ಮಡಿಕೇರಿ: ವೃದ್ದೆಯನ್ನು ಕೊಂದ ಕಾಡಾನೆಯ ಚಲನವಲನವನ್ನು ಕಂಡುಹಿಡಿದು, ಅರಣ್ಯ ಇಲಾಖೆಯ ಸಿಬ್ಬಂದಿ ಛಲ ಬಿಡದೇ ಕಾಡಿಗೆ ಅಟ್ಟಿರುವ ಘಟನೆ ಕೊಡಗು (Kodagu) ಜಿಲ್ಲೆಯ ವಿರಾಜಪೇಟೆ (Virajpete) ತಾಲ್ಲೂಕಿನ ಕೋಟೆ (Kote) ಗ್ರಾಮದಲ್ಲಿ ನಡೆದಿದೆ.
ಆ.30 ರಂದು ಬೆಳಗ್ಗೆ ಕಾಡಾನೆಯೊಂದು ವೃದ್ದೆಯ ಮೇಲೆ ದಾಳಿ ನಡೆಸಿತ್ತು. ಹತ್ಯೆ ಮಾಡಿದ ಕಾಡಾನೆಯನ್ನು ಪತ್ತೆ ಹಚ್ಚುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳು (Forest Department Officials) ಸಿಬ್ಬಂದಿಗೆ ಸೂಚನೆ ನೀಡಿದ್ದರು. ಸಿಬ್ಬಂದಿ ಕೈಗೆ ಸಿಗದೇ ಕಾಡಾನೆ ಸುತ್ತಾಡಿಸಿತ್ತು ಆದರೆ ಕಾರ್ಯಾಚರಣೆ ತಂಡದವರು ಛಲ ಬಿಡದೇ ಆನೆಯನ್ನು ಹುಡುಕಲು ಪ್ರಯತ್ನ ಪಟ್ಟಿದ್ದರು.ಇದನ್ನೂ ಓದಿ: ರಾಯಚೂರಲ್ಲಿ ಡೆತ್ನೋಟ್ ಬರೆದಿಟ್ಟು ಬಿಎ ವಿದ್ಯಾರ್ಥಿ ನೇಣಿಗೆ ಶರಣು
ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಆನೆ ಕಾರ್ಯಪಡೆ ಆರ್ಆರ್ಟಿ (RRT) ತಂಡದ ಸಿಬ್ಬಂದಿ ಬಾಡಗ ಬಾಣಂಗಾಲ ಹುಂಡಿ ಭಾಗದ ಕಾಫಿ ತೋಟಗಳಲ್ಲಿ ಕಾರ್ಯಾಚರಣೆ ನಡೆಸಿದರು. ಮಹಿಳೆಯನ್ನು ಹತ್ಯೆಗೈದ ಕಾಡಾನೆಯ ಚಲನವಲನವನ್ನು ಕಂಡುಹಿಡಿದು, ಕೊನೆಗೂ ಸಿಬ್ಬಂದಿ ಸೇರಿ ಚನ್ನಂಗಿ ಅರಣ್ಯಕ್ಕೆ ಅಟ್ಟಿದ್ದಾರೆ.
ಈ ಕಾಡಾನೆಯು ಕಳೆದ ಮೂರು ತಿಂಗಳಿನಿಂದ ಇದೇ ವಸತಿ ಭಾಗದ ಸುತ್ತಲೂ ಸುತ್ತಾಡುತ್ತಿದ್ದು, ಹಿಂಸೆ ನೀಡುತ್ತಿತ್ತು. ಕಾಡಾನೆಯು ಹಿಂದಿರುಗಿ ಬರಬಹುದು ಎಂಬ ಭಯದಲ್ಲಿ ಕೂಡಲೇ ಸ್ಥಳಾಂತರಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.ಇದನ್ನೂ ಓದಿ: ಪತಂಜಲಿ ಸಸ್ಯಾಹಾರಿ ಹರ್ಬಲ್ ಟೂತ್ ಪೌಡರ್ನಲ್ಲಿ ಮಾಂಸಾಹಾರಿ ಅಂಶ – ದೆಹಲಿ ಹೈಕೋರ್ಟ್ಗೆ ಅರ್ಜಿ