ಚಪ್ಪರದ ದಿನವೇ ವರ ಶವವಾಗಿ ಪತ್ತೆ

Public TV
0 Min Read
KLR MURDER

ಕೋಲಾರ: ಚಪ್ಪರದ ದಿನವೇ ವರನೊಬ್ಬ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು, ಬಂಗಾರಪೇಟೆ ತಾಲೂಕು ಮರಲಹಳ್ಳಿ ರೈಲ್ವೇ ಟ್ರ್ಯಾಕ್ ಬಳಿ ಶವ ಪತ್ತೆಯಾಗಿದೆ.

KLR MURDER AV 4

ಮಾಲೂರು ತಾಲೂಕು ಜಂಗಾನಹಳ್ಳಿಯಲ್ಲಿ ನಾರಾಯಣಸ್ವಾಮಿ (28) ಮೃತದೇಹ ಪತ್ತೆಯಾಗಿದೆ. ಬಂಗಾರಪೇಟೆ ಪಟ್ಟಣದ ಎಸ್.ಎನ್.ಆರ್ ಕಲ್ಯಾಣ ಮಂಟಪದಲ್ಲಿ ಭಾನುವಾರ ಸಂಜೆ ಆರತಕ್ಷತೆ, ನಾಳೆ ಬೆಳಗ್ಗೆ ಮದುವೆ ನಡೆಯಬೇಕಿತ್ತು.

KLR MURDER AV 15

ಶನಿವಾರ ರಾತ್ರಿ ಫೋನ್ ಬಂದಿದೆ ಎಂದು ಮನೆಯಿಂದ ಹೊರ ಹೋಗಿದ್ದ ನಾರಾಯಣಸ್ವಾಮಿಯ ಇಂದು ಶವವಾಗಿ ಪತ್ತೆಯಾಗಿದ್ದಾರೆ. ಯಾರೋ ಕೊಲೆ ಮಾಡಿ ರೈಲ್ವೇ ಟ್ರ್ಯಾಕ್‍ನಲ್ಲಿ ಬಿಸಾಡಿರುವುದಾಗಿ ಸಂಬಂಧಿಕರು ಶಂಕೆ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಬಂಗಾರಪೇಟೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

KLR MURDER AV 5

Share This Article
Leave a Comment

Leave a Reply

Your email address will not be published. Required fields are marked *