರತ್ಯೇಕ ಅಂತ್ಯಸಂಸ್ಕಾರ

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *