ಪತ್ನಿ ಸಾವಿನ ಖಿನ್ನತೆಯಿಂದ ಪತಿಯೂ ಆತ್ಮಹತ್ಯೆ – ಮಕ್ಕಳು ಅನಾಥ

Public TV
1 Min Read
mys

ಮೈಸೂರು: ಪತ್ನಿ ಸಾವಿನಿಂದ ಖಿನ್ನತೆಗೆ ಒಳಗಾಗಿದ್ದ ಪತಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ತಾಲೂಕಿನ ಹಂಚ್ಯಾ ಗ್ರಾಮದಲ್ಲಿ ನಡೆದಿದೆ.

ಮಹೇಶ್ (45) ಆತ್ಮಹತ್ಯೆ ಮಾಡಿಕೊಂಡ ಪತಿ. 2 ತಿಂಗಳ ಹಿಂದೆಯಷ್ಟೇ ಮಹೇಶ್ ಪತ್ನಿ ಗಾಯಿತ್ರಿ, ರಕ್ತದೊತ್ತಡ (BP) ಮಾತ್ರೆ ಬದಲಿಗೆ ಬೇರೆ ಮತ್ರೆ ಸೇವಿಸಿ ಮೃತಪಟ್ಟಿದ್ದರು. ಪತ್ನಿ ಸಾವಿನ ಬಳಿಕ ಮಾನಸಿಕ ಖಿನ್ನತೆಗೆ ಜಾರಿದ್ದ ಪತಿ ಮಹೇಶ್, ಇದೀಗ ಕ್ರಿಮಿನಾಶಕ ಸೇವಿಸಿದ್ದಾರೆ. ಇದನ್ನೂ ಓದಿ: ದುಬಾರಿ ಗಿಫ್ಟ್ ನೀಡೋದಾಗಿ ಮಹಿಳೆಗೆ 5.10 ಲಕ್ಷ ರೂ. ವಂಚಿಸಿದ ಸ್ನೇಹಿತ!

sucide

ವಿಷ ಸೇವಿಸಿದ ಬಳಿಕ ಸಹೋದರನಿಗೆ ಕರೆ ಮಾಡಿ, ಪತ್ನಿ ಇಲ್ಲದೆ ಬದುಕಿರಲಾರೆ ಹಾಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿ ಸಾವಿಗೆ ಶರಣಾಗಿದ್ದಾರೆ. ಗಾಯಿತ್ರಿ – ಮಹೇಶ್ ದಂಪತಿಯ ಇಬ್ಬರು ಮಕ್ಕಳೂ ಈಗ ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಇದನ್ನೂ ಓದಿ: ಸಿಎಂ ನಿತೀಶ್ ಕುಮಾರ್ ಮೇಲೆ ದಾಳಿಗೆ ಯತ್ನಿಸಿದ ಯುವಕ

ಮೈಸೂರು ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *